ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ಪಟ್ಟಣ್ಣದ ಹೊರವಲಯದಲ್ಲಿನ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಫಲಾನುಭಾವಿಗಳ ಪ್ರಕೋಷ್ಟದ ವತಿಯಿಂದ ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರ 72 ನೇ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಲೂರು ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾದ ಪುರ ನಾರಾಯಣಸ್ವಾಮಿ ರವರು ಮಾತನಾಡಿ “ದೇಶಕಂಡ ಸರ್ವಶ್ರೇಷ್ಠ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆ ಏರ್ಪಡಿಸಿದ್ದು ವಿಶೇಷ ಕಾರ್ಯಕ್ರಮಗಳ ಮೂಲಕ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಸಂದೇಶವನ್ನು ನೀಡಬೇಕು ಎಂಬ ಆಶಯದಿಂದ, ಮೋದಿಜೀ ರವರ ಹುಟ್ಟುಹಬ್ಬ ಆಚರಿಸಬೇಕು ಎಂದು ಅಭಿಪ್ರಾಯ ಸಂಗ್ರಹಣ ಕಾರ್ಯಕ್ಕಾಗಿ ಈ ಸಭೆ ಮಾಡಲಾಗಿದೆ” ಎಂದರು.
ಪೂರ್ವಭಾವಿ ಸಭೆಯಲ್ಲಿ ಸಮಾಜ ಸೇವಕರು ಹಾಗೂ ಬಿ.ಜೆ.ಪಿ ಮುಖಂಡರಾದ ಹೂಡಿ ವಿಜಯ್ ಕುಮಾರ್ ರವರು ಮಾತನಾಡಿ “ನಮ್ಮ ದೇಶದ ಅಪ್ರತಿಮ ಪ್ರಧಾನಿಗಳಾದ ನರೇಂದ್ರ ಮೋದಿಜೀ ರವರ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಇಡೀ ರಾಜ್ಯದಲ್ಲಿ ಆವರಿಸಿರುವ ರಕ್ತದ ಕೊರತೆ ನಿಗಿಸುವ ನಿಟ್ಟಿನಲ್ಲಿ ಪ್ರಧಾನಿಗಳ ಜನುಮದಿನದಲ್ಲಿ 1001 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದು, ಈ ಮೂಲಕ ಜೀವ ಉಳಿಸುವ ಕಾರ್ಯ ಮಾಡಿ ಮಹಾನ್ ವ್ಯಕ್ತಿಯ ಹುಟ್ಟುಹಬ್ಬಕ್ಕೆ ಉತ್ತಮ ಸಂದೇಶ ನೀಡೋಣ, ಎಲ್ಲಾರೂ ಕೈ ಜೋಡಿಸಿ” ಎಂದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜನತಾ ಪಾರ್ಟಿ ಕೋಲಾರ ಜಿಲ್ಲಾ ಉಸ್ತುವಾರಿಯಾದ ಕಾಂತರಾಜು ರವರು ಮಾತನಾಡಿ “ನಾನಾ ರೀತಿಯ ದೇಶದ ಬದಲಾವಣೆಯ ದೃಷ್ಟಿಕೋನದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಸಾಕಷ್ಟು ಸಾಧನೆಯ ಪಥದತ್ತ ಸಾಗುತ್ತಿರುವುದು ಪ್ರಶಂಸನೀಯ, ಸೆಪ್ಟೆಂಬರ್ 17 ರಿಂದ ಆಕ್ಟೋಬರ್ 17 ರವರೆಗೆ 2 30 ದಿನಗಳ ಸೇವಾ ಸಪ್ತಾಹದ ಮೂಲಕ ನರೇಂದ್ರ ಮೋದಿಜೀ ರವರ ಸಾಧನೆಗಳನ್ನು ಪ್ರಚುರುಪಡಿಸುವ ಕಾರ್ಯ ಮಾಡಬೇಕು, ಆ ನಿಟ್ಟಿನಲ್ಲಿ ನಾವೆಲ್ಲಾರೂ ಸೇರಿ ಉತ್ತಮ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ” ಎಂದರು.
ಪೂರ್ವಭಾವಿ ಸಭೆಯಲ್ಲಿ ಮಾಲೂರು ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳಾದ ವಿ.ಹನುಮಪ್ಪ, ಮಾಜಿ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಸುಬ್ರಮಣ್ಯ ರೆಡ್ಡಿ, ಮಾಜಿ ಪುರಸಭಾ ಅಧ್ಯಕ್ಷರಾದ ರಾಮಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ವೆಂಕಟೇಶ್, ಟೇಕಲ್ ವೆಂಕಟೇಶ್, ಸಿ.ಜಿ.ಹರೀಶ್ ಗೌಡ, ಶ್ರೀಮತಿ ಅಮುದಾ ವೇಣು, ಸೀತನಾಯಕನಹಳ್ಳಿ ಪಿ.ನಾರಾಯಣಸ್ವಾಮಿ, ಪದ್ಮಾವತಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗದೇನಹಳ್ಳಿ ಗುರುನಾಥರೆಡ್ಡಿ, ವೆಂಕಟೇಶ್, ಇತರೆ ಮಹಿಳಾ ಮೋರ್ಚಾ, ಯುವ ಮೋರ್ಚಾ ವಿವಿಧ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.