(www.vknews.com) : ಪವಿತ್ರವಾದ ರಮಝಾನ್ ತಿಂಗಳಿನ ಈ ದಿನಗಳಲ್ಲಿ ಬಹಳ ದುಃಖದ ವಿಚಾರವೇನೆಂದರೆ ಲೋಕವ್ಯಾಪ್ತಿ ವ್ಯಾಪಿಸಿದ ಸಾಂಕ್ರಾಮಿಕ ರೋಗ CORONA ಎಂಬ ವೈರಸ್ಸಿನಿಂದಾಗಿ ವಿಶ್ವದ ಬಹಳಷ್ಟು ಪ್ರದೇಶಗಳು ಲಾಕ್ ಡೌನ್ ಘೋಷಿಸಲ್ಪಟ್ಟಿದ್ದರಿಂದ ಮಸೀದಿಗಳು ಎಂದಿನಂತೆ ಕಾರ್ಯಾಚರಿಸದೆ ಸಾಮೂಹಿಕ ಪ್ರಾರ್ಥನೆಗಳಿಲ್ಲದೆ ಎಲ್ಲ ಆರಾಧನೆಗಳು ಅವರವರ ಮನೆಯಲ್ಲಿಯೇ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇಂಥಹ ಒಂದು ಪರಿಸ್ಥಿತಿ ಬರುವುದೆಂದು ಯಾರು ಕೂಡ ಕನ, ಮನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ, ಅದರೇ ಅ ಸರ್ವಶಕ್ತನ ಇಚ್ಚೇಯೆ ಬೇರೆ. ಅದ್ದರಿಂದ ನಾವೇಲ್ಲರೂ ಚಿಂತಿಸಬೇಕಾದ ವಿಷಯವೇನೆಂದರೆ ಇಲ್ಲಿನ ಈಗಿನ ತಾತ್ಕಾಲಿಕ ಸುಖ ಜೀವನಕ್ಕೆ ಮಾರು ಹೋಗಿ ಮುಂದಿನ ಶಾಶ್ವತ ಜೀವನವನ್ನು ಮರೆತು ಅಲ್ಲಿನ ಸುಖ ಜೀವನವನ್ನು ಕಳೆದು ಅವನ ಭಯಾನಕ ಶಿಕ್ಷೆಗೆ ಒಳಗಾಗುವ ಮುನ್ನ ಎಚ್ಚೆತ್ತುಕ್ಕೊಂಡು ನಮ್ಮ ಕರ್ತವ್ಯಗಳನ್ನು ಪಾಲಿಸಿಕೊಂಡು ಅವನ ಸಂತ್ರಪ್ತಿಗೆ ಒಳಪಡುವುದು ಅತ್ಯಗತ್ಯವಾಗಿದೆ.
ನಾವು ಚಿಂತಿಸಬೇಕಾದ ಅತ್ಯಂತ ಮಹತ್ತ್ವ ವಿಷಯವೆನೇಂದರೆ ಬಾಗಿಲುಗಳನ್ನು ಹಾಕಿದ್ದು ಮಸೀಧಿಗೆ ಹೊರತು ಆರಾಧನೆಗಳಿಗಲ್ಲ ಅದ್ದರಿಂದ ನಾವು ನಮ್ಮ ದಿನನಿತ್ಯದ ಆರಾಧನೆಗಳಿಗೆ ಯಾವೂದೇ ಎಡವಟ್ಟುಗಳನ್ನುಂಟು ಮಾಡದೇ ಸಮಯಕ್ಕೆ ಸರಿಯಾಗಿ ಯಥಾಪ್ರಕಾರ ನಮ್ಮೇಲ್ಲ ಆರಾಧನ ಕರ್ಮಗಳನ್ನು ನಮ್ಮ ಮನೆಯಲ್ಲಿ, ನಮ್ಮ ಕುಟುಂಬದವರೊಂದಿಗೆ ನಿರ್ವಹಿಸುವುದು ಅತೀ ಉತ್ತಮವಾಗಿದೆ.
ನಮಗೆ ಕಡ್ಡಾಯಗೊಳಿಸಲ್ಪಟ್ಟ ಇಸ್ಲಾಮಿನ ಐದು ಆಧಾರ ಸ್ತಂಭಗಳಲ್ಲಿ ಒಂದಾದ ಝಕಾತ್ತುಗಳನ್ನು ಈ ಪವಿತ್ರವಾದ ತಿಂಗಳಿನಲ್ಲಿ ಲೆಕ್ಕಕ್ಕನುಗುಣವಾಗಿ ಅದಕ್ಕೆ ಅರ್ಹರಾದವರನ್ನು ಹುಡುಕಿ ನೀಡುವುದು ಸಾಮಾನ್ಯವಾಗಿದೆ. ಅದ್ದರಿಂದ ಈ ವರುಷ ಝಕಾತ್ ವಿತರಿಸುವ ಮುಂಚೆ ಒಮ್ಮೆ ಚಿಂತಿಸುವುದು ಬಹಳ ಅತ್ಯಗತ್ಯವಾಗಿದೆ, ದಿನಗಳು ನಾವು ಎಣಿಸಿದಂತೆ ಸಾಗುವುದಿಲ್ಲ, ಇಂದಿನಂತೆ ನಾಳೆ ಇರುವುದಿಲ್ಲ, ನಾವು ಒಂದು ಇಚ್ಚಿಸಿದರೆ ಅ ಸರ್ವಶಕ್ತನ ಇಚ್ಚೆ ಇನ್ನೊಂದಿರುವುದು.
