ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೊರೋನಾ ರೋಗ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಈ ವರ್ಷದ ಈದ್ ಹಬ್ಬ ಸಾಧ್ಯವಾದಷ್ಟು ಸರಳವಾಗಿ ಆಚರಿಸುವ ಹಿನ್ನಲೆಯಲ್ಲಿ ಹೊಸ ಬಟ್ಟೆ ಇತ್ಯಾದಿ ಕೊಂಡುಕೊಳ್ಳಲು ಮಹಿಳೆಯರು ಮಕ್ಕಳು ಮನೆಯಿಂದ ಹೊರಹೋಗದೆ ಮನೆಯಲ್ಲಿಯೇ ನಿಂತು ಸಹಕರಿಸುವಂತೆ ಶಂಸುಲ್ ಉಲಮಾ ಯೂತ್ ವಿಂಗ್ ಈಶ್ವರಮಂಗಲ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈದ್ ಮುಸ್ಲಿಮರ ಪವಿತ್ರ ಹಬ್ಬವಾಗಿದ್ದು,ಪ್ರತಿವರ್ಷವೂ ಈದ್ ಹಬ್ಬಕ್ಕೆ ಕುಟುಂಬ ಸಮೇತ ಹೊಸ ಉಡುಪು ಧರಿಸಿ ಔತಣಕೂಟ ಏರ್ಪಡಿಸಿ ಪರಸ್ಪರ ಸ್ನೇಹ ವಿನಿಮಯ ಮಾಡಿಕೊಳ್ಳುವುದು ವಾಡಿಕೆ .ಆದರೆ ರೋಗದ ಹಿನ್ನಲೆಯಲ್ಲಿ ಈ ವರ್ಷದ ರಂಜಾನ್ ಈದ್ ಹಬ್ಬವನ್ನು ನಮ್ಮ ಉಲಮಾ ಉಮರಾ ನಾಯಕರ ಆಹ್ವಾನದ ಮೇರೆಗೆ ಬಹಳ ಸರಳವಾಗಿ ಆಚರಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.
ಬಟ್ಟೆ ಅಂಗಡಿಗಳಲ್ಲಿ ಮುಗಿಬಿದ್ದು ಒಂದಿಬ್ಬರು ಮಾಡುವ ಎಡವಟ್ಟಿನಿಂದ ಇಡೀ ಸಮುದಾಯವೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಇರುವ ಬಟ್ಟೆ ಧರಿಸಿಕೊಂಡು ಸರಳವಾಗಿ ಈದ್ ಆಚರಿಸಿ ಸಹಕರಿಸುವಂತೆ ಶಂಸುಲ್ ಉಲಮಾ ಯೂತ್ ವಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶಂಸುಲ್ ಉಲಮಾ ಯೂತ್ ವಿಂಗ್ ಈಶ್ವರಮಂಗಲ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.