ಬಂಟ್ವಾಳ (www.vknews.com) ; ಹೊಸ ರಾಷ್ಟ್ತ್ರೀಯ ಶಿಕ್ಷಣ ನೀತಿ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಬಂಟ್ವಾಳದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಅಶ್ಫಾಕ್ ತಲಪಾಡಿ ಲಾಠಿ ಏಟಿನ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಫ್ಯಾಶಿಸ್ಟ್ ಸರ್ಕಾರದ ಪ್ರಯತ್ನವು ಮೂರ್ಖತನವಾಗಿದೆ. NEP ವಿರುದ್ಧವಾಗಿ ನಮ್ಮ ಹೋರಾಟವು ಇನ್ನಷ್ಟು ಶಕ್ತಗೊಳ್ಳಲಿದೆ ಎಂದು ಹೇಳಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಕ್ಷೇತ್ರ ಸಮಿತಿಯ ಸದಸ್ಯರಾದ ಅಕ್ಬರ್ ಅಲೀ ಪೊನ್ನೋಡಿ NEPಯು ನಾಗಪುರ್ ಎಜುಕೇಶನ್ ಪಾಲಿಸಿಯಾಗಿದೆ. ಇದರ ವಿರುದ್ಧ ಸಮಾನಮನಸ್ಕ ನಾಗರಿಕರು ಜಾಗ್ರತಾರಾಗಬೇಕಾಗಿದೆ. ಇಂತಹ ಕರಾಳ ನೀತಿಯ ವಿರುದ್ಧ ಮಾತನಾಡುತ್ತಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಕಾಲದ ಬೇಡಿಕೆಯಾಗಿದೆ. ಜಿಲ್ಲಾ ನಾಯಕಿ ಗೌಸಿಯಾ NEP ಯ ಲೋಪ ದೋಷಗಳ ಬಗ್ಗೆ ಸಂಕ್ಷಿಪ್ತವಾಗಿ ಜಾಗ್ರತ ಮೂಡಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ಕಾರ್ಯದರ್ಶಿ ಐಮಾನ್ ಬಂಟ್ವಾಳ, ವಿಟ್ಲ ಕಾರ್ಯದರ್ಶಿ ಸಜ್ಜಾದ್ ಮೆಲ್ಕಾರ್ ಮತ್ತು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಉಪಸ್ಥಿತರಿದ್ದರು. ಶಂಶುದ್ದೀನ್ ಕಾರ್ಯಕ್ರವನ್ನು ನಿರೂಪಿಸಿ ವಂದಿಸಿದರು
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ – ಬಂಟ್ವಾಳ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.