(www.vknews.com) : ಕತಾರ್ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ತನ್ನ ಮೂರು ದಶಕಗಳ ಸೇವೆಯ ನೆನಪಿಗಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸ್ಥಾಪನಾ ದಿನವನ್ನು 8 ನೇ ಸೆಪ್ಟೆಂಬರ್ 2021 ರಂದು ಆಚರಿಸಿತು.
ಭಾರತದ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಪ್ರಮುಖ ಭಾರತೀಯ ಸಮುದಾಯದ ಸದಸ್ಯರು ಒಟ್ಟಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐ ಸಿ ಸಿ ) ಕತಾರ್ ಎಂಬ ಉನ್ನತ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸಂಸ್ಥೆಯ ಚೊಚ್ಚಲ ಸಭೆ ಸೆಪ್ಟೆಂಬರ್ 8, 1991 ರಂದು ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದಿತ್ತು. ಮೂರು ದಶಕಗಳ ಯಶಸ್ವೀ ಪ್ರಯಾಣವು ಭಾರತದ ಮಾಜಿ ರಾಯಭಾರಿ ಘನವೆತ್ತ ರಮೇಶ್ ಚಂದ್ರ ಶುಕ್ಲಾ ಅವರ ನೇತೃತ್ವ ದಲ್ಲಿ ಪ್ರಾರಂಭವಾಗಿತ್ತು. ಐ ಸಿ ಸಿ ಕತಾರ್ ನ್ನು ಔಪಚಾರಿಕವಾಗಿ ಅಕ್ಟೋಬರ್ 26, 1992 ರಂದು ಉದ್ಘಾಟಿಸಲಾಗಿತ್ತು.
ಶ್ರೀಮತಿ. ಅಂಶು ಜೈನ್ ದಿನದ ಕಾರ್ಯಕ್ರಮ ನಿರ್ವಾಹಕರಾಗಿ ಸಭೆಯನ್ನು ಮುನ್ನಡೆಸಿದರು. ಶಾಶ್ವತ ಶಾಂತಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂಸ್ಥಾಪಕ ಸದಸ್ಯರ ನೆನಪಿಗಾಗಿ ಒಂದು ನಿಮಿಷದ ಮೌನ ಆಚರಿಸಲಾಯಿತು.
ಶ್ರೀ. ಕೃಷ್ಣಕುಮಾರ್ ಐಸಿಸಿ ಪ್ರಧಾನ ಕಾರ್ಯದರ್ಶಿ ವೇದಿಕೆಯಲ್ಲಿರುವ ಗಣ್ಯರನ್ನು,ಫೇಸ್ಬುಕ್ ಮತ್ತು ಯುಟ್ಯೂಬ್ ಮೂಲಕ ನೇರ ವೀಕ್ಷಕರನ್ನು ಸ್ವಾಗತಿಸಿದರು. ದಾನಿಗಳು, ಸಂಸ್ಥಾಪಕರು, ಆಜೀವ ಸದಸ್ಯರು ಮತ್ತು ಹಿಂದಿನ ವ್ಯವಸ್ಥಾಪನಾ ಸಮಿತಿಗಳು ಮಾಡಿದ ಶ್ರಮವನ್ನು ನೆನಪಿಸಲು ಮತ್ತು ನೆನಪಿಟ್ಟುಕೊಳ್ಳಲು ಐಸಿಸಿ ಸಂಸ್ಥಾಪನಾ ದಿನವನ್ನು ಆಚರಿಸುವುದನ್ನು ಮುಂದುವರಿಸುತ್ತದೆ ಎಂದು ಘೋಷಿಸಿತು.
ಐಸಿಸಿ 1993 ರಿಂದ 95 ರ ಮೊದಲ ಚುನಾಯಿತ ಅಧ್ಯಕ್ಷ ಶ್ರೀ ರೋಲ್ಯಾಂಡ್ ಮೆಂಡೋಂಸ , ಐಸಿಸಿ ರಚನೆಯಲ್ಲಿ ಅವರ ನೆನಪುಗಳು ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. ನೆನಪುಗಳ ಕ್ಷಣಗಳನ್ನು ನೆನಪಿಸಿಕೊಳ್ಳುವುದು ತುಂಬಾ ಭಾವನಾತ್ಮಕವಾಗಿತ್ತು. ಶ್ರೀಮತಿ ನೊರೀನ್ ಪ್ಯಾಟ್ಸಿ ರೊನಾಲ್ಡ್ ಮೆಂಡೋಂಸ ಅವರು ಮೊದಲ ಐಸಿಸಿ ಸಂಸ್ಥಾಪಕ ಸದಸ್ಯರಾಗಿದ್ದರು ಮತ್ತು ಐಸಿಸಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ಉತ್ತಮ ಪ್ರಚಾರಕರಾಗಿದ್ದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. .
ಶ್ರೀ. ಅಂಜನ್ ಗಂಗೂಲಿ ಐಸಿಸಿ ಅಧ್ಯಕ್ಷರಿಗೆ ಐಸಿಸಿ 75 ನೇ ಭಾರತ ಸ್ವಾತಂತ್ರ್ಯೋತ್ಸವದ ಬೆಂಬಲಕ್ಕಾಗಿ ಚೆಕ್ ನೀಡಿದರು. ಭಾರತೀಯ ಸಮುದಾಯಕ್ಕೆ ರೊನಾಲ್ಡ್ ಮೆಂಡೊಂಕಾ ಅವರ ಅತ್ಯುತ್ತಮ ಸೇವೆಗಾಗಿ ಅವರನ್ನು ಶಾಲು ಹೊದಿಸಿ ಗೌರವಿಸಿದರು.
