ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು ಮತ್ತು ಬಿ. ಬಿ. ಎಂ. ಪಿ. ಯವರು ಕೊವಿಡ್ -19 ರೋಗ ಸಂಶಯಿತರನ್ನು ಕ್ವಾರೆಂಟೈನ್ ಗೆ ಪ್ರಯತ್ನ ಮಾಡುವ ಸಂದರ್ಭದಲ್ಲಿ ಆದ ಗಲಭೆಯನ್ನು ಕೆ. ಪಿ. ಸಿ ಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಹೀದ್ ಖಂಡಿಸಿದ್ದಾರೆ.
ವಿಶೇಷವಾಗಿ ಅಲ್ಪಸಂಖ್ಯಾತರು ಶಾಂತಿಯಿಂದ ಇರಬೇಕು, ಕೆಲವು ಮುಸ್ಲಿಂ ಸಮುದಾಯದವರು ಮಾಡುವ ನೀಚ ನಡವಳಿಕೆಯಿಂದ ಇಡೀ ಸಮುದಾಯಯಕ್ಕೆ ಕಳಂಕ ವಾಗುತಿದ್ದು . ಕೆಲವು ಕೋಮುಶಕ್ತಿಗಳು ಹಾಗು ಧೃಶ್ಯ ಮಾಧ್ಯಮಗಳು ರೋಗದ ಹೆಸರಲ್ಲಿ ದುಷ್ಕ್ರುತ್ತ ನಡೆಸಿವ ಸಂದರ್ಭದಲ್ಲಿ ಇದು ಅವರಿಗೆ ಸಹಕಾರಿಯಾಗುತ್ತಿದೆ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಹಾಗು ಮುಖ್ಯ ಮಂತ್ರಿಗಳಾದ ಬಿ. ಎಸ್. ಯೊಡಿರಪ್ಪನವರು ಧರ್ಮ, ಜಾತಿಗಳನ್ನು ನೋಡಿ ಕೊವಿಡ್ -19 ವೈರಸ್ ದಾಳಿ ಮಾಡುವುದಿಲ್ಲ ಎಂದು ತಿಳಿಸಿರುತ್ತಾರೆ.
ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊವಿಡ್ -19 ಹೆಸರಲ್ಲಿ ಪದೇ ಪದೇ ಅಪಮಾನಿಸುವುದು ಸರಿಯಲ್ಲ ಎಂದು ವಿಶೇಷ ವಾಗಿ ಮುಸ್ಲಿಂ ಸಮುದಾಯಕ್ಕೆ ವಿಶ್ವಾಸ ಮತ್ತು ಧೈರ್ಯ ವನ್ನು ತುಂಬುವ ಕೆಲಸವನ್ನು ಪ್ರಧಾನ ಮಂತ್ರಿ ಹಾಗು ಮುಖ್ಯ ಮಂತ್ರಿ ಯವರು ಮಾಡಿರುವುದು ಶ್ಲ್ಯಾಘನೀಯವಾಗಿದ್ದು ಅಲ್ಪಸಂಖ್ಯಾತರು, ಮುಸಲ್ಮಾನರು ಸರಕಾರಗಳು ಕೈಗೊಳ್ಳುವ ಎಲ್ಲಾ ಕಾರ್ಯಕ್ರಮ, ತೀರ್ಮಾನಗಳಿಗೆ ಸ್ಪಂದಿಸಬೇಕು ಮತ್ತು ಎಲ್ಲರೂ ಜೊತೆಗೂಡಿ ಕೊವಿಡ್ -19 ಮಹಾಮಾರಿ ವಿರುದ್ಧ ಹೋರಾಟ ಮಾಡಿ ಪ್ರತಿಯೊಬ್ಬರು ಪರಸ್ಪರ ಸಹಕಾರದಲ್ಲಿ ಈ ರೋಗವನ್ನು ಹತೋಟಿಗೆ ತರಲು ಧರ್ಮ, ಜಾತಿ, ಪಕ್ಷ ಭೇದ ಭಾವ ಬಿಟ್ಟು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಹಕರಿಸಬೇಕೆಂದು ಕಾಂಗ್ರೆಸ್ ಮುಖಂಡ ಟಿ. ಎಂ. ಶಹೀದ್ ರವರು ವಿನಂತಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.