ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಜಿಲ್ಲೆಯ ಪ್ರಭೋಧ ಸೇವಾ ಸಮಿತಿ ವತಿಯಿಂದ, ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗಿಶ್ವರರ ದಿವ್ಯ ಆಶಿರ್ವಾದಿಂದ ಮಾಲೂರು ತಾಲ್ಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ಶ್ರೀ ಕೃಷ್ಣಜನ್ಮಾಷ್ಟಾಮಿ ಮಹೋತ್ಸಾವದ ಪ್ರಯುಕ್ತ ಶ್ರೀ ಕೃಷ್ಣನ ಹಾಡುಗಳು, ನೃತ್ಯ ಕಾರ್ಯಕ್ರಮಗಳು, ಪ್ರವಚನಗಳನ್ನು ಏರ್ಪಡಿಸಲಾಗಿತ್ತು.
ಈ ಬಗ್ಗೆ ಇಂದೂ ಜ್ಞಾನ ವೇದಿಕೆ-ಪ್ರಭೋದ ಸೇವಾ ಸಮಿತಿಯ ಭೈರನಹಳ್ಳಿ ಚಂದ್ರಶೇಖರ್ ರವರು ಮಾತನಾಡಿ “ಈ ವರ್ಷ ಮಾಲೂರು ತಾಲ್ಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಕೃಷ್ಣಜನ್ಮಾಷ್ಟಾಮಿ ಹಬ್ಬದ ಪ್ರಯುಕ್ತ ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರ ಆಶಿರ್ವಾದದಿಂದ ಭಗವದ್ಗೀತೆ ಪ್ರವಚನದೊಂದಿಗೆ ಶ್ರೀ ಕೃಷ್ಣನ ಪಲ್ಲಕ್ಕಿಯ ಅದ್ದೂರಿ ಉತ್ಸಾವವನ್ನು ಶ್ರೀಮತಿ ನಂಜಮ್ಮ ಮತ್ತು ಶ್ರೀ ಶಾಳಪ್ಪ ಕುಟುಂಬದವರು, ಭೈರನಹಳ್ಳಿ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಲಾಗಿದ್ದು, ಭಗ್ಗವದ್ಗೀತೆ ಪ್ರವಚನವನ್ನು ಸಹ ಮಾಡಲಾಯಿತು” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಬೋದ ಸೇವಾ ಸಮಿತಿ ಕೋಲಾರ ಜಿಲ್ಲಾ ಅಧ್ಯಕ್ಷರಾದ ವೆಂಕಟರಾಯಪ್ಪ ಮಾತನಾಡಿ “ಭಗವನ್ ಪರಮಾತ್ಮ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ಬಹಳ ಪ್ರಮುಖವಾದದ್ದು, ಎಲ್ಲಾರಿಗೂ ಭಗವಂತ ಶ್ರೀಕೃಷ್ಣ ಪರಮಾತ್ಮ ಕಾಪಾಡಲಿ” ಎಂದು ಹೇಳಿದರು.
ಕೋಲಾರದಿಂದ ಆಗಮಿಸಿದ ಮನೋಹರ್, ನಂಜಪ್ಪ, ಆನಂದ್ ಕುಮಾರ್, ಲೀಲಾವತಿ , ಮಂಜುಳ, ಗೌರಮ್ಮ, ನಳಿನಿ, ವಸಂತಮ್ಮ, ನಂಜುಡಪ್ಪ, ಭೈರನಹಳ್ಳಿ ಗ್ರಾಮದ ಅಂಬಿಕಾ, ನಾಗವೇಣಿ, ಶೋಭಾ, ವೀಣಾ, ಶಾಂತಮ್ಮ, ಸಂದೀಪ್, ಶೈಲಾಜಾ, ಈರಣ್ಣ, ಮಾಲಾ, ಚಂದ್ರಪ್ಪ, ಪ್ರಕಾಶ್, ನಾರಾಯಣಸ್ವಾಮಿ, ಉಷಾದೇವಿ, ಪ್ರಸನ್ನ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.