ದುಬೈ (ವಿಶ್ವ ಕನ್ನಡಿಗ ನ್ಯೂಸ್) : ತವಕ್ಕಲ್ ಓವರ್ಸೀಸ್ ದುಬೈ ಇದರ 25ನೇ ವರ್ಷದ ಸಿಲ್ವರ್ಜುಬಿಲಿಯ ಸಮಾರಂಭದಲ್ಲಿ ರಕ್ಷಾ ಹೆಲ್ಪ್ ಲೈನ್ ಸರ್ವಿಸಸ್ ಸಮಾಜ ಸೇವಕ ಅಬ್ದುಲ್ ರಜಾಕ್ ಉಜಿರೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಈ ಮೂಳೂರು, ಲಂಡನ್ ಅಮೆರಿಕಾ ಯೂನಿವರ್ಸಿಟಿಯ ಡೀನ್ ಡಾ. ಮುಹಮ್ಮದ್ ಕಾಪು, ತನ್ವಿರ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಬ್ದುಲ್ ರಜಾಕ್ ಉಜಿರೆ ಇವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆಯನ್ನು ಗಲ್ಫ್ ನಾದ್ಯಂತ ಅತೀ ಹೆಚ್ಚು ಪ್ರಸಾರಿಸಲ್ಪಡುವ “ಗಲ್ಫ್ ನ್ಯೂಸ್” ಆಂಗ್ಲ ಪತ್ರಿಕೆ ಕೂಡಾ ಎಳೆ ಎಳೆಯಾಗಿ ವಿವರಿಸಿದೆ. ಅದೇ ರೀತಿ ಅಲ್ಲಿನ ಟಿ.ವಿ.ಯಲ್ಲೂ, ರೇಡಿಯೋದಲ್ಲೂ ಪ್ರಸಾರವಾಗಿದ್ದು, ವಿಶ್ವ ಕನ್ನಡಿಗ ನ್ಯೂಸ್ ಸಹಿತ ಕರ್ನಾಟಕದ ಬಹುತೇಕ ಮಾಧ್ಯಮಗಳೂ ಕೂಡಾ ಇವರ ಸೇವೆಯನ್ನು ಪ್ರಕಟಿಸಿತ್ತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.