ಸುಳ್ಯ (www.vknews.com) : ಅರಂಬೂರಿನ ಬದರ್ ಜುಮಾ ಮಸೀದಿಯ ವಾಣಿಜ್ಯ ಸಂಕೀರ್ಣದಲ್ಲಿ ಅಲ್ ಅಮೀನ್ ಯೂತ್ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ ನಡೆಯಿತು.
ಕಛೇರಿ ಉದ್ಘಾಟನೆ ಹಾಜಿ ಅಬ್ದುಲ್ ರಹಿಮಾನ್ ನೆರವೇರಿಸಿದರು. ಮಸೀದಿ ಖತೀಬರಾದ ಬಹು| ಮೂಸ ಹಾರಿಸ್ ಮಖ್ದೂಮಿ ಕುಕ್ಕಾಜೆ ಉಸ್ತಾದರು ದುವಾಃ ನೇತೃತ್ವ ನೀಡಿ ಸಂಘಟನೆಗೆ ಶುಭಾಶಯ ತಿಳಿಸಿದರು,
ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರಲಿ ಮಾತನಾಡಿ ಎ.ವೈ.ಎಫ್ ನಡೆಸಿದಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಂಘಟನೆಯಿಂದ ಸಮಾಜದಲ್ಲಿ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳು ನಡೆಸಲು ಸಂಘಟನೆಯು ನಿರ್ಧರಿಸಿದ್ದು ಇದಕ್ಕೆ ಸರ್ವರ ಸಹಕಾರ ಅಗತ್ಯವಿದೆ ಎಂದು ಆಸಿಫ್ ಪನ್ನೆ ಪ್ರಾಸ್ತವಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಅಹಮದ್ ಹಾಜಿ ಪಾರೆ, ಅಹಮದ್ ಹಾಜಿ ಸುಪ್ರಿಮ್, ಉಮ್ಮರ್ ಹಾಜಿ ಬುಶ್ರಾ, ಖಾದರ್ ಹಾಜಿ ಅಝಾದ್, ಕಬೀರ್ ಮಾಂಬ್ಲಿ, ಹನೀಫ ಮಾಂಬ್ಲಿ, ಕಬೀರ್ ಪನ್ನೆ, ಫಯಾಝ್ ಶೇಖ್ ಹಾಗೂ ಸ್ಥಳೀಯರು, ಊರಿನ ಯುವಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ನಿಝಾರ್ ಶೈನ್ ಸ್ವಾಗತಿಸಿ, ಮುನೀರ್ ಶೈನ್ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.