ಕಲ್ಕಟ್ಟ (www.vknews.com) : ಮಂಜನಾಡಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕಲ್ಕಟ್ಟ ಇಲ್ಲಿನ ಕಾರ್ಯಕರ್ತ ಹನೀಫ್ ರವರ ವಾಠಾರದಲ್ಲಿ ನಡೆದ ಮಂಜನಾಡಿ ಕಾಂಗ್ರೆಸ್ ನ ಗ್ರಾಮ ಸಮಿತಿಯ ಸಭೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನಕ್ಕೆ ಗ್ರಾಮ ಮಟ್ಟದ ಚಾಲನೆಯನ್ನು ಫೋಸ್ಟರ್ ಬಿಡುಗಡೆ ಮುಖಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್ ಎಸ್ ಕರೀಂ, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಲ್ವೀನ್, ಮಂಜನಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ ಮದ್ಪಾಡಿ, ಯುವ ಕಾಂಗ್ರೆಸ್ ಮಂಜನಾಡಿ ಘಟಕದ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಜನಾಡಿ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯರಾದ ಮಂಗಳಾಂತಿ ಇಸ್ಮಾಯಿಲ್ ಬಾವು, ವಿನ್ಸೆಂಟ್ ಡಿಸೋಜ, ಮಹಮ್ಮದ್ ಅಸೈ, ಬಶೀರ್ ಮಂಜನಾಡಿ, ಅತ್ತಾವುಲ್ಲಾ ಪರ್ತಿಪ್ಪಾಡಿ, ಅಬ್ಬಾಸ್ ನಾಟೆಕಲ್, ಅಬ್ದುಲ್ ಕಾದರ್ ಕಲ್ಕಟ್ಟ, ಬಾವು ಮಾರಾಟಿಮೂಲೆ, ಹಾಗೂ ಕಾಂಗ್ರೆಸ್ ಗ್ರಾಮ ಸಮಿತಿಯ ಮೋನು ಕಲ್ಕಟ್ಟ, ಅಶ್ರಫ್ ಮಾರಾಟಿಮೂಲೆ, ಅಶ್ರಫ್, ಶರೀಫ್, ಕುಂಞಿ ಭಾವು, ಇಸ್ಮಾಯಿಲ್ ದೊಡ್ಡ ಮನೆ, ಅಲ್ಪಸಂಖ್ಯಾತರ ಘಟಕದ ಇಸ್ಮಾಯಿಲ್, ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ನಾಸಿರ್ ಮೈಸೂರು, ನಿಝಾರ್ ಮಂಗಳಾಂತಿ, ಆಸಿಫ್ ಆರಂಗಡಿ, ಮುಝಮ್ಮಿಲ್ ಕಲ್ಕಟ್ಟ, ಸಿದ್ದೀಕ್ ಕಲ್ಕಟ್ಟ, ಕಾರ್ಯದರ್ಶಿ ಸಫ್ವಾನ್ ಮಂಗಳ ನಗರ, ಕಾಂಗ್ರೆಸ್ ಕಾರ್ಯಕರ್ತ ಇಕ್ಬಾಲ್ ಮಂಗಳಾಂತಿ, ಫಿಲಿಪ್ ಡಿಸೋಜ ಮೋದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.