ವಚನಗಳು : (www.vknews.com)
1. ಲೋಕದ ಮಾಯಾಸಮುದ್ರ, ಮೀರಿ ನಡೆಸಿಕೊಂಡೆಯಾ ದಯಾಮಯಾ ಜ್ನಾನೇಶ್ವರ ನೀ ಕರುಣಿಸಿದ ಜ್ನಾನಾಕ್ಷರದ ಸಮುದ್ರದಲಿ, ಕಿರುದೋಣಿ ನನ್ನದು. ನೀನಿಟ್ಟಂತೆ ನಡೆಸಿಬಿಡು, ನನ್ನ ಬದುಕಿನ ಚಿರ ಅಂಬಿಗನಾಗಿ ಕಾಡುಮಲ್ಲಿಕಾರ್ಜುನ.
2. ಎದೆಯ ಮಧು ಬಾಂಡದಲಿ, ಕಲಕಿಹೋದರು ಮನದ ಕಾಮ, ನೀ ಬೆರೆಸಿದೆ ಸಂಯಮ. ಅಚ್ಚರಿಯಲಿ ಹುಚ್ಚೆಲ್ಲಾ ಇಳಿದೇ ಹೋಯಿತು, ಬದುಕಲು ಬೇಕಿರುವುದು ಕಾಡುಮಲ್ಲಿಕಾರ್ಜುನನಲ್ಲಿ ನಿಷ್ಕಲ್ಮಶ ಪ್ರೇಮ. ಬದುಕಿನ ಮೌಲ್ಯ ಹೆಚ್ಚಿಸುವುದು ನಿನ್ನ ನಿಜನಾಮ.
3. ಕಾಲದ ಬರದಲಿ ಕಲಬೆರಿಕೆಯ ಬಾಂದವ್ಯ. ಅರಪೆ ಇದ್ದು ಹಂಚಿಕೊಟ್ಟರೆ ಗಟ್ಟಿ ಬಂಧ. ಉಂಡುಟ್ಟು ನಾಳೆಗೂ ಕೇಳಿ ಪಡೆದರೆ ಹುಸಿ ಬಂಧ. ಎಲ್ಲಕ್ಕೂ ಇಂದಲ್ಲಾ ನಾಳೆ ಅಂತ್ಯ ನೀ ಕೊಟ್ಟದ್ದೆಲ್ಲಾ ನಾ ಕೈ ಚಾಚಿ ಪಡೆದರೂ. ನಿನ್ನ ಕರುಣೆ ಎಂದೆಂದೂ ಇರುತಿರಲು, ತೀರದು ನಿನ್ನ ನಿಜಬಂಧುತ್ವ ಕಾಡುಮಲ್ಲಿಕಾರ್ಜುನ
4. ಬದುಕಿಸಿದೆಯಾ ಬಡಜೀವವಾ, ಕರ್ಪೂರದಾರತಿಯಿಲ್ಲ, ಗಂಧ ವಿಭೂತಿಗಳು ಮೊದಲಿಲ್ಲ, ಬಗೆಬಗೆಯ ಬಣ್ಣದ ಪುಷ್ಪಗಳಿಲ್ಲ ಷಡ್ರಸಗಳಿರುವ ಪ್ರಸಾಧವಿಲ್ಲ. ಫಲತಾಂಬೂಲಗಳೂ ಇಲ್ಲ. ಇದ್ದುದೆಲ್ಲಾ ಕಳೆದ ಮೇಲೆ, ನಿನ್ನಿಚ್ಛೆ ನನ್ನಿಚ್ಛೆಗಳು ಸೇರಿ. ಸತ್-ಚಿತ್-ಆನಂದ ಆತ್ಮೋನ್ನತಿಗೆ ಹದಗೊಳಿಸಿದೆಯಾ ಎನ್ನಂತರಂಗವ ಕಣ್ ಮಿಸುಕುವುದರೊಳಗೆ ಕಾಡುಮಲ್ಲಿಕಾರ್ಜುನ.
5. ಜಾಲಿ ಮರದ ಕೆಳಗೆ ನೆರಳೆಂದು ನಂಬಿ, ಸಂಸಾರ ನಡೆಸಲುಂಟೆ? ಹಗಲ ಹಾದಿಯಲಿ ಕಂಡ ಬರಡು ನೆಲವ, ರಾತ್ರಿಯಲಿ ಫಲವತ್ತೆಂದು ನಂಬಿಸಲುಂಟೆ? ಕಾಮವ ಎಂದಾದರೂ ಪ್ರೇಮ ಎಂದು ನಂಬಿಸಿದರೆ, ನಯವಂಚನೆಯಲ್ಲದೆ ಮಿಲನ ಮಹೋತ್ಸವವಾಗಲುಂಟೇ ಕಾಡುಮಲ್ಲಿಕಾರ್ಜುನ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.