ಕುಶಾಲನಗರ (www.vknews.com) : ಮಹಾಮಾರಿ ಕೊರೋನಾದಿಂದ ಜಗತ್ತೇ ತತ್ತರಿಸುತ್ತಿರುವಾಗ ಕುಶಾಲನಗರದ ನಿರ್ಗತಿಕ ಕುಟುಂಬಗಳಿಗೆ SYS ಕುಶಾಲನಗರ ಬ್ರಾಂಚ್ ವತಿಯಿಂದ ರಮಳಾನ್ ಕಿಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಸ್ತಾದ್ ಹಾಫಿಳ್ ಶೌಖತ್ತಲಿ ಸಖಾಫಿ ದುಆ ನಿರ್ವಹಿಸಿದರು. ಉಸ್ತಾದ್ ಹಸ್ಸನ್ ಫೈಜಿ಼ ಮತ್ತು ಹುಸೈನ್ ಮಾದಪಟ್ಟಣ ಕಿಟ್ ವಿತರಣೆ ಉದ್ಘಾಟಿಸಿದರು.
ಬ್ರಾಂಚ್ ಅಧ್ಯಕ್ಷರಾದ ಹಂಝ ಮಾನಿ ಕುಂಜಿಲರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಅಬ್ದುರ್ರಶೀದ್ ಹಳ್ರಮಿ, ಸಿದ್ಧೀಖ್ ಗದ್ದೆಹಳ್ಳ, ಹಿರಿಯ ನೇತಾರರಾದ ಸೂಫಿ ಕಣಿವೆ, ಉಪಾಧ್ಯಕ್ಷರಾದ ಹುಸೈನ್ ಗೋಲ್ಡನ್ ಟೆಂಪಲ್, ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆಯ ಕೋಶಾದಿಕಾರಿಗಳಾದ ಅಬ್ದುಲ್ ಅಜೀ಼ಜ಼್ ಪಿ. ಜಿ. ಯವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.