ಮಸ್ಕತ್(www.vknews.in): ಒಮಾನ್ ನಲ್ಲಿರುವ ಸೀಬ್ ಇಂಡಿಯನ್ ಸ್ಕೂಲ್ ನಲ್ಲಿ ಎರಡನೇ ತರಗತಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ಟೋಪಿ ಗಡ್ಡ ಧರಿಸಿದ ವ್ಯಕ್ತಿಯನ್ನು ಭಯೋತ್ಪಾಧಕನೆಂದು ಚಿತ್ರಿಸಿದ ಶಾಲೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶಾಲಾಡಳಿತದ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಎರಡನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿದ ಪ್ರಶ್ನೆಯೊಂದರಲ್ಲಿ ಕೆಳಗಿನವುಗಳಲ್ಲಿ ಯಾವುದು ಸಮುದಾಯ ಸಹಾಯಕರ ವರ್ಗಕ್ಕೆ ಸೇರುವುದಿಲ್ಲ? ಎಂದು ಕೇಳಲಾಗಿದ್ದು, ನಾಲ್ಕು ಆಯ್ಕೆಗಳಲ್ಲಿ ಮೊದಲನೆಯದು ಭಯೋತ್ಪಾದಕನಾಗಿ ಕೈಯಲ್ಲಿ ಗನ್ ಹೊಂದಿರುವ ವ್ಯಕ್ತಿಯ ಚಿತ್ರ. ಚಿತ್ರವು ಟೋಪಿ, ಗಡ್ಡ ಮತ್ತು ಹಣೆಯಲ್ಲಿ ಶಾಷ್ಟಾಂಗದ ಗುರುತನ್ನೂ ತೋರಿಸುತ್ತದೆ. ಈ ಪ್ರಮಾದವಲ್ಲದೇ ಡಾ. ಅಂಬೇಡ್ಕರ್ ಅವರ ಹೆಸರನ್ನೂ ಕೂಡ ಕೇವಲ ಅಂಬೇಡ್ಕರ್ ಎಂದೂ ನಮೂದಿಸಲಾಗಿದೆ. ಇವೆಲ್ಲವೂ ಒಂದು ಅಜೆಂಡಾದ ಭಾಗವಾಗಿದೆಯೆಂದೂ, ಎಳೆಯ ಮಕ್ಕಳ ಮನಸ್ಸಿನಲ್ಲಿ ಸಮುದಾಯವೊಂದರ ಬಗ್ಗೆ ವಿಷಬೀಜ ಬಿತ್ತುವ ಪ್ರಯತ್ನವನ್ನು ಮಾಡುವ ಇಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.