ಕವನ : (www.vknews.com)
ಸಾಮ್ರಾಜ್ಯವ ಕಟ್ಟಿ ಸೃಷ್ಟಿಕರ್ತನ ಮರೆತು ಮೆರೆಯುತ್ತಿದ್ದ ಹೊತ್ತು ಜೀವನ ಆಡಂಭರದ ಗತ್ತು ಈಗ ನೋಡು ಲಾಕ್ ಡೌನ್ ಆಪತ್ತು
ಮಹಾ ಮೋಹಗಳ ನಡುವೆ ಬಡವರ ದಾಹವ ನೋಡದೆ ಕಣ್ಣಿದ್ದೂ ಕುರುಡರಾಗಿದ್ದೆ ಈಗ ಲಾಕ್ ಡೌನ್ ನಗುತಿದೆ
ಅಲ್ಲಾಹನ ದೀನ್ ದಿಕ್ಕರಿಸಿದ ದಿನಗಳು ಗಾಂಭೀರ್ಯವಿಲ್ಲದ ಆರಾಧನೆಗಳು ಪ್ರಾರ್ಥನೆಯೂ ನಾಟಕವಾಡಿ ಈಗ ಲಾಕ್ ಡೌನ್ ನೋಡಿ
ಸಂಪತ್ತು ಸ್ಥಾನಕ್ಕಾಗಿ ಕಿತ್ತಾಟ ಮಾಡುವಾಗಲೂ ಸಾವಿನ ನೆನಪೇ ಇರಲಿಲ್ಲ ಈಗ ಸಾವನ್ನೇ ಹೊತ್ತು ಬಂದಿದೆ ಲಾಕ್ ಡೌನ್
ನಿಷೇಧಗಳಿಗೆ ನಿಯಂತ್ರಣವಿಡದೆ ಹುಚ್ಚೆದ್ದು ಕುಣಿದ ನಿನ್ನೆಗಳು ಹರಾಮನ್ನೇ ಪ್ರೀತಿಸಿದ್ದೆವು ಈಗ ಲಾಕ್ ಡೌನ್ ಅಪ್ಪಿಕೊಂಡಿದೆ
ಮಲಿನ ಮನವ ಶುಚಿಗೊಳಿಸಿ ರಬ್ಬಿನೆಡೆಗೆ ತವಕ್ಕುಲ್ ಮಾಡಿದರೆ ಕರುಣಾಮಯಿ ಕಾವಲಿರುವನು ಲಾಕ್ ಡೌನ್ ಕೂಡ ಸೋಲುವಂತೆ
✒ ಝಕರಿಯ ಮಾಡನ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.