ಉಪ್ಪಿನಂಗಡಿ: ಸಮಾಜದ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ವಿಖಾಯ ತಂಡದಿಂದ ಮಾದರಿ ಶಾಲೆಯಲ್ಲಿ ಶ್ರಮದಾನ
ಕೊರೊನ ಕಾರಣದಿಂದ ಶಿಕ್ಷಣ ಕೊಡಬೇಕಾಗಿರುವ ಶಾಲೆಗಳು ಸುಮಾರು ಎರಡು ವರ್ಷದಿಂದ ಬಾಗಿಲು ಹಾಕಿದ್ದು ಹೆಚ್ಚಿನ ಶಾಲೆಗಳು ಮಕ್ಕಳ ಪಾದ ಸ್ಪರ್ಶವಿಲ್ಲದೇ ಗಿಡ ಗಂಟಿಗಳಿಂದ ತುಂಬಿ ಹೋಗಿವೆ. ಸರಕಾರ ಈಗಾಗಲೇ ಶಾಲೆ ತೆರೆಯುವ ಬಗ್ಗೆ ಶುಭ ಸೂಚನೆಯನ್ನು ನೀಡಿದೆ. ಮಕ್ಕಳ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಸ್ಥಳೀಯ ಪಂಚಾಯತ್ ಗಳು ಸಾನಿಟೈಸರ್ ಮಾಡಿ ಶಾಲಾ ಕೊಠಡಿಗಳನ್ನು ಮಕ್ಕಳಿಗಾಗಿ ತಯಾರು ಮಾಡಲು ಸಹಕರಿಸುತ್ತದೆ. ಆದರೆ ಶಾಲೆಯ ಹೊರಗಿನ ಸ್ವಚ್ಛತೆಗಾಗಿ ಸರಕಾರ ಅಥವಾ ಶಿಕ್ಷಣ ಇಲಾಖೆಯು ಇನ್ನೂ ಯಾವುದೇ ರೀತಿಯ ಅನುದಾನವನ್ನು ಕೊಡುವ ಮನಸ್ಸು ಮಾಡಿಲ್ಲ. ಆದರಿಂದ ಎರಡು ವರ್ಷದ ಮುಂಚೆ ಉಪ್ಪಿನಂಗಡಿ ಯಲ್ಲಿ ನೆರೆ ಬಂದು ಶಾಲೆಯ ಒಳಗೆ ಹೊರಗೆ ಕೆಸರು ತುಂಬಿದ ಸಮಯದಲ್ಲಿ ಸ್ವಚ್ಛತೆಯನ್ನು ಮಾಡಿ ಕೊಟ್ಟಂತಹ ಉಪ್ಪಿನಂಗಡಿಯ ಎಲ್ಲಾ ಸಂಕಷ್ಟ ಗಳಲ್ಲಿ ಕೂಡ ರಾತ್ರಿ ಹಗಲು ಎನ್ನದೆ ಸಹಕಾರವನ್ನು ಕೊಡುವಂತಹ #ವಿಖಾಯ ತಂಡದ ಜಿಲ್ಲಾಧ್ಯಕ್ಷರು ಹಾಗೂ ಮಾದರಿ ಶಾಲೆಯ ಪೋಷಕರು ಆಗಿರುವ ಸಯ್ಯದ್ ಇಸ್ಮಾಯಿಲ್ ತಂಗಲ್ ಮತ್ತು ಫಾರೂಕ್ ಜಿಂದಗಿ ಯವರಲ್ಲಿ ಶಾಲೆಯ ಅಗತ್ಯತೆಯ ಬಗ್ಗೆ ಎಸ್ಡಿಎಂಸಿ ಸದಸ್ಯರಾದ ಮೊಯ್ದಿನ್ ಕುಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದವು ಹೇಳಿದಾಗ . ಶಾಲೆ ಪುನರಾರಂಭದ ಪ್ರಯುಕ್ತ ಶಾಲಾ ಸುತ್ತ ಮುತ್ತ ಸ್ವಚ್ಛತೆ ಮಾಡುವ ಜವಾಬ್ದಾರಿಯನ್ನು ವಹಿಸಿ ಕೊಂಡಿರುತ್ತಾರೆ. ಇದರ ಪ್ರಯುಕ್ತ ಇಂದು ವಿಖಾಯದ 38 ಜನರನ್ನು ಒಳಗೊಂಡ ತಂಡವು ಅಚ್ಚು ಕಟ್ಟಾಗಿ 4 ಯಂತ್ರದ ಸಹಾಯ ದೊಂದಿಗೆ ಶ್ರಮ ದಾನದ ಮೂಲಕ ಸ್ವಚ್ಛತೆಯನ್ನು ಮಾಡಿ ಸೋಮವಾರದಿಂದ ಶಾಲೆಗೆ ಬರುವ ಮಕ್ಕಳಿಗಾಗಿ ಶಾಲೆಯನ್ನು ಅಂದವಾಗಿಸಿ ಕೊಟ್ಟಿದ್ದಾರೆ ಈ ಸಮಯದಲ್ಲಿ ಸ್ಥಳೀಯರಾದ ವಿಖಾಯ ತಂಡದ ಹಿರಿಯರಾದ ಶುಕೂರು ಹಾಜಿ, ಯೂಸುಫ್ ಹಾಜಿ, ಪಂಚಾಯತ್ ಪ್ರತಿನಿಧಿ ಯು ಟಿ ತೌಸೀಫ್ , ಇಲಂತಿಳ ಪಂಚಾಯತ್ ಪ್ರತಿನಿಧಿ ಯೂಸುಫ್ ಪೆದಮಲೆ ,ಯು ಟಿ ಫಯಾಜ್ , ಎಸ್ ಕೆ ಸಿದ್ದೀಕ್ ಆತುರು , ಸಾದಿಕ್ ಕೊಕ್ಕಡ ರವರು ಕೂಡ ಇವರೊಂದಿಗೆ ಕೈ ಜೋಡಿಸಿದರು ಶಾಲೆಯ ಪರಿಸರವನ್ನು ಸ್ವಚ್ಛತೆಯನ್ನು ಮಾಡಿ ಸಹಕರಿಸಿದ ವಿಖಾಯ ತಂಡಕ್ಕೆ ಶಿಕ್ಷಕ ವೃಂದ, ಎಸ್ಡಿಎಂಸಿ ಮತ್ತು ಪೋಷಕರು ಕೃತಜ್ಞತೆಯಿಂದ ಧನ್ಯವಾದವನ್ನು ಸಲ್ಲಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.