(ವಿಶ್ವ ಕನ್ನಡಿಗ ನ್ಯೂಸ್ ,www.vknews.in): ಅಧಿಕಾರದ ಮಹದಾಸೆಯಿಂದ ಬಿಜೆಪಿ ಜೊತೆಗೆ ಸಂಬಂಧ ಕಡೆದುಕೊಂಡ ಶಿವಸೇನೆ ಇದೀಗ ಅಕ್ಷರಶಃ ಒಂಟಿಯಾಗಿದೆ . ಯಾವಾಗ ತಮ್ಮ ಜೊತೆ ಶಿವಸೇನೆ ಸಂಬಂಧ ಕಡಿದುಕೊಂಡಿತೋ ಅಂದೇ ಅಮಿತ್ ಶಾ ತನ್ನ ನೈಜ ಆಟವನ್ನು ಆರಂಭಿಸಿದ್ದರು . ಇದರ ಜೊತೆಗೆ ಮತ್ತೊಂದು ಕಡೆಯಿಂದ ಎನ್ಸಿಪಿ ನಾಯಕ ಶರದ್ ಪವಾರ್ ಕೂಡ ರಾಜಕೀಯ ಚದುರಂಗದಾಟ ಆಡಿದರು . ಅಧಿಕಾರದ ಕನಸು ಕಾಣುತ್ತಿದ್ದ ಶಿವಸೇನೆ ಇವರಿಬ್ಬರು ತೋಡಿದ ಖೆಡ್ಡಾಗೆ ತಾನಾಗೇ ಹೋಗಿ ಬಿದ್ದಿದ್ದು ವಿಪರ್ಯಾಸ .
ಉದ್ಧವ್ ಠಾಕ್ರೆ ಬಿಜೆಪಿ ಜೊತೆ ಸಂಬಂಧ ಕಡಿದುಕೊಂಡಾಗ ಸುಮ್ಮನಾದ ಅಮಿತ್ ಶಾ ಶಿವಸೇನೆಯ ಮುಂದಿನ ನಡೆಗಳನ್ನು ಗಮನಿಸುತ್ತಿದ್ದರು .ಯಾವಾಗ ಸೇನೆ ಕಾಂಗ್ರೆಸ್ ,ಎನ್ಸಿಪಿ ಜೊತೆ ಮೈತ್ರಿ ಮಾಡಿ ಸರಕಾರ ರಚಿಸಲು ಮುಂದಾಯಿತು ಆಗ ತತ್ವ ಸಿದ್ದಾಂತ ವನ್ನು ಮುಂದಿಟ್ಟು ಬಿಜೆಪಿ ಸೇನೆ ವಿರುದ್ಧ ವಾಗ್ದಾಳಿ ನಡೆಸಿತು. ಜೊತೆಗೆ ತನ್ನ ಕೈಯಲ್ಲಿದ್ದ ಅಧಿಕಾರವನ್ನು ಬಳಸಿಕೊಂಡಿತು . ಮತ್ತೊಂದು ಕಡೆ ಎನ್ಸಿಪಿ ನಾಯಕ ಶರದ್ ಪವಾರ್ ಉದ್ಧವ್ ಠಾಕ್ರೆ ಯನ್ನು ಅತ್ತಿಂದಿತ್ತ ಓಡಿಸುತ್ತಲೇ ಕಾಲಹರಣ ಮಾಡಿದರು .ಬೆಂಬಲ ನೀಡುತ್ತೇವೆ ನೀಡುತ್ತೇವೆ ಎಂದು ಹೇಳುತ್ತಲೇ ಸಲೀಸಾಗಿ ಕಾಲಹರಣ ಮಾಡಿ ಸೇನೆಯನ್ನು ಸಂಪೂರ್ಣ ದಿಕ್ಕು ತಪ್ಪಿಸಿದರು . ಮತ್ತೊಂದು ಕಡೆ ಸೇನೆಗೆ ಕಾಲಾವಕಾಶ ನೀಡದೆ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದರು .ಇದರಲ್ಲೂ ಎನ್ಸಿಪಿ ಯ ರಾಜಭವನಕ್ಕೆ ಬಂದ ಅದೊಂದು ಕರೆ ಕಾರಣ ಎಂದು ಹೇಳಲಾಗುತ್ತಿದೆ . ಒಟ್ಟಿನಲ್ಲಿ ಶಿವಸೇನೆ ತಾನೇ ಮಾಡಿಕೊಂಡ ತಪ್ಪಿನಿಂದ ಇದೀಗ ಒಂಟಿಯಾಗಿದೆ .ಚುನಾವಣೆ ಬಂದರು ಕೂಡ ಅತ್ತ ಕಾಂಗ್ರೆಸ್ ,ಎನ್ಸಿಪಿ ಜೊತೆ ಹೋಗಲು ತತ್ತ್ವ ,ಸಿದ್ದಾಂತ ಅಡ್ಡಿ. ಇಲ್ಲಿ ಬಿಜೆಪಿ ಜೊತೆ ಮುನಿಸು, ಮುಂದೇನು ಎಂಬುದು ಕಾದು ನೋಡಬೇಕಷ್ಟೆ .
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.