(www.vknews.com) : ದೇಶದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಮುಂದೆ ನಿಂತು ಕೆಲಸ ಮಾಡುವ ಗೃಹರಕ್ಷಕರ ಆರೋಗ್ಯದ ಹಿತದೃಷ್ಠಿಯಿಂದ ಮತ್ತು ಅವರ ರಕ್ಷಣಾ ಪ್ರಕ್ರಿಯೆಯನ್ನು ಸಧೃಢಗೊಳ್ಳುವ ದೃಷ್ಟಿಯಿಂದ ಭಾರತೀಯ ಹೋಮಿಯೋಪತಿ ಅಸೋಸಿಯೇಷನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಪ್ರಥಮ ಪ್ರಜೆಯಾದ ದಿವಾಕರ್ ಪಾಂಡೇಶ್ವರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಇವರ ಸಮ್ಮುಖದಲ್ಲಿ ಉಚಿತವಾಗಿ ಹೋಮಿಯೋಪತಿ ಔಷಧಿಗಳನ್ನು ವಿತರಣೆ ಮಾಡಲಾಯಿತು.
ಔಷಧಿ ವಿತರಣೆ ಮಾಡಿದ ಬಳಿಕ ಶಾಸಕರು ಮಾತನಾಡುತ್ತಾ ಸಮಾಜವನ್ನು ಮುಂದೆ ನಿಂತು ರಕ್ಷಿಸುವ ಗೃಹರಕ್ಷಕರ ಜವಾಬ್ದಾರಿ ಸಮಾಜಕ್ಕಿದೆ. ಗೃಹರಕ್ಷಕರ ಬೆನ್ನ ಹಿಂದೆ ಸಮಾಜ ಯಾವಾಗಲೂ ಗಟ್ಟಿಯಾಗಿ ನಿಲ್ಲಬೇಕು ಅವರಿಗೆ ಕೋವಿಡ್-19 ಎದುರಿಸಲು ನೈತಿಕವಾದ ಧೈರ್ಯ ನೀಡಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ರೂಪ ಬಂಗೇರ, ಮಾಜಿ ಕಾರ್ಪೋರೇಟರ್, ಪೂರ್ಣಿಮ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಡಾ: ಪ್ರವೀಣ್ ಕುಮಾರ್, ಪ್ರೆಸಿಡೆಂಟ್, ಇಂಡಿಯನ್ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಷನ್ (ಐಹೆಚ್ಎಂಎ). ಡಾ: ಅವಿನಾಶ್.ವಿ.ಎಸ್, ಸೆಕ್ರೇಟರಿ, (ಐಹೆಚ್ಎಂಎ)., ಡಾ: ಪ್ರವೀಣ್ ರಾಜ್ ಆಳ್ವ, ಪ್ರಿನ್ಸಿಪಲ್, ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜ್, ಮೂಡಬಿದ್ರೆ, ಡಾ: ಪ್ರಸನ್ನ ಕುಮಾರ್, ಹೋಮಿಯೋಪತಿ ಕನ್ಸಲ್ಟೆಂಟ್, ಡಾ: ರಾಮಕೃಷ್ಣ ರಾವ್, ಹೋಮಿಯೋಪತಿ ಕನ್ಸಲ್ಟೆಂಟ್ ಇವರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 200 ಮಂದಿ ಗೃಹರಕ್ಷಕರಿಗೆ ಔಷಧಿಗಳನ್ನು ವಿತರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.