ಹಳೆಯಂಗಡಿ(ವಿಶ್ವಕನ್ನಡಿಗ ನ್ಯೂಸ್): ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮೀತಿ ಆದೇಶ ಮೇರೆಗೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಹಳೆಯಂಗಡಿ ಮತ್ತು ಬೊಳ್ಳೂರು ಜಂಟಿ ಆಶ್ರಯದಲ್ಲಿ ಬೊಳ್ಳೂರು ಜುಮಾ ಮಸೀದಿ ಪರಿಸರ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಇಂದು ಬೆಳಿಗ್ಗೆ 7 ರಿಂದ 10 ರ ವರೆಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಚೇರ್ಮ್ಯಾನ್ ಹುಸೆನಬ್ಬ ಬೊಳ್ಳೂರು ವಹಿಸಿದ್ದರು, ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಎಮ್.ಅಬ್ದುಲ್ ಕಾದರ್,ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅದ್ಯಕ್ಷರಾದ ಯುಸೂಫ್ ಇಂದಿರಾನಗರ,ಕಾರ್ಯದರ್ಶಿ ದಾವೂದ್ ಇಂದಿರಾನಗರ,ಹಿರಿಯ ಸದಸ್ಯರಾದ ಕೆ.ಎ ಅಬೂಬಕ್ಕರ್,ತಯ್ಯೂಬ್ ಫೈಝಿ ಬೊಳ್ಳೂರು,ಶಿಹಾಬುದ್ದಿನ್ ಅಹಮದ್,ಶಂಸುದ್ದಿನ್ ರೈಲ್ವೆಗೇಟ್,ಆಶಿಕ್ ಹಳೆಯಂಗಡಿ,ಅಲ್ಫಾಝ್,ಬಾಯಿಶ್,ಝೈನುದ್ದಿನ್,ಬಾಶಿತ್,ಉಸ್ಮಾನ್ ಸಾಗ್ ಸೇರಿ ಮತ್ತಿತರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.