ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಒಂದೆರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿಕೊಂಡಿರುವ ಒಂದು ವಿಡಿಯೋ ತುಣುಕುಗಳಲ್ಲಿ ಒಂದಾಗಿರುವುದೆಂದರೆ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಭಾಜಪ ನಾಯಕ ರಹೀಂ ಉಚ್ಚಿಲ್ ರವರು ಯು ಟ್ಯೂಬ್ ಚಾನೆಲ್ ಒಂದರಲ್ಲಿ ಸಚಿವ ಯತ್ನಾಳ್ ರವರನ್ನು ಹುಚ್ಚ ಎಂದೆಲ್ಲಾ ನಿಂದಿಸಿ ವಾಚಾಮಗೋಚರ ಖಂಡಿಸಿರುವುದಾಗಿದೆ.
ಮಾನ್ಯ ಸಚಿವರು ತಮ್ಮ ಹೇಳಿಕೆಯೊಂದರಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ನಿಂದನಾತ್ಮಕ ಪದ ಬಳಕೆ ಮಾಡಿರುವ ಕುರಿತು ಬಹಳ ನೊಂದುಕೊಂಡು, ಖಾರವಾಗಿ ಪ್ರತಿಕ್ರಿಯಿಸಿರುವ, ಉಚ್ಚಿಲರ ರೀತಿ ನೋಡಿದರೆ ಬ್ಯಾರಿ ಅಕಾಡೆಮಿ ಅಧ್ಯಕ್ಷರಲ್ಲಿರುವ ಸ್ವಸಮುದಾಯದಲ್ಲಿನ ಇಷ್ಟೊಂದು ಪ್ರೀತಿ, ಕಾಳಜಿಯನ್ನು ಕಂಡ ಜನರು ಬೆರಗಾಗುವಂತಿದೆ. ಆದರೆ ಈ ಓಲೈಕೆಯಿಂದಾಗಿ ಮುಸ್ಲಿಂ ಸಮುದಾಯವನ್ನು ತಾನು ಸೆಳೆಯಬಹುದೆಂಬ ಭ್ರಮೆಯಿಂದ ಉಚ್ಚಿಲ್ ರವರು ಹೊರಬರಬೇಕಾಗಿದೆಯೆಂಬ ಕಿವಿಮಾತನ್ನು ರಹೀಮರಿಗೆ ನೀಡಿದ ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಇದರ ಜಿಲ್ಲಾ ವಕ್ತಾರರಾಗಿರುವ ಎಸ್. ಎಮ್. ಮುತ್ತಲಿಬ್ ರವರು,ರಹೀಮರ ನಾಟಕೀಯ ಆಕ್ರೋಶಭರಿತ ಮಾತನ್ನು ಕೇಳಿದ ಕೂಡಲೇ ಮುಸ್ಲಿಂ ಸಮುದಾಯದ ಜನರೆಲ್ಲರೂ ಅವರಲ್ಲಿ ವಿಶ್ವಾಸವಿಡಲಾರರು.
ಯಾಕೆಂದರೆ, ಈ ಮೊದಲು ಉತ್ತರ ಪ್ರದೇಶದ ಯೋಗಿ ಮಾತ್ರವಲ್ಲ ಭಾಜಪದ ಕೇಂದ್ರ ಮತ್ತು ಈಶ್ವರಪ್ಪ ಎಂಬ ಹೊಲಸು ಬಾಯಿಯು ಸೇರಿದಂತೆ, ರಾಜ್ಯದ ನಾಯಕರುಗಳ ಜನವಿರೋಧಿ ಹೇಳಿಕೆಗಳು ಸಾಕಷ್ಟು ಕೇಳಿ ಬಂದಾಗಲೂ, ಅದಾವುದೇ ಚಕಾರವೆತ್ತದೆ ಇದ್ದ ಭಾಜಪ ಅಲ್ಪಸಂಖ್ಯಾಕ ಮೋರ್ಚಾ ನಾಯಕ ಇದೀಗ, ಭಾಜಪದಲ್ಲಿ ನಿಸ್ತೇಜವಾಗಿ ಯಾರಿಂದಲೂ ಪರಿಗಣಿಸಲ್ಪಡದಿರುವ ಹಿನ್ನೆಲೆಯಲ್ಲಿ ಯತ್ನಾಳ್ ತಮ್ಮ ಕೊನೆಯ ಯತ್ನವೆಂಬಂತೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿ ಜನರ ಗಮನ ತನ್ನತ್ತ ಸೆಳೆಯಲು ಶ್ರಮಿಸಿದಾಗಿನ ಒಂದು ಮಾತು ಮಾತ್ರ, ಪಕ್ಷದಲ್ಲಿ ಇದುವರೆಗೆ ಯಾರೂ ಮುಸ್ಲಿಮರನ್ನು ನಿಂದಿಸಿದ ಮಾತೇ ಹೇಳಿಲ್ಲವೆಂಬಂತೆ ಸಹಿಸಲಸಾಧ್ಯವಾದ ನೋವನುಭವಿಸಿದಂತೆ ಮಾಡಿದ ಉಚ್ಚಿಲರ ಪ್ರಹಸನ ಖಂಡಿತಾ ಪ್ರಶ್ನಾರ್ಹವಾಗಿದೆ.
ಈ ಬಗೆಗಿನ ವಿಚಾರದಲ್ಲಿ ಅವರಲ್ಲಿರುವ ಸಾಮುದಾಯಿಕ ನಿಷ್ಠೆಯ ಪ್ರಾಮಾಣಿಕತೆಯು ಇನ್ನಷ್ಟು ಸಂದೇಹಾಸ್ಪದವಾಗಿದ್ದು ಇಂತಹ ತೀವ್ರ ತರದ ಪ್ರತಿಕ್ರಿಯೆ ನೀಡಲು ಇವರಲ್ಲಿ ಭಾಜಪದ ಯಾವ ಪ್ರಭಾವಿ ನಾಯಕನ ಆದೇಶವಾಗಿತ್ತೆಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದೆಯೆಂದು ಹೇಳಿದ ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಇದರ ಜಿಲ್ಲಾ ವಕ್ತಾರರಾಗಿರುವ ಎಸ್. ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.