ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಲಾಕ್ ಡೌನ್ ಸಂಧರ್ಭದಲ್ಲಿ ಸಾಮಾನ್ಯ ಜನರೆಲ್ಲರೂ ಕೆಲಸವಿಲ್ಲದೆ ಆರ್ಥಿಕವಾಗಿ ಕುಗ್ಗಿರುವಾಗ ಬಡವರಾದವರ ಪಾಡಂತೂ ಹೇಳತೀರದು. ಆದರೆ ಸಂಘ ಸಂಸ್ಥೆಗಳು ನೀಡುವ ಕಿಟ್ ಗಳಿಂದ ಆಹಾರದ ತೊಂದರೆ ಹೆಚ್ಚಿನವರಿಗೆ ಆಗಲಿಲ್ಲ. ಹೀಗಿರುವಾಗ ಇಲ್ಲೊಂದು ಬಡ ಕುಟುಂಬದ ಮಹಿಳೆಯೊಬ್ಬರು ಅಪಘಾತದಿಂದ ಕಾಲಿಗೆ ದೊಡ್ಡ ಆಘಾತವಾಗಿ ಆಪರೇಷನ್ ಆಗಿ ಕೆವಿಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು.
ತೀವ್ರ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಇದು ದೊಡ್ಡ ಆಘಾತವನ್ನುಂಟುಮಾಡಿದೆ. ಆರ್ಥಿಕ ಸಮಸ್ಯೆಯಿಂದ ಬಳಲಿದ ಇವರು ಆಸ್ಪತ್ರೆಯ ಖರ್ಚು ಹೇಗೋ ಮಾಡಿದರೂ ಕಾಲು ನೆಲಕ್ಕೆ ಊರಲು ಸಾಧ್ಯವಿಲ್ಲದ ಈ ರೋಗಿಗೆ ವಾಕರ್ ಹೇಗೆ ತೆಗೆಯುವುದು ಎಂದು ಸಂಕಷ್ಟದಲ್ಲಿದ್ದಾಗ ಅವರ ಸಂಕಷ್ಟವನ್ನರಿತು ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡವು ಅವರ ಸಹಾಯಕ್ಕೆ ನಿಂತು ಹೊಸ ವಾಕರ್ ನ್ನು ಅವರಿಗೆ ಆಸ್ಪತ್ರೆಯ ಅಧಿಕಾರಿಗಳಾದ ಪ್ರವೀಣ್ ಹಾಗೂ ಇತರ ಸಿಬ್ಬಂದಿಗಳ ಸಮ್ಮುಖದಲ್ಲಿ ಉಚಿತವಾಗಿ ನೀಡಿದೆ.
ಪ್ರಸ್ತುತ ಸಂಧರ್ಭದಲ್ಲಿ ತುರ್ತು ಸೇವಾ ತಂಡದ ಕಾರ್ಯಕರ್ತರಾದ ನೌಷಾದ್ ಕೆರೆಮೂಲೆ, ಹಾರಿಸ್ ಬೋರುಗುಡ್ಡೆ, ಸಿದ್ಧೀಕ್ ಗೂನಡ್ಕ, ಎ.ಎಂ.ಫೈಝಲ್ ಝುಹ್’ರಿ ಮೊದಲಾದವರು ಹಾಜರಿದ್ದರು. ಸಂತೋಷಗೊಂಡ ಆ ಬಡ ಕುಟುಂಬವು ತುಂಬು ಹೃದಯದಿಂದ ತುರ್ತು ಸೇವಾ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.