ಸಿದ್ದಾಪುರ(www.vknews.com) : ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದ್ರಸಾದಲ್ಲಿ ಆಯೋಜಿಸಲಾದ ಮುಅಲ್ಲಿಂ ಡೇ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಉಪ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ತಾದ್ ಎಂ. ಎಂ ಅಬ್ದುಲ್ಲ ಫೈಝಿ ಉದ್ಘಾಟಿಸಿದರು. ಅಧ್ಯಾಪಕರು ಸಮಾಜದ ಸಾಂಸ್ಕೃತಿಕ ಉನ್ನತಿಗಾಗಿ ಕಾರ್ಯನಿರ್ವಹಿಸುವವರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಬೆಲೆಕಟ್ಟಲಾಗದು ಎಂದು ಅವರು ಅಭಿಪ್ರಾಯ ಪಟ್ಟರು. ಸಂಗಮದಲ್ಲಿ ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ವೈ. ಎಂ ಉಮರ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅಗಲಿದ ವಾವಾಡ್ ಕುಞ್ಞಿಕೋಯ ಮುಸ್ಲಿಯಾರ್, ಪುರಙ್ಙ್ ಮೊಯ್ದೀನ್ ಮುಸ್ಲಿಯಾರ್ ಅವರನ್ನು ಸ್ಮರಿಸಿ ಅವರಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು. ಜಿಲ್ಲಾ ಜಂಇಯ್ಯತ್ತುಲ್ ಖುಥಬಾ ಕಾರ್ಯದರ್ಶಿ ನೌಫಲ್ ಹುದವಿ ಅನುಸ್ಮರಣಾ ಭಾಷಣ ನಿರ್ವಹಿಸಿದರು. ಜಿಲ್ಲಾ ಮಟ್ಟದ ಮುಅಲ್ಲಿಂ ಡೇ ಫಂಡ್ ಉದ್ಘಾಟನೆ ಕೆ ಯು ಮುಸ್ತಫಾ ಫುಜೈರ ಅವರು ಶೈಖುನಾ ಎಂ ಎಂ ಅಬ್ದುಲ್ಲ ಫೈಝಿ ಉಸ್ತಾದ್ ರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಸಿದ್ದಾಪುರ ಜಮಾಅತ್ ಕಾರ್ಯದರ್ಶಿ ರವೂಫ್ ಹಾಜಿ, ಸಿ ಕೆ ಅಬ್ದುಲ್ ಕರೀಂ, ಮುಹಮ್ಮದ್ ಅಲಿ ಸಾಹಿಬ್, ನಝೀರ್ ಸಾಹಿಬ್, ಪಿ ಕೆ ಹನೀಫ ಮುಸ್ಲಿಯಾರ್, ಕೆ ಇ ಮೊಯ್ದೀನ್ ಮುಸ್ಲಿಯಾರ್, ಕೆ ಪಿ ಸಮೀರ್, ಶಹೀದ್ ಫೈಝಿ, ಅಬೂಬಕ್ಕರ್ ಬಜಕೊಲ್ಲಿ, ಟಿ. ಎಚ್ ಹಂಝ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಎಂ. ಆರಿಫ್ ಫೈಝಿ ಸ್ವಾಗತ ಕೋರಿ, ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.