ಸೋಮವಾರಪೇಟೆ(www.vknews.in): 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು SKSSF ಸೋಮವಾರಪೇಟೆ ಶಾಖೆಯ ವತಿಯಿಂದ ಬಹಳ ಅರ್ಥಪೂರ್ಣವಾಗಿ, ಸರಳವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೋವಿಡ್ ಸಮಯದಲ್ಲಿ ಸೋಮವಾರಪೇಟೆ ಭಾಗದಲ್ಲಿ, ಸ್ಪಂದನ ಗ್ರೂಪ್ ಮೂಲಕ ಯಾವುದೇ ಪ್ರಚಾರವಿಲ್ಲದೇ ರೋಗಿಗಳಿಗೆ ಹಾಗೂ ಸೋಂಕಿತರಿಗೆ ನೆರವಾಗಿ ಅತ್ಯಮೂಲ್ಯ ಸೇವೆ ಒದಗಿಸಿ ಜನ ಮನ ಗೆದ್ದಿರುವ “ಸ್ಪಂದನ” ಗ್ರೂಪ್ ಅಧ್ಯಕ್ಷರಾದ ಜನಾಬ್ ಅಕ್ಬರ್ ರವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಸೋಮವಾರಪೇಟೆ ಶಾಖಾಧ್ಯಕ್ಷರಾದ ರಾಹಿಲ್ ಬಶೀರ್ ರವರು ವಹಿಸಿದ್ದರು. ಬಶೀರ್ ಮುಸ್ಲಿಯಾರ್ ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. SKSSF ಸೋಮವಾರಪೇಟೆ, ವಿಖಾಯ ಸಂಚಾಲಕರಾದ ನೌಶಾದ್ ಹನೀಫ ರವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಸಂದೇಶ ನೀಡಿದರು.
ಸನ್ಮಾನ ಕಾರ್ಯಕ್ರಮವನ್ನು ಮೊಹಮ್ಮದ್ ಕುಂಞ ಹಾಗೂ ಯೂಸುಫ್ ದುಬೈರವರು ನೆರವೇರಿಸಿದರು.ಕಾರ್ಯದರ್ಶಿ ನೌಶಾದ್ ಬಜೆಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಹಿತ ನುಡಿಗಳನ್ನಾಡಿದರು. ಅಶ್ರಫ್ ಅಬ್ದುಲ್ಲಾ ಶುಭ ಹಾರೈಸಿದರು. ಸ್ಥಳೀಯ ಶಾಖಾ ಉಪಾಧ್ಯಕ್ಷರಾದ ರಶೀದ್,ಅಬ್ದುಲ್ಲಾ, ಅಬ್ದುಲ್ ರಝಾಕ್ ಬಜೆಗುಂಡಿ, ಫಾಝಿಲ್ ಬಜೆಗುಂಡಿ, ಸಾದಿಕ್ ಬಜೆಗುಂಡಿ, ರಮೀಝ್ ಆಲೆಕಟ್ಟೆ, ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.