ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ಸಹಕಾರಿಗಳ ಆರೋಗ್ಯ ರಕ್ಷಣೆಗೆ ನೆರವಾಗುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರುಜಾರಿ ಸಾಧ್ಯತೆ ಹೆಚ್ಚಿದ್ದು , ಈ ಸಂಬಂಧ ಮುಖ್ಯಮಂತ್ರಿಗಳು ರಾಜ್ಯದ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರುಗಳ ಸಭೆ ಕರೆದಿದ್ದಾರೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೦ ೨೧ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಟೀಕೆಗಳನ್ನು ಮೆಟ್ಟಿ ಕೆಲಸ ಮಾಡೋಣ ಸಹಕಾರಿ ರಂಗದ ಗಂಧವೇ ತಿಳಿಯದವರು ಸ್ವಾರ್ಥ ರಾಜಕೀಯಕ್ಕಾಗಿ ಮಾಡುವ ಟೀಕೆಗಳನ್ನು ಮೆಟ್ಟಿನಿಂತು ಸಾಲ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಂಕಲದೊಂದಿಗೆ ಸಂಘವನ್ನು ಮುನ್ನಡೆಸಿ ಎಂದು ಕರೆ ನೀಡಿದರು. ಸಹಕಾರಿ ವ್ಯವಸ್ಥೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ಟೀಕಾಕಾರರು ಹೆಚ್ಚು . ಇದರಿಂದ ನಾವು . ಮತ್ತಷ್ಟು ಎಚ್ಚೆತ್ತು ಕೆಲಸ ಮಾಡಲು ಸಹಕಾರಿ ಎಂದ ಅವರು , ಇದು ತಪ್ಪು ಹುಡುಕುವ ಜಾಗವಾಗಿದ್ದು , ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಸಹಕಾರಿ ರಂಗ ಮುಳ್ಳಿನ ಹಾಸಿಗೆ ಇದ್ದಂತೆ , ಕೆ.ಎಸ್ ಗಣೇಶ್ ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನಡೆಸಿದ್ದಾರೆ ಎಂದ ಅವರು , ಪತ್ರಕರ್ತರ ಸಂಘವನ್ನು ಮುನಿರಾಜು ಸೇರಿದಂತೆ ಈವರೆಗೂ ಅಧ್ಯಕ್ಷರಾದವರು ಚೆನ್ನಾಗಿ ಮುನ್ನಡೆಸಿದ್ದು , ರಾಜ್ಯದಲ್ಲೇ ಅತಿ ಸುಂದರ ಭವನ ಕಟ್ಟಿದ್ದಾರೆ ಎಲ್ಲರಿಗೂ ಅಭಿನಂದನೆ ಎಂದರು .
ಯಶಸ್ವಿನಿಯೋಜನೆ ಮರುಜಾರಿ ಸಾಧ್ಯತೆ ಮಾಜಿ ಸಚಿವ ರಮೇಶ್ಕುಮಾರ್ ಅವರು ಸರ್ಕಾರಿ ಆಸ್ಪತ್ರೆಗೆ ಪ್ರತಿಯೊಬ್ಬರೂ ಹೋಗಬೇಕೆಂದು ಆಯುಷ್ಕಾನ್ ಕರ್ನಾಟಕ ಯೋಜನೆಗೆ ಮುಂದಾದರು. ಆದರೆ ಇಂದು ಉತ್ತಮ ಚಿಕಿತ್ಸಾ ಸೌಲಭ್ಯಕ್ಕೆ ಯಶಸ್ವಿನಿ ಯೋಜನೆಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು , ಮರು ಜಾರಿಯಾಗುವ ಸಾಧ್ಯತೆ ಇದೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ಜಿಲ್ಲಾ ಪತ್ರಕರ್ತರ ಸಹಕಾರ ಸಂಘ ರಾಜ್ಯದಲ್ಲೇ ೨ ನೇ ಸ್ಥಾನ ಪಡೆದಿದೆ .೧೪ ವರ್ಷಗಳಿಂದ ಗಣೇಶ್ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ . ಈ ವಾರ್ಷಿಕ ಮಹಾಸಭೆಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
