(www.vknews.com) : ಸಾಮಾನ್ಯವಾಗಿ ಮಕ್ಕಳೊಂದಿಗೆ ಪ್ರೀತಿಯಿರುವ ತಂದೆ ತಾಯಿಯಂದಿರು ಜೀವನ ಪರ್ಯಂತ ನಮ್ಮ ಮಕ್ಕಳು ನಮ್ಮೊಟ್ಟಿಗೇ ಇರಬೇಕೆಂದು ಬಯಸುತ್ತಾರೆ.ಯಾವುದೇ ಕಾರಣಕ್ಕೂ ಅವರು ಮನೆಯಿಂದ ಆಚೆ ಹೋಗುವುದನ್ನು ಇಷ್ಟ ಪಡುವುದೇ ಇಲ್ಲ.ಮಕ್ಕಳು ದೊಡ್ಡವರಾಗಿ ಅವರಿಗೆ ಮದುವೆ,ಮಕ್ಕಳೆಲ್ಲಾ ಆಗಿ ಮನೆಯಲ್ಲಿ ಸ್ಥಳಾವಕಾಶ, ಸೌಕರ್ಯಗಳು ಕಡಿಮೆಯಾದಾಗ ಅನಿವಾರ್ಯವಾಗಿ ಮನಸ್ಸಿಲ್ಲದ ಮನಸ್ಸಿನೊಂದಿಗೆ ಮಕ್ಕಳು ಬೇರೆ ಮನೆ ಮಾಡಿ ಬೇರೆ ಹೋಗುವುದನ್ನು ಒಂದು ವೇಳೆ ತಂದೆ ತಾಯಿ ಒಪ್ಪಿಯಾರು.
ಆದರೆ ಅದೇ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಹೊರಹಾಕಿ ಬಾಗಿಲು ಮುಚ್ಚಿ ಬಿಡುತ್ತಾರೆಂದಾದರೆ ಅಲ್ಲಿ ಏನೋ ಸಂಭವಿಸಿದೆ ಎಂದು ಗ್ರಹಿಸದೆ ನಿವೃತಿಯಿಲ್ಲ.ಒಂದಾ ಮನೆಯ ಯಜಮಾನ ತಂದೆ ತಾಯಿಯ ಆಜ್ಞೆಯನ್ನು ಧಿಕ್ಕರಿಸಿರಬೇಕು.ಅಥವಾ ಆ ಮನೆಯ ಶಿಸ್ತನ್ನು ಉಲ್ಲಂಘಿಸಿರಬೇಕು.ಅಥವಾ ಬೇರೇನಾದರೂ ಸಂಭವಿಸಿರಲೇ ಬೇಕು.ಇದು ಸಾಮಾನ್ಯ ಪ್ರೀತಿ ಪ್ರೇಮ ವಾತ್ಸಲ್ಯವಿರುವ ತಂದೆ ತಾಯಿ ಮಕ್ಕಳ ಸಂಬಂಧದ ಕಥೆ.
