(www.vknews.com) : ಭಾರತ ಸರ್ಕಾರವು ಘೋಷಿಸಿರುವ ಸುಧಾರಣೆ ಮತ್ತು ಪರಿಹಾರ ಪ್ಯಾಕೇಜ್ ಅನ್ನು ಜಿಯೋ ಸ್ವಾಗತಿಸಿದೆ. ಇದು ಭಾರತದ ದೂರಸಂಪರ್ಕ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಕಾಲಿಕ ಹೆಜ್ಜೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಯ ಸಾಕ್ಷಾತ್ಕಾರವನ್ನು ವೃದ್ಧಿಸಲಿದೆ ಮತ್ತು ಭಾರತವನ್ನು ಮುಂಚೂಣಿ ಡಿಜಿಟಲ್ ಸಮಾಜವನ್ನಾಗಿ ಪರಿವರ್ತಿಸಲು ನೆರವಾಗಲಿದೆ.
ಡಿಜಿಟಲ್ ಕ್ರಾಂತಿಯ ಫಲವನ್ನು 1.35 ಬಿಲಿಯನ್ ಭಾರತೀಯರಿಗೆ ನೀಡುವುದು ಜಿಯೋದ ಗುರಿಯಾಗಿದೆ. ಈ ಯೋಜನೆಯ ಮಾರ್ಗದರ್ಶನದೊಂದಿಗೆ, ಭಾರತೀಯರು ಜಗತ್ತಿನಲ್ಲಿಯೇ ಉತ್ಕೃಷ್ಟ ಗುಣಮಟ್ಟ ಮತ್ತು ಉತ್ಕೃಷ್ಟ ಪ್ರಮಾಣದ ಡೇಟಾವನ್ನು ಅತ್ಯಂತ ಕಡಿಮೆ ದರಗಳಲ್ಲಿ ಪಡೆಯಲು ಅನುವಾಗುವಂತೆ ನಾವು ಮಾಡಿದ್ದೇವೆ. ಸರ್ಕಾರದ ದೂರಸಂಪರ್ಕ ವಲಯ ಸುಧಾರಣೆಗಳು ನಮ್ಮ ಗ್ರಾಹಕರಿಗೆ ಹೊಸ ಹಾಗೂ ಹೆಚ್ಚಿನ ಪ್ರಯೋಜನಗಳನ್ನು ನೀಡಲು ನಮಗೆ ಉತ್ತೇಜನ ನೀಡಲಿವೆ.
ಡಿಜಿಟಲ್ ಇಂಡಿಯಾ ಯೋಜನೆಯ ಎಲ್ಲ ಗುರಿಗಳನ್ನು ಹಾಗೂ ಮೈಲುಗಲ್ಲನ್ನು ತಲುಪುವುದಕ್ಕಾಗಿ ನಾವು ಭಾರತ ಸರ್ಕಾರದೊಂದಿಗೆ ಮತ್ತು ಉದ್ಯಮದ ಇತರೆ ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಇದರಿಂದ ನಾವು ಸಂಘಟಿತವಾಗಿ ಆರ್ಥಿಕತೆಯ ಪ್ರತಿ ವಲಯವನ್ನೂ ಉತ್ಪಾದಕವನ್ನಾಗಿಸುವಂತೆ ಮತ್ತು ಪ್ರತಿ ಭಾರತೀಯನ ಜೀವನ ನಿರ್ವಹಣೆಯನ್ನು ವೃದ್ಧಿಸುವಂತೆ ಮಾಡಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಶ್ರೀ ಮುಕೇಶ್ ಡಿ ಅಂಬಾನಿ,”ದೂರಸಂಪರ್ಕ ವಲಯವು ಆರ್ಥಿಕತೆಯ ಪ್ರಮುಖ ಚಾಲನಶಕ್ತಿಗಳಲ್ಲಿ ಒಂದಾಗಿದೆ ಮತ್ತು ಭಾರತವನ್ನು ಡಿಜಿಟಲ್ ಸಮಾಜವನ್ನಾಗಿ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಡಿಜಿಟಲ್ ಇಂಡಿಯಾದ ಗುರಿಗಳನ್ನು ಈಡೇರಿಸಲು ಉದ್ಯಮಕ್ಕೆ ನೆರವಾಗುವಂತಹ ಭಾರತ ಸರ್ಕಾರದ ಸುಧಾರಣೆ ಮತ್ತು ಪರಿಹಾರ ಕ್ರಮಗಳ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಈ ದಿಟ್ಟ ನಿರ್ಧಾರಕ್ಕೆ ಗೌರವಾನ್ವಿತ ಪ್ರಧಾನಿ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ಹೇಳಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.