(www.vknews.com) : ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಯ ಸೃಷ್ಟಿಸಿದ ದ.ಕ ಜಿಲ್ಲೆಯ ಸಮನ್ವಯ ವಿದ್ಯಾ ಸಂಸ್ಥೆಯಾಗಿದೆ ಅಲ್-ಮದೀನತ್ತುಲ್ ಮುನವ್ವರ ವಿದ್ಯಾ ಸಂಸ್ಥೆ ಮೂಡಡ್ಕ. ಕಳೆದ ಒಂದು ದಶಕಗಳಿಂದ ಅನಾಥ ನಿರ್ಗತಿಕರ ಬಡವ-ಬಲ್ಲಿದರ ಆಶಾಕೇಂದ್ರವಾಗಿ ತೆಕ್ಕಾರು ಸಮೀಪದ ಮೂಡಡ್ಕ ಎಂಬಲ್ಲಿ ತಲೆ ಎತ್ತಿ ನಿಂತಿರುವ ಈ ಸಂಸ್ಥೆ ಮತ್ತೊಂದು ಹೊಸ ಅಧ್ಯಾಯಕ್ಕೆ ಕಾಲಿರಿಸಿದೆ.
ಒಂದಷ್ಟು ಪ್ರೌಢ ಶಿಕ್ಷಣ ಪಡೆದು ಮನೆಯೊಳಗೆ ಬಾಕಿಯಾಗುವ ಅದೆಷ್ಟೋ ಹೆಣ್ಣು ಮಕ್ಕಳಿಗೆ, ಧಾರ್ಮಿಕ ಶಿಕ್ಷಣದೊಂದಿಗೆ ಹೆಣ್ಣು ಶಿಕ್ಷಣದ ಮೂಲಕ ಈ ಸಮುದಾಯ ಮತ್ತು ಸಮಾಜದಲ್ಲಿ ಹೆಮ್ಮೆಯಿಂದ ಬದುಕಬಹುದು ಮತ್ತು ಹೆಣ್ಣು ಎಲ್ಲಾ ರೀತಿಯಿಂದಲೂ ಧಾರ್ಮಿಕವಾಗಿಯೂ ಮುಂದುವರಿಯಬಹುದು ಎಂದು ನಮ್ಮೂರ ಹೆಮ್ಮೆಯ ಸಂಸ್ಥೆ ಸಾಧಿಸಿ ತೋರಿಸಿದೆ.
ಗ್ರಾಮೀಣ ಪ್ರದೇಶವಾದ ತೆಕ್ಕಾರು ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೆ ಸುಮಾರು 8 ರಿಂದ 10 ಕಿಲೋಮೀಟರ್ ಸಂಚರಿಸಬೇಕಾದ ಪರಿಸ್ಥಿತಿ. ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸಂಪೂರ್ಣಗೊಂಡರೆ ಮುಂದಿನ ವಿದ್ಯಾಭ್ಯಾಸ ಕನಸಿನ ಮಾತೇ ಸರಿ. ಹುಡುಗರು ಹೇಗೋ ಬಸ್ಸು ಹತ್ತಿ ಪೇಟೆಗೆ ಕಲಿಯಲು ಹೋದರೆ ಹೆಣ್ಣು ಮಕ್ಕಳಿಗಂತು ಮನೆಯೇ ಎಲ್ಲವೂ. ಆದರೆ ಕಳೆದ ಎರಡು ವರ್ಷಗಳಿಂದ ಆ ಸಮಸ್ಯೆಗೆ ದೊಡ್ಡ ಮಟ್ಟಿನ ಪರಿಹಾರ ದೊರಕಿದೆ.
ಉನ್ನತ ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಹೆಣ್ಣು ಮಕ್ಕಳು ಇದೀಗ ಆದರ್ಶ ಮಹಿಳೆಯರಾಗಿದ್ದಾರೆ. ಕರ್ಮಶಾಸ್ತ್ರ, ತಝ್ಕಿಯತ್, ತಜ್ವೀದ್ ,ಫಿಕ್ಹ್, ಹದೀಸ್, ತಫ್ಸೀರ್, ಅರೆಬಿಕ್ ಗ್ರಾಮರ್ ನಂತಹ ಹಲವಾರು ಕಿತಾಬುಗಳ ಅಧ್ಯಯನ ನಡೆಸಿ ಹೆಮ್ಮೆಯ ಶರೀಅತ್ ಪದವೀಧರರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ತೋರಿಸುತ್ತಿದ್ದಾರೆ.
