ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ವಿಭಾಗದಿಂದ “ಮಹಿಳೆಯರ ಸುರಕ್ಷತೆ ದೇಶದ ಹೊಣೆ” ಎಂಬ ಧ್ಯೇಯದಡಿಯಲ್ಲಿ ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನವನ್ನು 12.09.2021 ರಿಂದ 19.09.2021 ರವರೆಗೆ ಹಮ್ಮಿಕೊಂಡಿದ್ದು, ಇದರ ವಿದ್ಯುಕ್ತ ಚಾಲನೆಯನ್ನು ಇಂದು ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯ ಮೂಲಕ ನಡೆಸಲಾಯಿತು.ಪ್ರಸ್ತುತ ಪತ್ರಿಕಾ ಗೋಷ್ಠಿಯಲ್ಲಿ ಅಭಿಯಾನ ಸಂಚಾಲಕಿ ಶ್ರೀಮತಿ ಮಮ್ತಾಝ್ ವಾಮಂಜೂರು, ಪಕ್ಷದ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮರಿಯಂ ಶಹೀರ, ಅಭಿಯಾನ ಸದಸ್ಯೆಯರಾದ ಶ್ರೀಮತಿ ಜ್ಯೋತಿ ಮತ್ತು ಶ್ರೀಮತಿ ಝೀನತ್ ಇಸ್ಮಾಯಿಲ್ ರವರು ಉಪಸ್ಥಿತರಿದ್ದರು.
ಮಹಿಳೆಯರ ಸುರಕ್ಷತೆ – ದೇಶದ ಹೊಣೆ ಎಂಬ ಶೀರ್ಷಕೆಯಡಿಯಲ್ಲಿನ, ಈ ಅಭಿಯಾನದ ಮುಖ್ಯ ಉದ್ದೇಶಗಳೆಂದರೆ, ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸುವುದು,ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು, ಮಹಿಳೆಯರ ಸುರಕ್ಷತೆಯ ಹೊಣೆ ಸರಕಾರದ್ದಾಗಿದ್ದು, ಸರಕಾರಕ್ಕೆ ಅದರ ಹೊಣೆಗಾರಿಕೆಯನ್ನು ನೆನಪಿಸುವುದು, ಮಹಿಳಾ ಸಬಲೀಕರಣದ ಅಂಗವಾಗಿ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸುವುದು. ಎಂಬಿತ್ಯಾದಿಗಳಾಗಿರುವುದಾಗಿ ಅವರು ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅಲ್ಲದೆ ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮಹಿಳಾ ಸುರಕ್ಷತಾ ಜಾಗೃತಿಯ ಬಗ್ಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು ಅದರಂತೆ, ಪತ್ರಿಕಾಗೋಷ್ಠಿ, ರ್ಯಾಲಿ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್ಸ್, ಇತರ ಮಹಿಳಾ ಸಂಘಟನೆ ಜತೆ ಸಂವಾದ ಹಾಗೂ ಸೆಪ್ಟೆಂಬರ್ 14 ರಂದು ಉಳ್ಳಾಲದಲ್ಲಿ ವಿಚಾರಗೋಷ್ಠಿ, ಸೆಪ್ಟೆಂಬರ್ 16 ರಂದು ವಿಟ್ಲದಲ್ಲಿ ವಿಚಾರ ವಿನಿಮಯ, ಸೆಪ್ಟೆಂಬರ್ 18 ರಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ ಮತ್ತು ಸೆಪ್ಟೆಂಬರ್ 19 ವೆಬಿನಾರ್ ಮೂಲಕ ಅಭಿಯಾನಕ್ಕೆ ಸಮಾರೋಪ ಕಾರ್ಯಕ್ರಮಗಳನ್ನು ಮಾಡಲಾಗುವುದೆಂದು ತಿಳಿಸಿದ ಅವರು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಾರ್ವಜನಿಕರ ಸಹಕಾರವನ್ನು ಕೋರುವುದಾಗಿ ಪಕ್ಷದ ಮಹಿಳಾ ಸಂಘಟಕರು ತಿಳಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.