೨.೬೮ ಲಕ್ಷರೂಗಳ ನಿವ್ವಳ ಲಾಭ – ಗಣೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ . ಲಕ್ಕಪರಿಶೋಧನಾ ವರದಿ ಮಂಡಿಸಿ , ೨೦೦೭ ರಲ್ಲಿ ಆರಂಭಗೊಂಡ ಸಂಘದಲ್ಲಿ ೨೯೩ ಮಂದಿ ಷೇರುದಾರರಿದ್ದು . ಷೇರು ಹಣ . ಸದಸ್ಯರು ನಿವೇಶನಕ್ಕಾಗಿ ಕೂಡಿಟ್ಟ ಹಣ ಸೇರಿ ಡಿಸಿಸಿ ಬ್ಯಾಂಕಿನಲ್ಲಿ ೬೦.೩೧೧೮ ರೂಗಳಿದ್ದು , ೨.೬೮೫೫೧ ರೂ ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಾಲದ ಪ್ರಮಾಣ ೨೫ ಸಾವಿರಕ್ಕೆ ಏರಿಕೆ ಸಂಘ ಈವರೆಗೂ ತನ್ನ ಸದಸ್ಯರಿಗೆ ೨೦ ಸಾವಿರ ಸಾಲ ನೀಡುತ್ತಿದ್ದು , ಇದೀಗ ಮರುಪಾವತಿಯಲ್ಲಿನ ಪ್ರಾಮಾಣಿಕತೆ ಪರಿಗಣಿಸಿ ಇದೀಗ ೨೫ ಸಾವಿರಕ್ಕೆ ಏರಿಸಲು ತೀರ್ಮಾನಿಸಿದೆ ಎಂದಾಗ ಸಭೆ ಅನುಮೋದಿಸಿತು. ಕಾರ್ಯದರ್ಶಿ ಗಂಗಾಧರ್ ಸೇರಿದಂತೆ ಯಾವುದೇ ವೇತನಗೌರವಧನವಿಲ್ಲದೇ ಕೆಲಸ ಮಾಡಿದ್ದು , ಒಂದು ಪೈಸೆಯೂ ವೆಚ್ಚ ಮಾಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಆಯುಷ್ಯಾನ್ಸ್ ಕರ್ನಾಟಕ ಯೋಜನೆಯಿಂದ ಹೆಚ್ಚೇನೂ ಲಾಭವಾಗಿಲ್ಲ , ಸರ್ಕಾರ ಸಹಕಾರ ರಂಗದ ಸದಸ್ಯರಿಗಾಗಿ ಇರುವ ಯಶಸ್ವಿನಿಯೋಜನೆ ಮರುಜಾರಿ ಮಾಡಬೇಕು ಎಂದು ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಸಂಘದಿಂದ ಚಿಕ್ಕಬಳ್ಳಾಪುರದ ಸದಸ್ಯರಿಗೆ ದಿನಸಿ ಕಿಟ್ ನೀಡಿದ್ದು , ಕೋಪಡ್ ಜಾಗೃತಿ ಮೂಡಿಸಿದ್ದು ಮತ್ತಿತರ ಕಾರ್ಯಗಳನ್ನು ಸ್ಮರಿಸಿಕೊಂಡರು.
ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ , ಕೋವಿಡ್ ಆತಂಕದ ನಡುವೆ ಸ್ವಲ್ಪ ಹಿನ್ನಡೆಯಾಗಿದ್ದರೂ , ಸಂಘ ಸದಸ್ಯರಿಗೆ ನೆರವು ನೀಡುತ್ತಲೇ ಬಂದಿದೆ . ಸಂಘ ಕ್ರಿಯಾಶೀಲವಾಗಿದ್ದು , ಪತ್ರಕರ್ತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮುಂದುವರೆದಿದೆ ಎಂದರು. ಸಹಕಾರ ಸಂಘದ ನಿರ್ದೇಶಕ ಹಾಗೂ ಪತ್ರಕರ್ತರ ಸಂಘದ ಖಜಾಂಚಿ ಎ.ಜಿ , ಸುರೇಶ್ಕುಮಾರ್ ಸ್ವಾಗತಿಸಿದ
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್ , ಹಿರಿಯ ಪತ್ರಕರ್ತ ಎಂ.ಜಿ. ಪಾಕರ್ , ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಎಸ್. ಮುರಳೀಧರ್ , ಬಿ.ಸುರೇಶ್ ಎಸ್.ಎನ್ . ಪ್ರಕಾಶ್ ನಾಗರಾಜಯ್ಯ ನಾರಾಯಣಪ್ಪ . ಪಿ.ಎಸ್ .ವಾಸ್ ಗೋಪಿಕಾ ಮಲ್ಲೇಶ್ , ಎನ್.ಮುನಿಯಪ್ಪ , ಸಿಇಒ ಗಂಗಾಧರ್ ಸೇರಿದಂತೆ ಸಂಘದ ಎರಡೂ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ಸದಸ್ಯರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.