ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಅರಳೇರಿ ರಸ್ತೆಯಲ್ಲಿ ಸಮಾಜ ಸೇವಕ, ಕನ್ನಡ ಹೋರಾಟಗಾರ ಬಡಗಿ ಶ್ರೀನಿವಾಸ್ ನೇತೃತ್ವದಲ್ಲಿ ಮಾಲೂರು ಮಾರಿಯಮ್ಮ ಬಿಲ್ಡರ್ಸ್ ಎಂಬ ನೂತನ ಕಚೇರಿಯನ್ನು ಅದ್ದೂರಿಯಾಗಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಎಂ.ಬಿಲ್ಡರ್ಸ್ ಮಾಲೀಕರಾದ ಮಾಲೂರಿನ ಬಡಗಿ ಶ್ರೀನಿವಾಸ್ “ಜಮೀನು, ಸೈಟ್, ಮನೆ ಇವುಗಳನ್ನು ಆಪತ್ತಿನಲ್ಲಿ ಮಾರಾಟ ಮಾಡುವ ಮಂದಿಗೆ ನಾವು ಕೊಂಡಿಯಾಗಿ ನಿಂತು ಅದಕ್ಕೆ ಸಲ್ಲಬೇಕಾದ ಮೂಲಬೆಲೆಯನ್ನು ನೀಡಿ ಅವರ ಕಷ್ಟಕ್ಕೆ ನೆರವಾಗುವ ಮೂಲಕ, ಹಾಗೂ ಯಾರಿಗೆ ಅವಶ್ಯಕತೆ ಇರುತ್ತದೆಯೋ ಅಂತಹವರಿಗೆ ಸೂರು, ಜಮೀನನ್ನು ಒದಗಿಸುವ ಮೂಲಕ ಸೇವೆ ಮಾಡುವ ನಿಟ್ಟಿನಲ್ಲಿ, ಬಂದ ಲಾಭದಲ್ಲಿ ಸಮಾಜದ ಒಳಿತಿಗಾಗಿ, ಬಡವರ, ವಿದ್ಯಾರ್ಥಿಗಳ, ಮಹಿಳೆಯರಿಗೆ ಸೇವೆ ಮಾಡುವ ಗುರಿ ಇಟ್ಟುಕೊಂಡು ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಎಲ್ಲಾರೂ ಸಹಕರಿಸಿ, ಕೈ ಜೋಡಿಸಿ” ಎಂದರು.
ಅತಿಥಿಯಾಗಿ ಆಗಮಿಸಿದ್ದ ಮಾಲೂರಿನ ಸಮಾಜ ಸೇವಕ, ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಮಾತನಾಡಿ “ಸಮಾಜದಲ್ಲಿ ಇಂದು ಭೂಮಿಯನ್ನು ಮಾರಾಟ ಮಾಡುವ, ತೆಗೆದುಕೊಳ್ಳುವ ಕಾರ್ಯಚಟುವಟಿಕೆಗಳು ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿರುತ್ತದೆ, ಇದಕ್ಕೆ ಒಬ್ಬ ಸೂಕ್ತ ಪ್ರಮಾಣಿಕ ಬಿಲ್ಡಸ್ರ ಅವಶ್ಯಕತೆ ಪ್ರಮುಖ ಆ ಹಾದಿಯಲ್ಲಿ ಬಡಗಿ ಶ್ರೀನಿವಾಸ್ ರವರು ಇಂದು ಮಾಲೂರಿನಲ್ಲಿ ಮಾಲೂರು ಮಾರಿಯಮ್ಮ ಎಂ.ಎಂ. ಬಿಲ್ಡಸ್ರ್ ಎಂಬ ಹೆಸರಿನಲ್ಲಿ ಬಡವರ ಸೇವೆಗಾಗಿ ಸಂಸ್ಥೆ ಪ್ರಾರಂಭ ಮಾಡಿರುವುದು ಬಹಳ ಸಂತಸದ ವಿಚಾರ ಅವರಿಗೆ ನಮ್ಮ ಶುಭಾಶಯಗಳು ಎಂದರು.
ಈ ಸಂದರ್ಭದಲ್ಲಿ ಎಂ.ಎಂ ಬಿಲ್ದರ್ಸ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ್ ಆರಾಧ್ಯ, ಕುಟ್ಟಿ, ಬೃಹತ್ ಉದ್ಯಮಿಗಳು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರುಗಳು, ತಾಲ್ಲೂಕಿನ ಜನರು ಸೇರಿದಂತೆ ಇತರರು ಶುಭ ಹಾರೈಸಿದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.