(www.vknews.com) : ಪುತ್ತೂರು ತಾಲೂಕಿಗೆ ಒಳಪಟ್ಟಿದ್ದು, ಆರ್ಥಿಕ ಅಡಚಣೆ ಮತ್ತು ಕೌಟುಂಬಿಕ ಸಮಸ್ಯೆಯಿಂದ ಶಿಕ್ಷಣ ವಂಚಿತರಾದ ಯುವಕ -ಯುವತಿಯರಿಗೆ ತಮ್ಮ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲು ಪುತ್ತೂರು ಕಮ್ಯೂನಿಟಿ ಸೆಂಟರ್ ನಿರ್ಧರಿಸಿದೆ. ಕಲಿಯಲು ಆಸಕ್ತಿ ಇದ್ದು ಆರ್ಥಿಕ ಸಮಸ್ಯೆ ಇರುವ ಯುವಕ -ಯುವತಿಯರು ಸೆಪ್ಟೆಂಬರ್ 30 ರ ಒಳಗಾಗಿ ಕಮ್ಯೂನಿಟಿ ಸೆಂಟರನ್ನು ಸಂಪರ್ಕಿಸಿದರೆ, ಅವರನ್ನು ಶಾಲಾ -ಕಾಲೇಜಿಗೆ ಸೇರ್ಪಡೆಗೊಳಿಸಲಾಗುತ್ತದೆ. ಈ ಪ್ರಯೋಜನವನ್ನು ಎಂಟನೇ ತರಗತಿ ನಂತರದ, ಡಿಗ್ರಿ ವರೆಗಿನ ವಿದ್ಯಾರ್ಥಿಗಳು ಪಡೆಯಬಹುದು. ಸಂಸ್ಥೆಯ ವೆರಿಫಿಕೇಶನ್ ತಂಡವು ವಿದ್ಯಾರ್ಥಿಗಳ ಕುರಿತು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಅವರ ಶಿಕ್ಷಣಕ್ಕೆ ಪೂರ್ಣ ಪ್ರಮಾಣದಲ್ಲಿ ನೆರವಾಗಲಿದೆ.
ಹೆಚ್ಚಿನ ಯುವಕರು ಮಾರ್ಕ್ ಕಡಿಮೆ ಇದೆ, ಉಧ್ಯೋಗ ಮಾಡುವ ಅನಿವಾರ್ಯತೆ ಇದೆ ಎಂದು ಶಿಕ್ಷಣದಿಂದ ಡ್ರಾಪೌಟ್ ಆಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯ ವೃತ್ತಿಪರ ಕೋರ್ಸ್ ಅಥವಾ ಕೌಶಲ್ಯ ಸಂಬಂದಿಸಿದ ತರಬೇತಿಯ ಮೂಲಕವೂ ಸಂಸ್ಥೆ ನೆರವಾಗಲಿದೆ. ಉನ್ನತ ವ್ಯಾಸಾಂಗ ಮಾಡಬೇಕು ಎನ್ನುವ ಬಯಕೆ ಇದ್ದು ಆರ್ಥಿಕ ಅಡಚಣೆ ಇದ್ದವರಿಗೆ ಇದರ ಪ್ರಯೋಜನ ಪಡೆಯಬಹುದು. ವಿಶೇಷವಾಗಿ 90% ಕ್ಕಿಂತ ಹೆಚ್ಚು ಅಂಕ ಕಳೆದ ಸಾಲಿನಲ್ಲಿ ಗಳಿಸಿದ್ದು, ಮನೆಯ ಸಂಕಷ್ಟ ನಿವಾರಿಸಲು ದುಡಿಯಲು ಹೋಗುವ ಅನಿವಾರ್ಯತೆ ಇರುವ ಯುವಕರಿಗೆ ತಿಂಗಳ ಮನೆಯ ರೇಷನ್ ಸಹಿತ ಉಚಿತ ವಿದ್ಯಾಭ್ಯಾಸವನ್ನು ಸಂಸ್ಥೆ ನೀಡಲಿದೆ. ಹತ್ತನೇ ತರಗತಿ ನಂತರ ಶರೀಯತ್ತ್ ಮಾತ್ರವೇ ಕಲಿಯಲು ಹೋಗುವ ವಿದ್ಯಾರ್ಥಿನಿಯರಲ್ಲಿ ಈಗಾಗಲೇ 13 ವಿದ್ಯಾರ್ಥಿನಿಯರನ್ನು ಪಿಯುಸಿ ಗೆ ಸಂಸ್ಥೆಯು ಸೇರಿಸಿದ್ದು, ಶರೀಯತ್ತ್ ಜೊತೆಗೆ ಪಿಯುಸಿ ಮಾಡಲು ಬಯಸುವ ವಿದ್ಯಾರ್ಥಿನಿಯರಿಗೂ ಈ ಅವಕಾಶ ನೀಡಲಾಗಿದೆ. 26 ಡ್ರಾಪೌಟ್ ಆಗಿರುವ ಯುವಕರನ್ನು ಗುರುತಿಸಿ ಮೆತ್ತೆ ಕಾಲೇಜು ಮತ್ತು ಐಟಿಐ, ಸ್ಕಿಲ್ ಡೆವಲಪ್ಪ್ ಮೆಂಟ್ ಸೆಂಟರ್ ಕೋರ್ಸ್ ಗೆ ಸೇರಿಸಲಾಗಿದೆ.
ತಾಲೂಕಿನಲ್ಲಿ ಯಾವುದೇ ವಿಧ್ಯಾರ್ಥಿಯು ಆರ್ಥಿಕ ಅಡಚಣೆಯಿಂದ ಡ್ರಾಪೌಟ್ ಆಗದಂತೆ ಸಂಸ್ಥೆಯು ಘೋಷಿಸಿದ ಈ ಮಹತ್ವದ ಅವಕಾಶವನ್ನು ಪ್ರತೀಯೊಬ್ಬ ಡ್ರಾಪೌಟ್ ವಿದ್ಯಾರ್ಥಿ ಪಡೆಯಲು ವಿನಂತಿಸಲಾಗಿದೆ.
ಈಗಗಾಲೇ ಸಂಸ್ಥೆ 207 ವಿದ್ಯಾರ್ಥಿಗಳಿಗೆ ಸ್ಕ್ವಾಲರ್ ಶಿಫ್ ನೀಡಿದಾಗ ಮಾಡಿಕೊಂಡ ಎಲ್ಲಾ ನಿಬಂಧನೆಗಳೂ ಈ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Puttur Community Centre Am Shalimar complex 3rd floor Opp: KSRTC bustand puttur Timing- 10-30 am To 6-30 pm
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.