(www.vknewes.com) : ದಕ ಜಿಲ್ಲೆಯ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಜೀವನಾಶ್ರಯಕ್ಕಾಗಿ ಅವಲಂಬಿಸಿದ ಬೀದಿ ಬದಿ ವ್ಯಾಪಾರಿಗಳನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿ ಹಾಗೂ ವಿವಿಧ ಕಾರಣಗಳಿಗಾಗಿ ಬಲವಂತದಿಂದ ತೆರವು ಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿದೆ ಇದನ್ನು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಫಯಾಝ್ ದೊಡ್ಡಮನೆ ಖಂಡಿಸಿದ್ದಾರೆ
ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರಸ್ಥರ ಭದ್ರತೆಗಾಗಿ 2014 ಮತ್ತು 19 ರಲ್ಲಿ ರೂಪಿಸಿದ ನಿಯಾಮಾವಳಿಗಳ ಪ್ರಕಾರ ಮಾನಾಪ ಆಯುಕ್ತರು, ಸರಕಾರೇತರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಮೀಸಲಾತಿ ಮುಖಾಂತರ ಆಯ್ಕೆಯಾದ ಸದಸ್ಯರನ್ನೊಳಗೊಂಡ ಬೀದಿ ಬದಿ ಪಟ್ಟಣ ವ್ಯಾಪಾರ ಸಮಿತಿಯನ್ನು ಅಸ್ಥಿತ್ವಕ್ಕೆ ತಂದಿದೆ. ಈ ಸಮಿತಿಯೂ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಬಗ್ಗೆ ಪರಿಹಾರ ನಡೆಸಲು ಅವರ ಕ್ಷೇಮ ಮತ್ತು ಭದ್ರತೆಯ ದ್ರಷ್ಟಿಯನ್ನಿಟ್ಟು ಕಾರ್ಯನಿರ್ವಹಿಸುವುದಕ್ಕಾಗಿ ಅಸ್ಥಿತ್ವಕ್ಕೆ ತರಲಾಗಿದೆ ಆದರೆ ಈ ಅಧಿಕೃತ ಸಮಿತಿಯ ನಿಯಾಮಾವಳಿಯ ಅಧ್ಯಾಯ 2 ಉಲ್ಲೇಖಿತ ಸೆಕ್ಷನ್ (3) ರ ಪ್ರಕಾರ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೊಳಿಸದೆ ತೆರವುಗೊಳುಸುವಂತಿಲ್ಲ ಎಂಬ ನಿಬಂಧನೆಯನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಲು ಪ್ರಯತ್ನಿಸುವ ಮೂಲಕ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಯೂನಿಯನ್ ಆರೋಪಿಸುತ್ತದೆ
ಕೋವಿಡ್ ಪೆಂಡಮಿಕ್ ನಿಂದಾಗಿ ಆರ್ಥಿಕ ಅನಾನುಕೂಲತೆಯನ್ನು ಎದುರಿಸಿ ಶ್ರಮ ಪಟ್ಟು ಚೇತರಿಕೆ ಕಂಡುಕೊಳ್ಳಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿ ಹಾಗೂ ವಿವಿಧ ಕಾರಣಗಳಿಗಾಗಿ ತೆರವುಗೊಳಿಸಲು ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ದಿನಂಪ್ರತಿ ಕಿರುಕುಳ ನೀಡುತ್ತಿದ್ದಾರೆ ಆದ್ದರಿಂದ ಜೀವನಾಶ್ರಯಕ್ಕಾಗಿ ಸ್ವಾಭಿಮಾನದಿಂದ ಬದುಕು ಸಾಗಿಸಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳಿಗೆ ಈ ಕೆಳಗೆ ತಿಳಿಸಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಾಲಿಕೆ ಅಧಿಕಾರಿಗಳಲ್ಲಿ ಜನಪ್ರತಿನಿಧಿಗಳಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ( SDTU) ದಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ
ಒತ್ತಾಯಗಳು
1, ಜೀವನಾಶ್ರಯಕ್ಕಾಗಿ ಸ್ವಾಲಂಬಿಯಾಗಿ ಬದುಕು ಕಟ್ಟಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಪರ್ಯಾಯ ಸೂಕ್ತ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಲು ಪ್ರಯತ್ನಿಸಬಾರದು
2, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಬೀದಿಬದಿ ವ್ಯಾಪಾರಸ್ಥರಿಗೆ ಸಮರ್ಪಕ ಸ್ಥಳಾವಕಾಶ ನೀಡಿ ಸಹಕರಿಸಬೇಕು.
3, ಅಧಿಕೃತವಾಗಿ ರಚನೆಯಾದ ಬೀದಿ ಬದಿ ವ್ಯಾಪಾರಸ್ಥರ ಸಮಿತಿಯೊಂದಿಗೆ ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಕಬೇಕು
4, ಅರ್ಜಿ ಸಲ್ಲಿಸಿ ಬಾಕಿ ಇರುವ ವ್ಯಾಪಾರಿಗಳಿಗೆ ಪಾಲಿಕೆ ಪರಿಶೀಲನೆ ನಡೆಸಿ ಗುರುತಿನ ಚೀಟಿ ನೀಡಬೇಕು ಮತ್ತು ಅರ್ಜಿ ಸಲ್ಲಿಸಲು ಬಾಕಿ ಇರುವ ವ್ಯಾಪಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸರ್ವೆ ನಡೆಸಿ ಶೀಘ್ರ ಗುರುತಿನ ಚೀಟಿ ನೀಡಬೇಕು
6, ಬೀದಿ ಬದಿ ವ್ಯಪಾರಸ್ಥರ ಭದ್ರತೆಗಾಗಿ ಸಂಘಟಿತ ಪ್ರಮಾಣ ಪತ್ರದ ಮೂಲಕ ಕ್ಷೇಮ ನಿಧಿ ಸ್ಥಾಪಿಸಬೇಕು
7, ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ವಶಪಡಿಸಿದ ವ್ಯಾಪಾರಿಗಳ ಸ್ವತ್ತುಗಳನ್ನು ವಾರೀಸುದಾರರಿಗೆ ಮರಳಿ ನೀಡಬೇಕು
ಉಪಸ್ಥಿತಿ > ಫಯಾಝ್ ದೊಡ್ಡಮನೆ ( ರಾಜ್ಯ ಪ್ರಧಾನ ಕಾರ್ಯದರ್ಶಿ SDTU) > ಶೆರೀಫ್ ಪಾಂಡೇಶ್ವರ್ (ರಾಜ್ಯ ಕಾರ್ಯದರ್ಶಿ SDTU) > ಖಾದರ್ ಫರಂಗಿಪೇಟೆ ( ಜಿಲ್ಲಾಧ್ಯಕ್ಷರು SDTU ದಕ ಜಿಲ್ಲೆ) > ಮಾಲಿಕ್ ಕೊಲಕೆ (ಪ್ರಧಾನ ಕಾರ್ಯದರ್ಶಿ SDTU ದಕ ಜಿಲ್ಲೆ) > ಇಕ್ಬಾಲ್ ಕಣ್ಣೂರು ( ಅಧ್ಯಕ್ಷರು SDTU ಮಂಗಳೂರು ದಕ್ಷಿಣ)
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.