ಪ್ರತ್ಯೇಕವಾಗಿ ನಮ್ಮ ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದ ಕಾಲವೊಂದಿತ್ತು. ಗ್ರಾಮೀಣ ಬಾಗವಂತೂ ಹೇಳುವಂತಿಲ್ಲ. ಆದರೆ ಆ ಸಮಸ್ಯೆಗಳಿಗೆಲ್ಲವೂ ಇದೀಗ ಪೂರ್ಣ ವಿರಾಮ ಬಿದ್ದಿದೆ.
ಅಲ್-ಮದೀನತ್ತುಲ್ ಮುನವ್ವರ ಎಜ್ಯುಕೇಶನಲ್ ಸೆಂಟರ್ ಮೂಡಡ್ಕ ಇದರ ಅಧೀನ ಸಂಸ್ಥೆಯಾದ ಅಲ್-ಮುನವ್ವರ ವಿಮೆನ್ಸ್ ಶರೀಅತ್ ಕಾಲೇಜು ಮತ್ತೊಂದು ಐತಿಹಾಸಿಕ ಚರಿತ್ರೆಗೆ ದಾಪುಗಾಲಿಡುತ್ತಿದೆ, ಸುಮಾರು 25 ರಷ್ಟು ಶರೀಅತ್ ಕಲಿತ ಆಲಿಮತ್ ಗಳನ್ನು ಅಲ್-ಮಹ್-ದಿಯ್ಯ ಎಂಬ ಪದವೀ ನಾಮದೊಂದಿಗೆ ಈ ಸಮೂಹಕ್ಕರ್ಪಿಸುತ್ತಿದೆ.
ಮೂಡಡ್ಕ ವಿದ್ಯಾ ಸಂಸ್ಥೆಯ ಐತಿಹಾಸಿಕ ಮೈಲುಗಲ್ಲಿನಲ್ಲಿ ಇದು ಸ್ವರ್ಣಾಕ್ಷರಗಳಲ್ಲಿ ಬರೆದಿಡ ಬೇಕಾದ ಸಂಭ್ರಮ!!!.
ಇದೇ ಗುರುವಾರ 9/9/2021 ರಂದು ಸಂಜೆ 3 ಗಂಟೆಗೆ ಮೂಡಡ್ಕದಲ್ಲಿ ನಡೆಯುವ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಅಹ್ಲ್ ಬೈತ್ ನ ನಕ್ಷತ್ರ ಬಹು/ಸೆಯ್ಯದ್ ಉಜಿರೆ ತಂಙಳ್ 25 ರಷ್ಟು ಆಲಿಮತ್ ಗಳಿಗೆ ಮಹ್-ದಿಯ್ಯ ಪದವಿ ಪ್ರಧಾನ ಮಾಡಲಿದ್ದಾರೆ. ಶರೀಅತ್ತ್ ಕಾಲೇಜಿನ ಪ್ರಿನ್ಸಿಪಾಲ್ ಬಹು/ ಸ್ವಲಾಹುದ್ದೀನ್ ಸಖಾಫಿ, ಸಂಸ್ಥೆಯ ಜನರಲ್ ಮ್ಯಾನೇಜರ್ ಬಹು/ಅಶ್ರಫ್ ಸಖಾಫಿ ಮಾಡಾವು ಮತ್ತು ಸಂಸ್ಥೆಯ ಮುದರ್ರಿಸ್ ಬಹು/ಉಸ್ಮಾನ್ ಸ’ಅದಿ ಉಸ್ತಾದರುಗಳು ಬಾಗವಹಿಸಲಿದ್ದು. ಮೂಡಡ್ಕ ಚರಿತ್ರೆಯಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ.
ಸಂಸ್ಥೆಯೂ ಇನ್ನಷ್ಟು ಉನ್ನತಿಗೇರಲಿ ಎಂಬ ಹಾರೈಕೆ ನಮ್ಮದು.
✍️ ಕೆ.ಪಿ ಬಾತಿಶ್ ತೆಕ್ಕಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.