(www.vknews.in) ಎಸ್ ವೈ ಎಸ್ ಮಾಣಿ ಸೆಂಟರ್ ನ ಅಧೀನದಲ್ಲಿರುವ ಪೆರ್ನೆ ಬ್ರಾಂಚ್ ನ ಮಹಾಸಭೆಯ ಇಂದು ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಸುನ್ನಿ ಸೆಂಟರ್ ಪರ್ನೆಯಲ್ಲಿ ನಡೆಯಿತು.
ಪೆರ್ನೆ ಬ್ರಾಂಚ್ ನ ಹಾಲಿ ಅಧ್ಯಕ್ಷ ರಾದ ಅಬ್ದುಲ್ ಹಮೀದ್ ಹಾಜಿ ದೋರ್ಮೆ ರವರ ಅಧ್ಯಕ್ಷತೆಯಲ್ಲಿ ಸಯ್ಯದ್ ಸಾದಾತ್ ತಂಙಳ್ ರವರ ದುವಾಶೀರ್ವಾದ ಹಾಗೂ ಉದ್ಘಾಟನೆ ಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.
ಎಸ್ ವೈ ಎಸ್ ಬ್ರಾಂಚ್ ಪರ್ನೆಯ ಹಿರಿಯ ಸದಸ್ಯರು ಹಾಗೂ ಒಳ್ಳೆಯ ಸಂಘಟನೆಗಾರ ರಾಗಿರುವ ಹನೀಫ್ ಮುಸ್ಲಿಯಾರ್ ರವರು ಕಾರ್ಯಕ್ರಮದಲ್ಲಿ ಬಂದಂತಹ ಅಥಿತಿ ಗಳನ್ನು ಸ್ವಾಗತಿಸಿದರು.
ಹಾಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಮೊಯಿದಿನ್ ಕುಟ್ಟಿ ರವರು ದಿನಾಂಕ 7/01/2021 ರಿಂದ 2/09/2021 ರವರೆಗಿನ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.
ಮಾಣಿ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಆಗಿರುವ ಯೂಸುಫ್ ಸಯೀದ್ ನೇರಳಕಟ್ಟೆ,ಹಾಗೂ ವೀಕ್ಷಕರಾದ ರಫೀಕ್ ಮದನಿ ನೇರಳಕಟ್ಟೆ ರವರು ಲೆಕ್ಕ ಪತ್ರ ಹಾಗೂ ವರದಿಯನ್ನು ಅನುಮೋದಿಸಿ ಹಾಲಿ ಸಮಿತಿಯನ್ನು ಬರ್ಕಾಸ್ತು ಗೊಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಗಲು ರಾತ್ರಿ ರಾಜ್ಯ ಮಟ್ಟದಲ್ಲಿ ಪ್ರವರ್ತಿಸುತ್ತಿರುವ ರಾಜ್ಯ ಹಿಸಾಬ ದ ಅದ್ಯಕ್ಷರು ಆಗಿರುವ ಜಿ ಎಂ ಕಾಮಿಲ್ ಸಖಾಫಿ ರವರು ಹೊಸ ಸಮಿತಿ ರಚನೆಯ ಬಗ್ಗೆ ನಿರ್ದೇಶನ ಗಳನ್ನು ತಿಳಿ ಹೇಳಿದರು.
*ಎಸ್ ವೈ ಯಸ್ ಸಂಘಟನೆ ಯ ಅಗತ್ಯತೆ, ಹಾಗೂ ಅದರಿಂದಾಗುವ ಲಾಭ* ಎಂಬ ವಿಷಯದ ಬಗ್ಗೆ ಎಸ್ ಪಿ ಹಂಝ ಸಖಾಫಿ ರವರು ಬಹಳ ಉತ್ತಮವಾಗಿ ಉಪದೇಶವನ್ನು ನೀಡಿದರು.
ರಾಜ್ಯ ಸಮಿತಿಯ ಆದೇಶದ ಪ್ರಕಾರ ಬ್ರಾಂಚ್ ಮಟ್ಟದಲ್ಲಿ ಹಿರಿಯರಾದ ಅಬ್ದುಲ್ ರಶೀದ್ ದೋರ್ಮೆ, ಅಬ್ಬಾಸ್ ಹಾಜಿ, ಮತ್ತು ಅಬ್ದುಲ್ ಹಮೀದ್ ಹಾಜಿ ಯವರನ್ನು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು .
ಸೆಂಟ್ರಲ್ ಸಮಿತಿಯ ವೀಕ್ಷಕರ ಉಪಸ್ಥಿತಿಯಲ್ಲಿ ನೂತನ ಸಮಿತಿಯ ಅದ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಸಅದಿ, ಉಪಾಧ್ಯಕ್ಷರಾಗಿ ಹನೀಫ್ ಮುಸ್ಲಿಯಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಯಾಗಿ ಮೊಯ್ದಿನ್ ಕುಟ್ಟಿ, ಕೋಶಾಧಿಕಾರಿ ಯಾಗಿ ಅಬ್ದುಲ್ ಲತೀಫ್ ಪುರಿಯ, ದಅವ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮೈರ, ಹಿಸಾಬ ಕಾರ್ಯದರ್ಶಿ ಯಾಗಿ ಶಫೀಕ್ ಹುಸೈನ್ ದೋರ್ಮೆ, ಎಕ್ಸಿಕ್ಯೂಟಿವ್ ಸದಸ್ಯರಾಗಿ ಜಿ ಎಂ ಕಾಮಿಲ್ ಸಖಾಫಿ ಮತ್ತು ಪದಾಧಿಕಾರಿಗಳಾಗಿ ಇಬ್ರಾಹಿಂ ಕಟ್ಟೆ,ಇಬ್ರಾಹಿಂ ದೋರ್ಮೆ,ಉಸ್ಮಾನ್ ಪೆರ್ನೆ, ಬದ್ರುದ್ದೀನ್ ದೋರ್ಮೆ, ಹುಸೈನ್ ಪಿ.ಎಸ್, ಅಬ್ದುಲ್ ಅಝೀಝ್ ಬಾನೋಟು ಮತ್ತು ಅಶ್ರಫ್ ಬಾರಿಕೆ ಕೋಡಿಯನ್ನು ಆಯ್ಕೆಮಾಡಲಾಯ್ತು.
ಅದಲ್ಲದೆ ಸೆಂಟ್ರಲ್ ಕೌನ್ಸಿಲರ್ ಆಗಿ ಅಧ್ಯಕ್ಷ ,ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯನ್ನು ಒಳಗೊಂಡ 9 ಜನರನ್ನು ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.