ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಲೋಕಾಯುಕ್ತ ಡಿ.ವೈ.ಎಸ್.ಪಿ ಕೃಷ್ಣಮೂರ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಅವರಿದ್ದ ತಂಡ ಸೋಮವಾರ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಅನುಸರಿಸಲಾಗಿದೆಯೇ , ಎಸ್ಒಪಿ ಪಾಲಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಮದನಹಳ್ಳಿ ಕ್ರಾಸ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಲ್ಲಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಅವರು , ಶಾಲೆಯಲ್ಲಿ ಕೊಎಡ್ ಮಾರ್ಗಸೂಚಿ ಪಾಲನೆಯಾಗುತ್ತಿರುವುದನ್ನು ದೃಢಪಡಿಸಿಕೊಂಡರು. ಶಾಲೆಯ ಮುಖ್ಯ ಶಿಕ್ಷಕ ವಿಜಯಾನಂದ್ , ಶಾಲೆಯಲ್ಲಿ ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಪಾಡಿರುವುದು , ಸ್ಯಾನಿಟೈಸರ್ , ಮಾಸ್ಕ್ ಬಳಕೆ ಕುರಿತು ಡಿವೈಎಸ್ಪಿ ನೇತೃತ್ವದ ತಂಡದ ಗಮನ ಸೆಳೆದಿದ್ದು , ಮೆಚ್ಚುಗೆ ವ್ಯಕ್ತವಾಯಿತು.
ಇದಾದ ನಂತರ ಮುಳ್ಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ತೊಟ್ಲಿ ಶಾಂತಿನಿಕೇತನ ಸೌಢಶಾಲೆ , ಸುಗಟೂರಿನ ಸಬರಮತಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ , ಶಾಲೆಗಳಲ್ಲಿ ಕೋಪಡ್ ತಡೆಗೆ . ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಇದಾದ ನಂತರ ನಗರದಲ್ಲಿನ ಬಾಲಕರ. ಬಾಲಕಿಯರ ಪದವಿ ಪೂರ್ವ ಕಾಲೇಜುಗಳಿಗೆ ತಂಡ ಭೇಟಿ ನೀಡಿ , ಎಸ್ಒಪಿ ಪಾಲನೆಯಾಗಿರುವುದನ್ನು ಖಚಿತಪಡಿಸಿಕೊಂಡಿತು. ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಮೂರ್ತಿ , ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕಾಗಿದೆ . ಮಕ್ಕಳಿಗೆ ಸಾಮಾಜಿಕ ಆ ೦ ತರ ಕಾಪಾಡಲು ನಿರಂತರವಾಗಿ ಅರಿವು ಪಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ , ಕೊವಿಡ್ ಕಾರ್ಮೋಡ ದೂರ ಸರಿಯುತ್ತಿರುವುದರಿಂದ ಶಾಲೆಗಳ ಆರಂಭವಾಗುತ್ತಿದೆ , ಸರ್ಕಾರ ಶೀಘ್ರವೇ ೧ ರಿಂದ ೫ ನೇ ತರಗತಿಗೂ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯ ಇರುವುದರಿಂದ ಕೋವಿಡ್ ಮಾರ್ಗಸೂಚಿ ಪಾಲನೆಗೆ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದರು. ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆ , ಕುಡಿಯಲು ಬಿಸಿನೀರು ಒದಗಿಸಲು ಕೋರಿದ ಅವರು , ಆದಷ್ಟು ಮಕ್ಕಳನ್ನು ಮನೆಯಿಂದಲೇ ನೀರು ತರಲು ತಿಳಿಸಿ ಎಂದರು . ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರುಗಳಾದ ವಿಜಯಾನಂದ್ , ರಮೇಶ್ಗೌಡ , ಕೆಂಪೇಗೌಡ , ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.