(www.vknews.com) : ಚೀನಾದೇಶದಿಂದ ಪ್ರಾರಂಭಗೊಂಡ ಕೊರೋನ ವೈರಸ್ ಇಡೀ ಜಗತ್ತಿಗೆ ವ್ಯಾಪಿಸಿದೆ.ನಮ್ಮ ಭಾರತ ದೇಶದಲ್ಲೂ ಪ್ರವೇಶಿಸಿ ಕೆಲವು ಜೀವಗಳನ್ನು ಬಲಿಯಾಗಿಸಿದೆ.ಈ ನಿಟ್ಟಿನಲ್ಲಿ ಪ್ರತಿರೋಧವೆಂಬಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಲಾಕ್ ಡೌನ್ ಘೋಷಿಸಿದೆ.ಜನರು ಇದನ್ನು ಬಹಳ ಅಚ್ಚುಕಟ್ಟಾಗಿ ಅನುಸರಿಸುತ್ತಿದ್ದಾರೆ ಎಂಬುವುದು ಸಂತೋಷಕರ.
ಮುಹಮ್ಮದ್ ಇರ್ಫಾನ್ ಅಡೆಕ್ಕಲ್
ಆದರೆ ಲಾಕ್ ಡೌನ್ ಇನ್ನೂ ವಿಸ್ತರಿಸಿರುವ ಕಾರಣ ನಲ್ವತ್ತು ದಿನ ದೇಶದ ನೂರ ಮುವತ್ತು ಕೋಟಿ ಜನರು ಮನೆಯಲ್ಲೇ ಉಳಿಯಬೇಕಾಗಿದೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುವುದನ್ನು ಸರಕಾರ ಅರಿತಿರಬೇಕು. ಲಾಕ್ ಡೌನ್ ಮುಂದುವರಿಸಿದರೆ ಮಾತ್ರ ಸಾಲದು, ಜನರ ಅಗತ್ಯಗಳನ್ನು ತಿಳಿದು ಪೂರೈಸಿಕೊಡಲು ಸರಕಾರ ಮುಂದಾಗಬೇಕು. ಆರ್ಥಿಕವ್ಯವಸ್ಥೆಯನ್ನೂ ವಿಸ್ತರಿಸಿ ಸ್ಪಂದನೆ ನೀಡಬೇಕು.ಇಲ್ಲಾಂದ್ರೆ ಜನರು ಹಸಿವಿನಿಂದ ತತ್ತರಿಸಿ ಲಾಕ್ ಡೌನ್ ಉಲ್ಲಂಘಿಸುವ ಸಾಧ್ಯತೆಯಿದೆ.ಅದರ ಮುಂಚಿತವಾಗಿ ಎಚ್ಚೆತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಸರಕಾರ ಕೈಗೊಳ್ಳಲಿ.
✒ ಮುಹಮ್ಮದ್ ಇರ್ಫಾನ್ ಅಡೆಕ್ಕಲ್ ವಿದ್ಯಾರ್ಥಿ, ನೂರುಲ್ ಹುದಾ ಮಾಡನ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.