ಕೆಲವರು ಏನೇನೋ ಇಚ್ಚೆಗಳನ್ನು ಮನಸ್ಸಿನಲ್ಲಿಟ್ಟು ಏನೋ ಮಾಡಲು ಹೋಗಿ ಅದು ಏನೇನೊ ಯಡವಟ್ಟುಗಳನ್ನುಂಟು ಮಾಡಿ ದೈಹಿಕವಾಗಿ, ಮಾನಸಿಕವಾಗಿ, ಅರ್ಥಿಕವಾಗಿ ಬಹಳ ಹೊಡೆತ ಬಿದ್ದು ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದಂಥಹ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುವ ಹಲವಾರು ಜೀವಗಳು ಕತ್ತಲ ಕೋಣೆಯಲ್ಲಿ ಬಂಧಿಯಾಗಿ ಮುಂದಿನ ತಮ್ಮ, ತಮ್ಮ ಕುಟುಂಬ ಹಾಗೂ ಮಕ್ಕಳ ಭವಿಷ್ಯಗಳನ್ನು ನೆನೆದು ಕಣ್ಣಿರು ಹಾಕುತ್ತಿರುವುದು ನಮಗೆ ಕಾಣಲ್ಪಡುವುದಿಲ್ಲ. ಅಂಥಹ ಹಲವು ಜೀವಗಳು ನಮ್ಮ ಜಮಾತ್ತಿನಲ್ಲಿ, ನಮ್ಮ ಸಮುದಾಯದಲ್ಲಿ, ನಮ್ಮ ಸಮಾಜದಲ್ಲಿ ಬಹಳಷ್ಟು ಮಂದಿ ಇರುವುದಂತು ಖಂಡಿತ, ಅಂಥಹವರನ್ನು ಕಂಡು ಹುಡುಕಿ ಅವರ ನಷ್ಟದ ಬಾಬ್ತನ್ನು ಚುಕ್ತಗೊಳಿಸಿ, ಸ್ವಾತಂತ್ರ್ಯಗೊಳಿಸಿ ಅವರನ್ನು ಮುಖ್ಯವಾಹಿಣಿಗೆ ತರುವಂತೆ ಮಾಡಿದ್ದಲ್ಲಿ ನಾವು ನೀಡುತ್ತಿರುವ ಝಕಾತ್ತಿಗೆ ಒಂದು ಮಹತ್ತ್ವ ಬರುವುದಂತು ಖಚಿತ.
ತಾನೊಂದು ದೊಡ್ಡ ಉಧ್ಯಮಿಯಾಗಬೇಕು, ನನ್ನಿಂದ ನನ್ನ ಕುಟುಂಬಕ್ಕೆ, ನನ್ನ ಸಮಾಜಕ್ಕೆ ಹೀಗೆ ಹಲವರಿಗೆ ಉಪಯೋಗವಾಗಬೇಕು, ನಾನು ಸಮಾಜದಲ್ಲಿ ಒಂದು ಗಣ್ಯ ವ್ಯಕ್ತಿಯಾಗಿ ಮೆರೆಯಬೇಕೆಂಬ ಉಧ್ಧೇಶವನ್ನಿಟ್ಟುಕ್ಕೊಂಡು ತಾನಿದ್ದ ಕಂಪೆನಿಯ ಕೆಲಸವನ್ನು ತೊರೆದು, ಇನ್ನು ಕೆಲವರು ಕೆಲಸದಲ್ಲಿದ್ದುಕ್ಕೊಂಡು, ಕೆಲವರು ಪಾರ್ಟನರುಗಳನ್ನು ಪಡೆದು ಇನ್ನು ಕೆಲವರು ಒಂಟಿಯಾಗಿ ತನ್ನಲ್ಲಿದ್ದ ಹಣದಿಂದ ಊರಿನಲ್ಲಿ, ಕೊಲ್ಲಿಯಲ್ಲಿ ಉಧ್ಧಿಮೆಯನ್ನು ಆರಂಭಿಸಿ ಅದು ನಿರೀಕ್ಷಿತ ಮಟ್ಟದ್ದಲ್ಲಿ ಬೆಳೆಯದೆ ಅಪಾರ ನಷ್ಟವನ್ನಾನುಭವಿಸಿ ಇಖಾಮ ನವೀಕರಿಸಲಾಗದೆ, ಮನೆಯ ಬಾಡಿಗೆ, ವಿಧ್ಯುತ್ತು ಬಿಲ್ಲನ್ನು ಕಟ್ಟಲಾಗದೆ ಹಾಗೂ ಸ್ಫಾಂನ್ಸರಿಗೆ ಒಪ್ಪಿದ ಮೊತ್ತವನ್ನು ಕೊಡಲಾಗದೆ huroubu