ಪುತ್ತೂರು (www.vknews.com) ; ಉಚಿತ ಲಸಿಕ ವಿತರಣಾ ಶಿಬಿರ ಸಾಲ್ಮರ ಯತೀಂಖಾನ ದಲ್ಲಿ ನಿನ್ನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಪುತ್ತೂರು ಪುರಸಭೆ, ಆರೋಗ್ಯ ಇಲಾಖೆ ಪುತ್ತೂರು,ಸೈಯದ್ ಮಲೆ ಜುಮ್ಮ ಮಸ್ಜಿದ್, ಅನ್ಸಾರುದ್ದೀನ್ ಯತೀಂಖಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ,ಪುತ್ತೂರು ಪುರಸಭೆಯ 9ನೇ ವಾರ್ಡಿನ ಸುಮಾರು 300 ಜನರಿಗೆ ಕೋವಿಡ್ ಲಸಿಕೆಯನ್ನು ಹಾಕಲಾಯಿತು.
ಲಸಿಕ ವಿತರಣ ಶಿಬಿರವನ್ನು ಸೈಯದ್ ಮಲೆ ಜುಮ್ಮ ಮಸ್ಜಿದ್ ಅಧ್ಯಕ್ಷರಾದ,ನ್ಯಾಯವಾದಿ ನೂರುದ್ದೀನ್ ಸಾಲ್ಮರ ಉದ್ಘಾಟಿಸಿದರು.ಸ್ಥಳೀಯ ನಗರ ಸಭಾ ಸದಸ್ಯ ರಾಬಿನ್ ತಾವ್ರೊ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.
ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರಾದ ಎಲ್ ಟಿ ಅಬ್ದುಲ್ ರಜಾಕ್ ಹಾಜಿ, ಉದ್ಯಮಿ ರಹಮಾನ್ ಹಾಜಿ ಸಾಲ್ಮರ, ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿದರು ಅನ್ಸಾರುದ್ದೀನ್ ಯತೀಂಖಾನಧ ವ್ಯವಸ್ಥಾಪಕ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿದರು. ಸೈಯದ್ ಮೇಲೆ ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ಪುರಸಭೆಯ ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ನಾಗೇಶ ರವರ ನೇತೃತ್ವದಲ್ಲಿ, ಪುತ್ತೂರು ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕರಾದ ತ್ರಿವೇಣಿ, ಮೀನಾಕ್ಷಿ, ಸವಿತಾ ರವರು ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.