ಕಾಪು (www.vknews.com) : ಆಧುನಿಕ ಫ್ಯಾಷನ್ ಗೆ ಬಲಿ ಬಿದ್ದು ಮನುಷ್ಯನು ತನ್ನ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡ್ಡು ಹೊಸ ಹೊಸ ರೋಗಕ್ಕೆ ಈಡಾಗುತ್ತಾನೆ. ಇಂದು, ಮನೆಯ ಮಹಿಳೆಯರು ಕೂಡಾ ಅಕ್ಕಿ ರುಟ್ಟಿ, ಗೋದಿ , ಜೋಳ , ರಾಗಿ ರುಟ್ಟಿ ಮಾಡಿ ತಿನ್ನಿಸುವ ಬದಲು , ಬರ್ಗರ್, ಪಿಜ್ಜಾ, ಶೋರ್ಮ , ಕೆ ಎಫ್ ಸಿ ಯಂತಹ ಆಧುನಿಕ ತಿಂಡಿ, ತಿನಿಸುಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಇಂತಹ ಆಹಾರ ಸೇವನೆಯಿಂದ ಮಕ್ಕಳಿಂದ ಹಿಡಿದು ಹಿರಿಯರಿಗೂ ಪೌಷ್ಟಿಕ ಅಂಶ ದೊರಕದೆ , ದೇಹದಲ್ಲಿ ರಕ್ತಹೀನತೆ , ರಕ್ತಡೊತ್ತಡ , ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಚಿಕ್ಕ ಪ್ರಾಯದ ಮಕ್ಕಳು ಕೂಡಾ ಹೃದಯ ವೈಫಲ್ಯಕ್ಕೆ ಈಡಾಗಿ ಅಕಾಲ ಮರಣ ಹೊಂದುತ್ತಾರೆ.
ಆದ್ದರಿಂದ ನೈಸರ್ಗಿಕ ಆಗಿರುವ ಹಣ್ಣು, ಹಂಪಲು ಸೇವಿಸಿ , ಹಾಲು,ತರಕಾರಿ , ಮೀನು, ಮಾಂಸ ಗಳ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಿದಾಗ ತನ್ನೊಂದಿಗೆ ತಮ್ಮ ಕುಟುಂಬವನ್ನು ಆರೋಗ್ಯಪೂರ್ಣ ವಾಗಿರಿಸಬಹುದು ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷರು ಅನ್ವರ್ ಅಲಿ ಕಾಪು ಹೇಳಿದರು.
ಅವರು ಮಲ್ಲಾರು ಅಂಗನವಾಡಿ ಕೇಂದ್ರದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ. ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇದರ ವತಿಯಿಂದ ಪೋಷಣ್ ಅಭಿಯಾನ ಎಂಬ ಕಾರ್ಯಕ್ರಮದಲ್ಲಿ ಸಭಾದ್ಯಕ್ಷತೆ ವಹಿಸಿ ಮಾತನಾಡುತ್ತಾ ಹೇಳಿದರು.
ಇಂದು ಮನೆಯ ಮಹಿಳೆಯರು , ಬೇಳೆ, ಕಾಳು , ನುಗ್ಗೆ, ತೊಜಂಕ್, ತಿಮರೇ ಗಳಂತಹ ಕಾಯಿ ಪಲ್ಯಗಳ ಅಡಿಗೆ ಮಾಡಿ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ಮಕ್ಕಳಿಗೆ ಎರಡು ವರ್ಷ ಮೊಲೆ ಹಾಲು ನೀಡಬೇಕು. ಜಂಕ್ ಫುಡ್, ಪೇಟೆ ಆಹಾರಗಳಲ್ಲಿ ಪೌಷ್ಟಿಕ ಅಂಶ ಇರುವುದಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಬೆಳಿಗ್ಗೆ ಬಿಸ್ಕಿಟ್ ನೀಡದೆ , ಅಕ್ಕಿಯಿಂದ ತಯಾರಿಸಿದ ಆಹಾರ ನೀಡಿ ತಿನ್ನಿಸಿ ಕಳುಹಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ರವರು ಮಾಹಿತಿ ನೀಡಿದರು.
ಪ್ರಾಥಮಿಕ ಹಿರಿಯ ಸುರಕ್ಷತಾ ಅಧಿಕಾರಿ ನಿರ್ಮಲಾ ಮೆಂಡನ್ ರವರು, ಮದ್ದುಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವು ಸುಮನಾ ತುಕಾರಾಮ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾಥಮಿಕ ಹಿರಿಯ ಸುರಕ್ಷಾ ಅಧಿಕಾರಿ ಯಶೋಧಾ ಅಡ್ಯಾರ್ ರವರು ಪ್ರಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು.
ಬಡಗರ ಗುತ್ತು ಅಂಗನವಾಡಿ ಕಾರ್ಯಕರ್ತೆ ವಿಧ್ಯಾ ಪ್ರಶಾಂತ್ ಧನ್ಯವಾದ ನೀಡಿದರು.ನಿಕಟಪೂರ್ವ ಕಾಪು ಪುರಸಭಾ ಸದಸ್ಯರು ಇಮ್ರಾನ್ ಮಜೂರು, ಮಲ್ಲಾರ್ ಅಂಗನವಾಡಿ ಕಾರ್ಯಕರ್ತೆ ರೇಖಾ ನಾಯ್ಕ್, ಅಂಗನವಾಡಿ ಸಹಾಯಕಿ ಮಲ್ಲಿಕಾ, ಜಯ , ಆಶಾ ಕಾರ್ಯಕರ್ತೆ ಉಷಾ ಉಮೇಶ್ ಕರ್ಕೇರ ಹಾಗೂ ಪೋಷಕರು , ಮಕ್ಕಳು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.