(Www.vknews.in)ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಇನ್ ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್ ನ್ನು ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ರವರಿಗೆ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದಿನ ಎಲ್ಲಾ ದಿನಗಳಲ್ಲಿ ಎಲ್ಲಾ ಘಟಕಗಳಲ್ಲಿ ಕಾಗದ ಮುಕ್ತ ಆಗಿ ಕಾರ್ಯ ನಿರ್ವಹಿಸುವಂತೆ ಘಟಕದ ಎಲ್ಲಾ ಮಾಹಿತಿಯನ್ನು ಕಂಪ್ಯೂಟರಿಕರಣ ಗೊಳಿಸಿ ಕೆಲಸ ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನೀತಾ. ಟಿ.ಎಸ್,ಉಪ್ಪಿನಂಗಡಿ ಗೃಹರಕ್ಷಕರಾದ ಎ.ಎಸ್.ಎಲ್.ಜನಾರ್ದನ ಆಚಾರ್ಯ, ಸೋಮನಾಥ್, ನಿಖೀಲ್, ಸಮದ್,ಜಿಲ್ಲಾ ಕಮಾಡೆಂಟ್ ರವರ ಜೀಪು ಚಾಲಕ ದಿವಾಕರ್,ದುಷ್ಯಂತ್,ಸುನಿಲ್, ಸುನಿಲ್ ಪೂಜಾರಿ, ಶುಭ ಕುಲಾಲ್, ಜಯಶ್ರೀ, ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.