ಹಾಕಿಸಿಕೊಂಡು, ಕೋರ್ಟಿನಲ್ಲಿ ಕೇಸುಗಳಾಗಿ, travel ban ಆಗಿ ಏನೇನೆಲ್ಲವನ್ನು ಮೈಮೇಲೆಲೆದುಕೊಂಡು, ಊರಿಗೂ ಹೋಗಲಾಗದೆ, ಸ್ವತಂತ್ರವಾಗಿ ಓಡಾದಲಾಗದೆ ಊರಿನಲ್ಲಿರುವ ತಮ್ಮ ತಾಯಿ, ತಂದೆ, ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ನೋಡಲಾಗದೆ, ಅತ್ತ ಇದನ್ನು ಯಾರೋಂದಿಗೂ ಹೇಳಲಾಗದೆ, ಇತ್ತ ಯಾರೋಂದಿಗೂ ಏನನ್ನೂ ಕೇಳಲಾಗದೆ, ಬಹಳವಾಗಿ ಮಾನಸಿಕವಾಗಿ, ದೈಹಿಕವಾಗಿ ನೊಂದಿರುವ, ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಬಹಳಷ್ಟು ಮಂದಿ ನಮ್ಮ ನಡುವೆ ಇರುವರು. ಅವರುಗಳು ಮಾನಸಿಕವಾಗಿ ಪಡುತ್ತಿರುವ ದಿನನಿತ್ಯದ ಯಾತಾನಮಯ ಜೀವನಗಳು ಎಂಥಹ ಕಲ್ಲು ಹ್ರದಯವೂ ನೀರಾಗುವುದು. ಅದ್ದರಿಂದ ಧಾನಿಗಳಾದ ಸಮುದಾಯದ ನಾಯಕರೇ ತಾವುಗಳು ಈ ವರುಷದ ಧಾನ ಹಾಗೂ ಝಕಾತ್ತಿನ ಹಣದಿಂದ ಇಂಥಹವರನ್ನು ಕಂಡು ಹುಡುಕಿ ಅವರನ್ನು ಈ ಭಯಾನಕ ಪರಿಸ್ಥಿತಿಯಿಂದ ವಿಮುಕ್ತಗೊಳಿಸಿ ಅವರನ್ನು ಸ್ವತಂತ್ರವಾಗಿ ಓಡಾದುವಂತೆ, ದುಡಿಯುವಂತೆ ಮತ್ತು ತಮ್ಮ ಕುಟುಂಬದವರೊಂದಿಗೆ ಸೇರುವಂತೆ ಮಾಡಿದ್ದಲ್ಲಿ ಅ ಸರ್ವಶಕ್ತನ ಬಳಿಯ ಕ್ರಪೆಗೆ ಪಾತ್ರರಾಗಿ ಅಪಾರವಾದ ಪ್ರತಿಫಲ ಸಿಗುವುದರಲ್ಲಿ ಯಾವೂದೇ ಸಂಶಯವಿಲ್ಲ.
ಅಶ್ಫಾಕ್ ಎ. ಕಾರ್ನಾಡ್,
“ಜೀವನ ಶಾಶ್ವತವಲ್ಲ ಅದರೆ ಮಾಡಿದ ಸತ್ಕರ್ಮಗಳು ಎಂದೆಂದಿಗೂ ಶಾಶ್ವತವಾಗಿರುವುದು ಅದರ ಪ್ರತಿಫಲ ಅಂತ್ಯ ದಿನದವರೇಗೂ ಸಿಗುತ್ತಲಿರುವುದು”.
ಧಾನಿಗಳೇ ತಾವು ತಮ್ಮ ಧಾನದಿಂದ ಇಂಥಹವರನ್ನು ಕಂಡು ಹುಡುಕಿ ಅವರನ್ನು ಋಣಮುಕ್ತಗೊಳಿಸಿ ಅವರುಗಳ ಮುಂದಿನ ಭವಿಷ್ಯ ಯಶಸ್ವಿಗೊಳಿಸಿ, ಸಮುದಾಯದ, ಸಮಾಜದ ಉನ್ನತಿಗಾಗಿ ಸಹಕಾರಿಯಾಗುವೀರೆಂದು ಭಾವಿಸಿ ಸಂತುಷ್ಟಗೊಳ್ಳುವೇನು.
ಅಶ್ಫಾಕ್ ಎ. ಕಾರ್ನಾಡ್, ಸಮುದಾಯಿ ಪ್ರೇಮಿ,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.