ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ಪಟ್ಟಣ್ಣದ ಪಟ್ಟಾಲಮ್ಮ ಲೇಔಟ್ ನ ಎಂ.ಎಂ.ರೋಡ್ ನಲ್ಲಿ ಮಾಲೂರು ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಪ್ರಾಚೀನ ಕಾಲದ ಗತವೈಭವ ಬಿಂಬಿಸುವ ಶುದ್ದ ಗಾಣದ ಎಣ್ಣೆ ಸೀಗುವ “ಧನು ನ್ಯಾಚುರಲ್ಸ್” ಅಂಗಡಿಯನ್ನು ಅದ್ದೂರಿಯಾಗಿ ಪ್ರಾರಂಭಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಧನು ನ್ಯಾಚುರಲ್ಸ್ ಗಾಣದ ಅಂಗಂಡಿಯ ಮಾಲೀಕರಾದ ಶ್ರೀಮತಿ ಕಾಂತಮ್ಮ ಸಂಪಂಗಿ ರವರು ಮಾತನಾಡಿ “ನಮ್ಮ ಮಾಲೂರು ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಜನರ ಆರೋಗ್ಯದ ದೃಷ್ಟಿಯಿಂದ, ಪರಿಶುದ್ದವಾದ ಗಾಣದ ಎಣ್ಣೆಯನ್ನು ನೈಜವಾಗಿ ತೆಗೆದು ಗ್ರಾಹಕರಿಗೆ ತಲುಪಿಸುವ ಮೂಲಕ ಸಂಜಿವೀನಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೀವಿ, ತಾಲ್ಲೂಕಿನ ಜನತೆ ಇದನ್ನು ಸದುಪಯೋಗಪಡಿಸಿಕೋಳ್ಳುವ ಮೂಲಕ ಬೆಂಬಲಿಸಿ, ಪ್ರೋತ್ಸಾಹಿಸಿ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೂರು ಪಟ್ಟಣ್ಣದ ಶಶಿಧರ್ ರವರು ಮಾತನಾಡಿ “ತಾಲ್ಲೂಕಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಧನು ನ್ಯಾಚುರಲ್ಸ್ ಗಾಣದ ಮೂಲಕ ಎಣ್ಣೆ ತೆಗೆದು ಜನತೆಗೆ ಆರೋಗ್ಯದ ಹಿತದೃಷ್ಟಿಯಿಂದ ತಲುಪಿಸುವ ಕಾರ್ಯ ಮಾಡಲು ಸಜ್ಜಗಿದ್ದು ನೀವು ಸಹ ಒಮ್ಮೆ ಬಂದು ಭೇಟಿ ಮಾಡಿ, ಖರೀದಿಸಿ” ಎಂದರು.
ಈ ಸಂದರ್ಭದಲ್ಲಿ ಧನು ನ್ಯಾಚುರಲ್ಸ್ ಗಾಣದ ಎಣ್ಣೆ ಅಂಗಡಿಯ ಮಾಲೀಕರಾದ ಶ್ರೀಮತಿ ಕಾಂತಮ್ಮ ಸಂಪಗಿ, ಶಶಿಧರ್, ಸಂಪಗಿ, ಕುಲದೀಪ್ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.