(ವಿಶ್ವ ಕನ್ನಡಿಗ ನ್ಯೂಸ್) : ಭಾರತವು ಒಂದು ಪ್ರಮುಖ ದೇಶವಾಗಿದ್ದು, ಅಫ್ಘಾನಿಸ್ತಾನದ ಹೊಸ ಆಡಳಿತವು ಅವರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಅಫ್ಘಾನಿಸ್ತಾನದೊಂದಿಗಿನ ಭಾರತದ ಉತ್ತಮ ಸಂಬಂಧವನ್ನು ವಿವರಿಸಿದ ಅವರು, ತಾಲಿಬಾನ್ ಅಡಿಯಲ್ಲಿ ರಚನೆಯಾದ ಹೊಸ ಸರ್ಕಾರವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದರು.
ಭಾರತದ ವಿರುದ್ಧ ಪಾಕಿಸ್ತಾನದ ಜೊತೆ ತಾಲಿಬಾನ್ ಸೇರಿಕೊಂಡಿರುವ ವರದಿಗಳ ಬಗ್ಗೆ ಕೇಳಿದಾಗ, ಜಬಿಹುಲ್ಲಾ ಮುಜಾಹಿದ್ ಅಂತಹ ವರದಿಗಳು ಆಧಾರರಹಿತ ಎಂದು ಹೇಳಿದರು. ತಾಲಿಬಾನ್ ಬೇರೆ ಯಾವುದೇ ದೇಶವನ್ನು ನಮ್ಮಿಂದ ಅಪಾಯಕ್ಕೆ ಸಿಲುಕಿಸಲು ಬಿಡುವುದಿಲ್ಲ. ನಮ್ಮ ಕಡೆಯವರು ಅವರಿಗೆ ಅಪಾಯವಾಗುವುದಿಲ್ಲ ಎಂದು ನಾವು ಭಾರತಕ್ಕೆ ಭರವಸೆ ನೀಡುತ್ತೇವೆ ಎಂದು ಅವರು ಹೇಳಿದರು.
ಎಲ್ಲಾ ರಾಷ್ಟ್ರಗಳು ತಮ್ಮ ರಾಯಭಾರ ಕಚೇರಿಯನ್ನು ಅಫ್ಘಾನಿಸ್ತಾನದಲ್ಲಿ ಹೊಂದಬೇಕೆಂದು ತಾಲಿಬಾನ್ ಬಯಸುತ್ತದೆ ಎಂದ ಜಬಿಹುಲ್ಲಾ ಮುಜಾಹಿದ್, ಎಲ್ಲಾ ದೇಶಗಳು ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.