ಕಾಸರಗೋಡ್ (www.vknewes.com) : ಫ್ಯಾಸಿಸ್ಟ್ ವೈರಸ್ ಸೂಕ್ಷ್ಮಾಣು ವೈರಸ್ಗಳಿಗಿಂತಲೂ ಅಪಾಯಕಾರಿಯಾಗಿದೆ ಎಂದು ಖ್ಯಾತ ಕಥಾಗಾರ ಪಿ ಸುರೇಂದ್ರನ್ ಹೇಳಿದರು. ರಾಷ್ಟ್ರದ ಇತಿಹಾಸವನ್ನೂ ಸ್ಮಾರಕಗಳನ್ನೂ ಕೇಸರೀಕರಣಗೊಳಿಸುವ ಫ್ಯಾಸಿಸ್ಟ್ ಶಕ್ತಿಗಳ ಹುನ್ನಾರವನ್ನು ಇಂತಹ ಸೃಜನಶೀಲ ಕಾರ್ಯಕ್ರಮಗಳಿಗೆ ಸಾಧ್ಯವಾಗಬೇಕು. ಸಾರ್ವಜನಿಕ ಆಸ್ತಿಗಳನ್ನೆಲ್ಲಾ ಕೋರ್ಪರೇಟ್ ವರ್ಗಕ್ಕೆ ಮಾರುತ್ತಿರುವ ಫ್ಯಾಸಿಸ್ಟ್ ಆಡಳಿತ ವರ್ಗಕ್ಕೆ ಜನಸಾಮಾನ್ಯರ ಆತಂಕಗಳು ಅರ್ಥವಾಗದು. ಕೊರೋಣ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳೂ ಹೆತ್ತವರೂ ಅನುಭವಿಸುತ್ತಿರುವ ಮಾನಸಿಕ ಅಸ್ವಸ್ಥತೆಗಳಿಗೆ ಪರಿಹಾರವನ್ನು ಉಂಟು ಮಾಡುವುದಾಗಿದೆ ಎಸ್ ಎಸ್ ಎಫ್ ಸಾಹಿತ್ಯೋಲ್ಸವ್ಗಳು.
ಎಸ್ ಎಸ್ ಎಫ್ ಕಾಸರಗೋಡ್ ಜಿಲ್ಲಾ ಇಪ್ಪತ್ತೆಂಟನೆಯ ಸಾಹಿತ್ಯೋಲ್ಸವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು.
ಎಸ್ ವೈ ಎಸ್ ಮಾಜಿ ಜಿಲ್ಲಾಧ್ಯಕ್ಷರಾದ ಸಯ್ಯಿದ್ ಪಿ ಎಸ್ ಆಟ್ಟಕೋಯ ಬಾಹಸನ್ ತಂಙಳ್ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೋಗ್ರಾಂ ಕಮಿಟಿ ಚೆಯರ್ಮ್ಯಾನ್ ಬಾದುಷ ಹಾದಿ ಅಧ್ಯಕ್ಷತೆ ವಹಿಸಿದರು.
ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಫಿರ್ದೌಸ್ ಸಖಾಫಿ ಕಡವತ್ತೂರ್ ಸಂದೇಶ ಭಾಷಣ ಮಾಡಿದರು.
ಸಯ್ಯಿದ್ ಮುನೀರ್ ತಂಙಳ್, ಬಿ ಎಸ್ ಅಬ್ದುಲ್ಲ ಕುಂಞಿ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಸಿ ಎಲ್ ಹಮೀದ್, ಅಹ್ಮದ್ ಬಂಡಿಚ್ಚಾಲ್, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ, ಇಬ್ರಾಹಿಂ ಸಅದಿ ಮಳಿ, ನೂರ್ ಮುಹಮ್ಮದ್ ಹಾಜಿ ಮುಂತಾದವರು ವಿವಿಧ ಅವಾರ್ಡ್ ದಾನ ನಡೆಸಿದರು.
ಸ್ವಾದಿಕ್ ಆವಳಂ, ಅಝೀಝ್ ಸಖಾಫಿ ಮಚ್ಚಂಬಾಡಿ, ಹಾರಿಸ್ ಹಿಮಮಿ ಪರಪ್ಪ, ಅಝೀಝ್ ಝೈನಿ ಉಪಸ್ಥಿತರಿದ್ದರು.
ನಂಶಾದ್ ಬೇಕೂರ್ ಸ್ವಾಗತವನ್ನೂ ಫಾರೂಕ್ ಸಖಾಫಿ ಏರೋಲ್ ಧನ್ಯವಾದನ್ನೂ ಹೇಳಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.