ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಹೊರವಲಯದಲ್ಲಿನ ಸಂಜಿವೀನಿ ಚಾರಿಟಬಲ್ ಟ್ರಸ್ಟ್ (ರಿ.) ನ ಕಚೇರಿಯಲ್ಲಿ ಇಂದು ಮಾಲೂರಿನ ಸಮಾಜ ಸೇವಕರು, ಬಿ.ಜೆ.ಪಿ ಮುಖಂಡರು, ಹಾಗೂ ರಾಜ್ಯ ಫಲಾನುಭಾವಿಗಳ ಪ್ರಕೋಷ್ಟದ ಸದಸ್ಯರಾದ ಹೂಡಿ ವಿಜಯ್ ಕುಮಾರ್ ರವರು ಸುದ್ದಿಗೋಷ್ಟಿ ಆಯೋಜಿಸಿದ್ದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿ.ಜೆ.ಪಿ ಮುಖಂಡರು ಹಾಗೂ ರಾಜ್ಯ ಬಿಜೆಪಿ ಫಲಾನುಭಾವಿಗಳ ಪ್ರಕೋಷ್ಟದ ಸದಸ್ಯರಾದ ಹೂಡಿ ವಿಜಯ್ ಕುಮಾರ್ ರವರು ಮಾತನಾಡಿ “ಭಾರತ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ರವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಕರೋನಾ ಸಂಕಷ್ಟದ ಸಂದರ್ಭದಲ್ಲಿ, ಕರ್ನಾಟಕ ರಾಜ್ಯದಲ್ಲಿ ಆವರಿಸಿರುವ ರಕ್ತದ ಕೊರತೆ ನಿಗಿಸುವ ಮೂಲಕ ಜೀವ ಉಳಿಸುವ ಕಾರ್ಯ ಮಾಡಲು ಸಜ್ಜಾಗಿದ್ದೇವೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟುಹಬ್ಬವನ್ನು ರಾಷ್ಟ್ರದಲ್ಲಿ ವಿಶೇಷವಾಗಿ ಆಚರಿಸುವ ಗುರಿ ಹೊಂದಲಾಗಿದೆ. ಎಲ್ಲಾ ಯುವ ಜನಾಂಗ ಬಂದು ಭಾಗವಹಿಸಿ ಯಶಸ್ವಿಗೋಳಿಸಿ” ಎಂದರು.
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಬಿ.ಜೆ.ಪಿಯ ಮಾಜಿ ಉಪಾಧ್ಯಕ್ಷರಾದ ಆರ್.ಪ್ರಭಾಕರ್ ರವರು ಮಾತನಾಡಿ “ಬಿ.ಜೆ.ಪಿ ಫಲಾನುಭಾವಿಗಳ ಪ್ರಕೋಷ್ಟದ ಮೂಲಕ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸುತ್ತಿರುವ ಬೃಹತ್ ರಕ್ತದಾನ ಶಿಬಿರ ದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ಕೆ ಸ್ಪಂದಿಸಬೇಕಾಗಿ ಕಳಕಳಿಯ ಮನವಿ” ಎಂದರು.
ಬಿ.ಜೆ.ಪಿ ಫಲಾನುಭಾವಿಗಳ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕರಾದ ಪ್ರಸನ್ನ ನಾಯಕ ರವರು ಮಾತನಾಡಿ “ಸೇವೆ ಹಾಗೂ ಸಮರ್ಪಣೆಯ ಪ್ರಮುಖ ಮಂತ್ರದ ಮೂಲಕ ಮಾಲೂರಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವ ಈ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲ ಸೂಚಿಸಿ, ಭಾರತದ ಪ್ರಧಾನಿ ಮೋದಿ ರವರ ಹುಟ್ಟುಹಬ್ಬದಲ್ಲಿ ಗೌರವ ಸೂಚಿಸೋಣಾ” ಎಂದರು.
ಸುದ್ದಿಗೋಷ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೇನಹಳ್ಳಿ ಗುರುನಾಥ ರೆಡ್ಡಿ. ದೇವರಾಜ ರೆಡ್ಡಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಿ.ಜಿ.ಹರೀಶ್ ಗೌಡ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ಪುರಸಭಾ ಸದಸ್ಯ, ಫಲಾನುಭಾವಿಗಳ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕರಾದ ಭಾನುತೇಜಾ, ದೊಡ್ದಿ ರಾಜಪ್ಪ, ರೇಣುಕಾ ಪ್ರಸಾದ್, ಜ್ಯೋತಿಷ್, ಸಂಪಂಗೆರೆ ಅಶ್ವಥ್, ಕಾರ್ತಿಕ್ ಹಾಗೂ ಅನೇಕ ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.