ಎಲ್ಲಾ ನಾಲ್ಕು ಸರ್ವೋಚ್ಚ ಸಂಸ್ಥೆಗಳ ಸ್ಥಾಪಕ ಸದಸ್ಯರಾದ ಶ್ರೀ ಹಸನ್ ಚೌಗ್ಲೆ, ಎರಡು ಅವಧಿಗೆ ಅಧ್ಯಕ್ಷ ಮತ್ತು ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಐಸಿಸಿ ಬಿಕ್ಕಟ್ಟಿನಲ್ಲಿದ್ದಾಗ ಪುನಶ್ಚೇತನಗೊಳಿಸುವ ಸವಾಲನ್ನು ಕೈಗೆತ್ತಿಕೊಂಡಿದ್ದರು . ಸಂವಿಧಾನ ರಚನೆಯಿಂದ ಆರಂಭಗೊಂಡು ಇಲ್ಲಿಯವರೆಗಿನ ತಮ್ಮ ಪ್ರಯಾಣವನ್ನು ಅವರು ಹಂಚಿಕೊಂಡಿದ್ದಾರೆ.
ಐಸಿಸಿ ಅಧ್ಯಕ್ಷ ಶ್ರೀ. ಪಿಎನ್ ಬಾಬು ರಾಜನ್ ಐಸಿಸಿಯನ್ನು ನಿರ್ಮಿಸುವಲ್ಲಿ ಸಂಸ್ಥಾಪಕ ಸದಸ್ಯರ ಸಾಟಿಯಿಲ್ಲದ ಕೊಡುಗೆಗಳು ಮತ್ತು ತ್ಯಾಗಗಳನ್ನು ಶ್ಲಾಘಿಸಿದರು.
ಸಂಜೆಯ ಮುಖ್ಯ ಅತಿಥಿ ಡಾ. ದೀಪಕ್ ಮಿತ್ತಲ್ ಕತಾರ್ನ ಭಾರತದ ರಾಯಭಾರಿ, ಐಸಿಸಿ ಮೂರು ದಶಕಗಳ ಅಸ್ತಿತ್ವದಲ್ಲಿ ಸರ್ವೋಚ್ಚ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಎಲ್ಲಾ ಹಿಂದಿನ ಸಮುದಾಯದ ನಾಯಕರ ಪ್ರಯತ್ನ ಮತ್ತು ಅವರ ಶ್ರಮವು ಇಂದಿಗೂ ಎದ್ದು ಕಾಣುತ್ತಿದೆ ಎಂದರು.
ಸಮಾರಂಭದಲ್ಲಿ ಕ್ಸೇವಿಯರ್ ಧನರಾಜ್, ಸಿ ಇ ಓ ಐಸಿಸಿ , ಶ್ರೀ. ಕೆ.ಎಸ್. ಪ್ರಸಾದ್ ಐಸಿಸಿ ಸಲಹಾ ಅಧ್ಯಕ್ಷರು, ಹಿಂದಿನ ಅಧ್ಯಕರುಗಳಾದ ಶ್ರೀ. ಕೆ ಎಂ ವರ್ಗೀಸ್, ಶ್ರೀಮತಿ ಮಿಲನ್ ಅರುಣ್, ಶ್ರೀ ಮಣಿಕoಟನ್. ಇತರ ಪ್ರಮುಖ ಭಾರತೀಯ ಸಮುದಾಯದ ನಾಯಕರು ಮತ್ತು ಸಂಸ್ಥಾಪಕ ಸದಸ್ಯರು ಶ್ರೀ. ಎಕೆ ಉಸ್ಮಾನ್, ಶ್ರೀ ಎನ್ ವಿ ಕಾದರ್, ಶ್ರೀ. ಅಜೀಮ್ ಅಬ್ಬಾಸ್, ಶ್ರೀ. ಎಚ್ಪಿ ಸಿಂಗ್ ಬುಲ್ಲಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಘನವೆತ್ತ ರಾಯಭಾರಿಯವರು “ಕನ್ನಡಿ” ಎಂಬ ಸ್ಮರಣ ಸಂಚಿಕೆ ಯನ್ನು ಬಿಡುಗಡೆ ಮಾಡಿದರು. ಐಸಿಸಿ ರಚನೆಯಾದ ಮೊದಲ ದಿನದ ಚಿತ್ರಗಳ ಗ್ಯಾಲರಿಯೊಂದಿಗೆ ಹಿಂದಿನ ಅಧ್ಯಕ್ಷರು, ಸಮುದಾಯದ ನಾಯಕರು ಮತ್ತು ಪ್ರಸ್ತುತ ಸಮಿತಿಯ ಸದಸ್ಯರಿಂದ ಸಂದೇಶಗಳನ್ನು ಹೊಂದಿದೆ.
ಶ್ರೀ ತರುಣ್ ಬಸು, ಮಾಜಿ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು,ಅವರ ವೀಡಿಯೊ ಸಂದೇಶ ನೇರ ಪ್ರಸಾರ ಮಾಡಿದರು. ಅವರು ತಮ್ಮ ನಿವೃತ್ತಿಯ ನಂತರ ಭಾರತದಲ್ಲಿ ನೆಲೆಸಿರುವರು.
ಕನ್ನಡದ ನೆಲದ ಕಂಪನ್ನು ಮತ್ತೊಮ್ಮೆ ತಮ್ಮ ಅದ್ಭುತ ಪ್ರತಿಭೆಯಿಂದ ಅನಾವರಣಗೊಳಿಸುತ್ತಾ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಂದನಾರ್ಪಣೆಗೈದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.