ಮಂಗಳೂರು (www.vknews.com) : ಮಂಗಳೂರಿನ ಮಕ್ಕಿಮನೆ ಕಲಾವೃಂದ ವತಿಯಿಂದ (30/8/21) ಸೋಮವಾರ ಆನ್ ಲೈನ್ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ವಿಶೇಷವಾಗಿ ಆಚರಿಸಲಾಯಿತು. ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಂಚಮಿ ಮಾರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಹಿತಾ ಜಿ.ಪಿ ಉಡುಪಿ, ಅನುಷ್ಕಾ ಆರ್.ಟಿ ಬೆಂಗಳೂರು , ದಿಶಾನ್ ಸಿ. ಬೇಲೂರು, ಚಿಂತನಾ ಡಿ. ಹೊರನಾಡು, ಚಿರಂತ್ ಡಿ . ಹೊರನಾಡು, ನೇಹಾ ಡಿ. ಹೊರನಾಡು, ನಿತ್ಯ ಡಿ.ಹೊರನಾಡು ಮತ್ತು ಅರೆಹೊಳೆ ಪ್ರತಿಷ್ಠಾನದ ಶ್ವೇತಾ ರಾವ್ ಮತ್ತು ಬಳಗದಿಂದ ನೃತ್ಯ ಪ್ರದರ್ಶನ ನಡೆಯಿತು ಹಾಗೂ ಮಕ್ಕಿ ಮನೆ ಕಲಾವೃಂದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ-2021ರ ಫಲಿತಾಂಶ ಪ್ರಕಟ ಮಾಡಲಾಯಿತು.
ಪ್ರಥಮ ಸ್ಥಾನ: ಥಸ್ವಿಕ ಪೂಜಾರಿ ಏಕ್ಕೂರು ಹಾಗೂ ತನುಷ್ಕ ಬಿ. ಮಂಗಳೂರು . ದ್ವಿತೀಯ ಸ್ಥಾನ: ತ್ರಿಷಾ ಯು.ಕೆ ಕಡಬ. ತೃತೀಯ ಸ್ಥಾನ: ಆದ್ಯ ವಿ. ಕೋಟ್ಯಾನ್ ಮೂಡುಬಿದಿರೆ, ತನ್ವಿ ಕೆ.ಎನ್ ಸುಳ್ಯ, ಮೋಹಕ್ ಪಾಳೆಗಾರ್ ಯು. ತುಮಕೂರು. ಸಮಾಧಾನಕರ ಬಹುಮಾನ: ಸಮರ್ಥ್ ಶೆಣೈ ಹೆಬ್ರಿ, ರುತ್ವಿಜ್ ಎನ್.ಹಾಸನ,ನಿಷ್ಠಯ್ ಮಂಟ್ರಾಡಿ,ಸವಿನ್ ಲಾಯಿಲ ಬೆಳ್ತಂಗಡಿ .
ಮಕ್ಕಿ ಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ, ಉಜ್ವಲ್ ಜೈನ್ ಮೇಗುಂದ , ರೀಮಾ ಜಗನ್ನಾಥ್ ಮಂಗಳೂರು, ಧೀರಜ್ ಡಿ ಜೈನ್ ಹೊರನಾಡು, ನಿರಂಜನ್ ಜೈನ್ ಕುದ್ಯಾಡಿ, ಅಕ್ಷಯ್ ಜೈನ್ ಕೆರ್ವಾಶೆ, ಎನ್ ಪ್ರಸನ್ನ ಕುಮಾರ್ ಮೈಸೂರು, ಅರ್ಚಿತ್ ಜೈನ್ ಸಂಸೆ, , ವಿಜೆ ತೇಜೇಶ್ ಜೆ ಬಂಗೇರ ಉಡುಪಿ, ಮೊದಲಾದವರು ಉಪಸ್ಥಿತರಿದ್ದರು. ಸಂಸ್ಕೃತಿ ಎಂ ಜೈನ್ ಎಳನೀರು ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.