ಹುಮನಾಬಾದ (www.vknewes.com) : ಜಗತ್ತಿನ ಮೂರನೆಯ ಶಿಕ್ಷಣ ಸ್ಥಾನದಲ್ಲಿ ಭಾರತವಿದೆ. ಖಾಸಗಿ, ಸರಕಾರಿ, ಅರೆ ಸರಕಾರಿ ಡೀಮ್ಡ ವಿಶ್ವವಿದ್ಯಾಲಯ ೮೮೨ ಯು.ಜಿ.ಸಿ ಅಡಿಯಲ್ಲಿವೆ.೫೩ಸಾವಿರ ಕ್ಕೂ ಹೆಚ್ಚು ಕಾಲೇಜು,೩.೪ ಕೋಟಿ ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಕೈಗೊಂಡ ಭಾರತದಲ್ಲಿ ೨೦೨೦ ಹೊಸ ಶಿಕ್ಷಣ ನೀತಿ ಕಾಲದಿಂದ ಕಾಲಕ್ಕೆ ಬದಲಾವಣೆಗೊಂಡು ಬರುತ್ತಿದೆ.ಹೀಗಾಗಿ ನಮಗೆ ಹೊಸ ಶಿಕ್ಷಣ ನೀತಿ ಅಗತ್ಯವಿದೆ ಎಂದು ಇತಿಹಾಸ ಪ್ರಾಧ್ಯಾಪಕ ಮತ್ತು ಶಿಕ್ಷಣ ತಜ್ಞ ಡಾ.ಅರುಣಕುಮಾರ ನರೋಣಕರ್ ನುಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಅನುಷ್ಠಾನ ಕುರಿತು ಒಂದು ದಿನದ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಿಕ್ಷಣ ಮಹತ್ವ ಅರಿವಿರಬೇಕು ಅದನ್ನು ಉನ್ನತ ಶಿಕ್ಷಣ ಮೊದಲ ಬಾರಿಗೆ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತಂದಿರುವು ದು ಸ್ವಾಗತಾರ್ಹ ವೆಂದರು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ ನೀಡಿದ ಡಾ.ಶಾಂತಕುಮಾರ ಬನಗುಂಡಿ ಅವರು ಹೊಸ ನೀತಿಯ ಸಾಧಕ ಭಾದಕ ಕುರಿತು ಅವಶ್ಯಕತೆಯನ್ನುವಿವರಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದ ಮಾತನಾಡಿ ಜಗತ್ತಿನ ಶಿಕ್ಷಣ ಇಂದು ಮನೆ ಬಾಗಿಲಿಗೆ ಬರುತ್ತಿದೆ.ಪ್ರಧಾನಿ ಮೋದಿ ಅವರ ಹೊಸ ಕಲ್ಪನೆಯೇ ಈ ಶಿಕ್ಷಣ ನೀತಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಡಾ.ಸಂಜುಕುಮಾರ,ಪ್ರೇಮಲತಾ,ಡಾ.ಸಚಿನ್ ಕೆ. ಡಾ.ರವಿ ಬೌದ್ಧೆ,ಡಾ.ಜಯದೇವಿ ಗಾಯಕವಾಡ,ಡಾ.ರೂತಾ,ಅಶ್ವಿನಿ.ದಿಲೀಪ ಪತಂಗೆ,ಶಿವಾಜಿ ರಾಠೋಡ,ಗೌತಮ,ಡಾ.ಮಲ್ಲಿಕಾರ್ಜುನ ಬಾಳಿ ಡಾ.ಗೌತಮ ಕಾಂಬಳೆ,ಡಾ.ಜಯಶ್ರೀ ಶೆಟ್ಟಿ,ಫಮಿದಾ ಬೇಗಂ,ಗ್ರಂಥಪಾಲಕ ರಾಜಕುಮಾರ ಟಿ., ಇತರರು ಉಪಸ್ಥಿತರಿದ್ದರು.
ಡಾ.ರಾಜಾಬಾಯಿ ಸ್ವಾಗತಿಸಿದರು.ಡಾ.ಪ್ರಹ್ಹಾದ ಚೇಂಗೆ ನಿರೂಪಿಸಿದರು.ಡಾ.ರವಿ ನಾಯಕ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.