ಕೋಲಾರ(ವಿಶ್ವ ಕನ್ನಡಿಗ ನ್ಯೂಸ್):- ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳಿ ಗ್ರಾಮದ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ , ಅವರನ್ನು ಗಡಿಪಾರು ಮಾಡಿ , ದಲಿತ ಹೆಣ್ಣುಮಕ್ಕಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ದಲಿತ ಸಂಘರ್ಷ ಸಮಿತಿಯ ಕರ್ನಾಟಕ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಸೆಪ್ಟೆಂಬರ್ ರಂದು ಬೆಳಿಗ್ಗೆ 8.30 ಕ್ಕೆ ಚಿಂತಾಮಣಿ ಕಾಲೇಜಿಗೆ ಬಸ್ಸಿನಲ್ಲಿ ಹೊರಟಿದ್ದ ಹೆಣ್ಣು ಮಕ್ಕಳನ್ನು 50 ಮಂದಿ ಸವರ್ಣೀಯರ ಯುವರ ಕುಲಪು ಲೈಂಗಿಕ ಕಿರುಕುಳ ನೀಡಿ , ಸರ್ಕಾರಿ ಕೆಎಸ್ಆರ್ಟಿಸಿ ಬಸ್ಸನ್ನು ಅಡ್ಡಗಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವುದು ಮಹಿಳಾ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಹೆಣ್ಣು ಮಕ್ಕಳ ಸಂಬಂಧಿಕರು ತಡೆಯಲು ಬಂದಾಗ ಅವರನ್ನು ದೊಣ್ಣೆ , ರಾಡು , ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾರೆ.
ಇದನ್ನು ದಲಿತ ಸಂಘರ್ಷ ಸಮಿತಿಯ ಕರ್ನಾಟಕ (ರಿ) ( DSSK )ನ ರಾಜ್ಯಾಧ್ಯಕ್ಷ ಅಣ್ಣಯ್ಯ ಮಂಜುನಾಥ್ ನೇತೃತ್ವದ ಕೋಲಾರ ಜಿಲ್ಲಾ ಮಹಿಳಾ ಸಂಚಾಲಕಿ ಲಕ್ಷ್ಮಿ.ಪಿ ತೀವ್ರವಾಗಿ ಖಂಡಿಸಿದ್ದಾರೆ. ಯಾರ ಹೆಣ್ಣು ಮಗಳನ್ನು ಕೈಯಿಂದ ಹೊಡೆಯುವಂತಿಲ್ಲ. ಸಂವಿಧಾನ ಬಾಹಿರವಾಗಿದೆ . ಇಂತಹ ಕೃತ್ಯ ವೆಸಗಿರುವವರ ಮೇಲೆ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಂಡು ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಕೇಸುಗಳನ್ನು ದಾಖಲಿಸಬೇಕು. ಮನೆ , ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.
ಈ ವಿಚಾರವಾಗಿ ನ್ಯಾಯಾಂಗ ತನಿಖೆ ಮಾಡಿ ಅವರನ್ನು ಗಡಿಪಾರು ಮಾಡಬೇಕು ಅಥವಾ ಜೀವಾವಧಿ ಶಿಕ್ಷೆ ನೀಡಬೇಕು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಪರ ಇರುವ ಸಮಾಜ ಕಲ್ಯಾಣ ಇಲಾಖೆಯು ಜೀವಂತವಾಗಿ ಸತ್ತಂತಿದೆ ಹಾಗೂ ಇಡೀ ಸಮಾಜ ಕಲ್ಯಾಣ ಇಲಾಖೆಯು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ನಡೆದರೂ ಶ್ರೀನಿವಾಸಪುರ ಶಾಸಕ ಕೆ ಆರ್. ರಮೇಶ್ ಕುಮಾರ್ ರವರು , ಜಿಲ್ಲೆಯ ಶಾಸಕರು ಹಾಗೂ ಸಂಸದ ಎಸ್.ಮುನಿಸ್ವಾಮಿಯವರು ಮಧ್ಯ ಪ್ರವೇಶ ಮಾಡದಿರುವುದು ಖಂಡನೀಯ. ಇನ್ನಾದರೂ ಮಧ್ಯ ಪ್ರವೇಶ ಮಾಡಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ದಲಿತ ಹೆಣ್ಣುಮಕ್ಕಳ ಸಂಬಂಧಿಕ ಗಾಯಾಳುಗಳಿಗೆ ಪ್ರತಿಯೊಬ್ಬರಿಗೂ 10 ಮತ್ತು 5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಘ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯು ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಹಿಳಾ ಸಂಚಾಲಕಿ ಲಕ್ಷ್ಮಿ.ಪಿ , ರಾಜ್ಯ ವಿಭಾಗೀಯ ಸಂಚಾಲಕಿ ಚಿಕ್ಕವಲಗಮಾದಿ ಲಕ್ಷ್ಮಮ್ಮ , ಮತ್ತಿಕುಂಟೆ ಕೃಷ್ಣ , ಕೋಲಾರದ ಜೈರಾಮ್ , ನಾರಾಯಣಸ್ವಾಮಿ , ಹಾರೋಹಳ್ಳಿ ಮಾಲ , ಬಂಗಾರಪೇಟೆ ನಾಗರತ್ನಮ್ಮ , ಕೋಲಾರ ವರಲಕ್ಷ್ಮಿ , ಬಂಗಾರಪೇಟೆ ರಾಮಪ್ಪ , ಯಲ್ಲಪ್ಪ , ಕೆಜಿಎಫ್ ರಾಧಾಕೃಷ್ಣ ವೆಂಕಟೇಶ್ , ಉನ್ಮುಂದ ಅಮರೇಶ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.