(www.vknews.com) : ದೇಶಕ್ಕೆ ದೇಶವೇ ಕೊರೊನ ಎಂಬ ಮಹಾಮಾರಿಯಿಂದಾಗಿ ಲಾಕ್ ಡೌನ್ ಗೊಳಗಾಗಿ ಜನರೆಲ್ಲಾ ಗೃಹಬಂಧನಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಸರಕಾರದ ಆದೇಶಕ್ಕೆ ತಲೆಬಾಗಿ ಜುಮಾ ನಮಾಝ್, ತರಾವೀಹ್, ಇಫ್ತಾರ್ ನಂತಹ ಪುಣ್ಯಕಾರ್ಯಗಳನ್ನೇ ಮಸೀದಿಗಳಲ್ಲಿ ಸಾಮೂಹಿಕವಾಗಿ ಮಾಡುವುದನ್ನು ನಾವು ತ್ಯಜಿಸಿದ್ದೆವೆ. ಈ ಪುಣ್ಯ ಆರಾಧನೆಗಳನ್ನೆಲ್ಲಾ ಮನೆಗೆ ಸೀಮಿತಗೊಳಿಸಿದ್ದೇವೆ.
ಇಂತಹ ಸಮಯದಲ್ಲಿ ಕೆಲವು ಜನ ಈದ್ ಹಬ್ಬದ ಹೊಸ ವಸ್ತ್ರಗಳಿಗಾಗಿ ಜವುಳಿ ಮಳಿಗೆಗಳನ್ನು ತೆರೆಯಬೇಕೆಂಬ ತೀರ್ಮಾನಕ್ಕೆ ಬಂದಂತಿದೆ. ಈಗ ಲಾಕ್ ಡೌನ್ ನಿಂದ ಡ್ರೆಸ್ ಖರೀದಿಗೆ ಕೊಂಚ ಸಡಿಲಿಕೆ ನೀಡಿ ಜನರೆಲ್ಲಾ ಬೀದಿಗೆ ಬಂದರೆ ನಾವು ಇದುವರೆಗೆ ಮಾಡಿದ ತ್ಯಾಗ ಗಳೆಲ್ಲವೂ ನಿಷ್ಫಲವಾಗಲಿದೆ. ನಾವೇ ಕೈಯಾರ ಸೋಂಕು ಹರಡಲು ಕಾರಣಕರ್ತರಾದ ಹಾಗೆ ಆಗಬಹುದು. ಕೆಲವೊಮ್ಮೆ ಇದೇ ಕಾರಣ ಹಲವರ ಕೆಂಗಣ್ಣಿಗೆ ಗುರಿಯಾಗಿ ಜಾತಿ ವೈರಸ್ ಆಪಾದನೆಯ ಪರಿಧಿ ಮುಂದುವರೆಯಲೂ ಸಾಧ್ಯವಿದೆ. ಜೊತೆಗೆ ಜಗತ್ತೇ ಕೊರೊನ ದಿಂದಾಗಿ ಶೋಕದಿಂದಿರುವಾಗ ನಾವು ಹೊಸ ವಸ್ತ್ರಗಳನ್ನು ಧರಿಸುವುದರಲ್ಲಿ ಅರ್ಥವೂ ಇಲ್ಲ.
ಆದ್ದರಿಂದ ಈ ಬಾರಿ ನಾವು ಈದ್ ಗೆ ಡ್ರೆಸ್ ಖರೀದಿಸುವ ಆ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಉಪಯೋಗಿಸಿದರೆ ಪುಣ್ಯ ಗಳಿಸುವುದರ ಜೊತೆಗೆ ಸೋಂಕು ಹರಡವುದನ್ನು ತಡೆಯಬಹುದಾಗಿದೆ.
ಆತೂರು ಬದ್ರಿಯಾ ಜುಮಾ ಮಸೀದಿಯ ಈ ನಿರ್ಧಾರಕ್ಕೆ ಜಮಾಅತ್ ದಾರರೆಲ್ಲಾ ಬಧ್ದರಾಗಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.
✍ ಅಬ್ದುಲ್ ರಝಾಕ್ ಅಧ್ಯಕ್ಷರು, ಬದ್ರಿಯಾ ಜುಮಾ ಮಸೀದಿ ಆತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.