( ವಿಶ್ವ ಕನ್ನಡಿಗ ನ್ಯೂಸ್): ವಿಶ್ವದ ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿರುವ ಭಾರತದ ಕೊರೊನ ವಿದುದ್ದದ ಇಷ್ಟು ದಿನದ ಹೋರಾಟವನ್ನು ಮೆಚ್ಚಲೇಬೇಕು , ಕೊರೊನ ನಿಯಂತ್ರಣದಲ್ಲಿ ಭಾರತ ಒಂದು ಮಟ್ಟಕ್ಕೆ ಗೆದ್ದಿದೆ , ಲಕ್ಡೌನ್ , ಸಾಮಾಜಿಕ ಅಂತರವನ್ನು ಜನ ಕಾಪಾಡಿಕೊಳ್ಳುವಂತೆ ಸರ್ಕಾರ ಕೈಗೊಂಡ ನಿಯಮಗಳು ಇಷ್ಟರವರೆಗೆ ಯಶಸ್ವಿಯಾಗಿದೆ , ಆದರೆ ಇದೀಗ ಲಕ್ಡೌನ್ ಮುಂದುವರೆಸಿದೆಯಾದರು ಅದರಲ್ಲಿ ಸಾಕಷ್ಟು ಸಡಿಲಿಕೆ ಮಾಡಿದೆ . ಮೇ ನಾಲ್ಕರ ನಂತರ ಸಾಕಷ್ಟು ಕ್ಷೇತ್ರಗಳು ಪುನರಾರಂಭ ಗೊಳ್ಳಲಿದೆ . ದೇಶದಲ್ಲಿ ಇದೀಗ ಕೊರೊನ ತನ್ನ ಅಬ್ಬರ ಆರಂಭಿಸಿದೆಯಷ್ಟೆ , ಈ ಸಂದರ್ಭದಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಮುಂದುವರೆಸಬೇಕಿತ್ತು ಎಂಬುದು ಅನೇಕರ ಅನಿಸಿಕೆ .
ಕೊರೊನ ಬಗ್ಗೆ ತಾತ್ಸಾರ ತೋರಿದ ಇಟೆಲಿ , ಸ್ಪೇನ್ ಹಾಗು ಅಮೇರಿಕ ಮಾಡಿಕೊಂಡ ಅವಾಂತರಗಳು ನಮ್ಮ ಕಣ್ಣೆದುರಿರುವಾಗ ಸರ್ಕಾರ ಸ್ವಲ್ಪ ಎಚ್ಚರವಹಿಸಿ ಲಕ್ಡೌನ್ ನಲ್ಲಿ ಇಷ್ಟು ಸಡಿಲಿಕೆ ಮಾಡಬಾರದಿತ್ತು . ಜನರಾದರು ಇದನ್ನು ಮನಗಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನವನ್ನು ನಮ್ಮ ದೇಶದಿಂದ ಹೊರದಬ್ಬುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.