ಇನ್ನು ಭೂಮಿಯ ಮೇಲಿರುವ ಎಲ್ಲಾ ಮಸ್ಜಿದ್ ಗಳು ಆಲ್ಲಾಹನ ಭವನಗಳಾಗಿದ್ದು ಅದರ ಯಜಮಾನ ಅಲ್ಲಾಹನಾಗಿರುತ್ತಾನೆ. ಅಲ್ಲಾಹು ಮತ್ತು ಅವನ ದಾಸರ ಸಂಬಂಧ ಒಂದು ತಂದೆ ತಾಯಿ ಮತ್ತು ಮಕ್ಕಳು, ಅಣ್ಣ ತಮ್ಮಂದಿರು,ಗಂಡ ಹೆಂಡತಿಯರ ಸಂಬಂಧಗಳಿಗೆ ಸಮಾನವಾದುದಲ್ಲ. ಇದೆಲ್ಲಕ್ಕಿಂತ ಮಿಗಿಲಾದ ತನ್ನ ದಾಸರೊಂದಿಗೆ ಅತ್ಯಂತ ಕರುಣಾಮಯಿಯೂ ಪರಮ ದಯಾಳುವೂ ಆಗಿರುವನು
ಆ ಯಜಮಾನನಾದ ಅಲ್ಲಾಹು ತನ್ನ ದಾಸರು ಸದಾ ತನ್ನ ಭವನವಾದ ಮಸೀದಿಗಳಲ್ಲಿರುವುದನ್ನೇ ಅತ್ಯಂತ ಹೆಚ್ಚು ಇಷ್ಟ ಪಡುತ್ತಾನೆ.ಮಾತ್ರವಲ್ಲ ಮಸೀದಿಯಲ್ಲಿ ಸುಖಾಸುಮ್ಮನೆ ಉಳಿಯುವ ಪ್ರತಿಯೊಂದು ಸೆಕೆಂಡಿಗೂ ಅಪಾರವಾದ ಪ್ರತಿಫಲವನ್ನೂ ವಾಗ್ದಾನ ಮಾಡಿರುತ್ತಾನೆ.ಅಲ್ಲದೆ ಇದಕ್ಕೆ ತನ್ನ ದಾಸರನ್ನು ಸದಾ ಆಹ್ವಾನಿಸುತ್ತಲೇ ಇರುತ್ತಾನೆ.
ಆದರೆ ಅದೇ ಅಲ್ಲಾಹು ಇದೀಗ ಅವನ ಪರಮಪವಿತ್ರ ಮಕ್ಕಾ ಮದೀನಾ ಮಸ್ಜಿದ್ ಗಳು ಸೇರಿ ಎಲ್ಲಾ ಮಸ್ಜಿದ್ ಗಳ ಬಾಗಿಲನ್ನು ಕೆಲವು ದಿನಗಳಿಂದ ತನ್ನ ದಾಸರಿಗೆ ಮುಚ್ಚಿರುತ್ತಾನೆ ಯಾಕೆ ಎಂಬುದು ಗಂಭೀರ ಚಿಂತನಾರ್ಹ ವಿಷಯ.
ಮಕ್ಕಾ ಮುಅಧ್ಧಿನ್ ಅಧಾನ್ ಕರೆ ಪ್ರಾರಂಭಿಸಿ ಹಯ್ಯ ಅಲಸ್ವಲಾ ಎನ್ನುವಷ್ಟರಲ್ಲಿ ಸಮುದ್ರದ ಅಲೆಗಳು ಹರಿದು ಬರುವಂತೆ ಹರಂ ಷರೀಫಿನ ನಾಲ್ಕು ದಿಕ್ಕುಗಳಿಂದ ಲಕ್ಷಾಂತರ ಮನುಷ್ಯರಾಶಿಯ ಅಲೆಗಳು ದಾವಿಸಿ ಬರುವ ಆ ಸುಂದರ ದೃಶ್ಯವನ್ನು ದರ್ಶಿಸುವ ಯಾವೊಬ್ಬನಿಗೂ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಮರು ಮಾಡಿದ ದುಆ ನೆನಪಿಗೆ ಬರದಿರಲು ಸಾಧ್ಯವೇ ಇಲ್ಲ.
ಪ್ಯಾಲೆಸ್ತೀನಿನಲ್ಲಿದ್ದ ಖಲೀಲುಲ್ಲಾಹಿ ಇಬ್ರಾಹೀಮ್ ಅಲೈಹಿಸ್ಸಲಾಮರು ಅಲ್ಲಾಹನ ಆಜ್ಞೆ ಅನುಸರಿಸಿ ತನ್ನ ಏಕಮಾತ್ರ ಪುಟ್ಟ ಮಗು ಇಸ್ಮಾಈಲ್ ಮತ್ತು ತಾಯಿ ಹಾಜರ್ ರವರನ್ನು ಅಂದು ನೀರಿಲ್ಲದ,ಕೃಷಿಯಿಲ್ಲದ,ಮನುಷ್ಯರಿಲ್ಲದ ನಿರ್ಜನ ಪ್ರದೇಶವಾಗಿದ್ದ ಈ ಮಕ್ಕಾ ಪ್ರದೇಶದಲ್ಲಿ ಬಿಟ್ಟು ಹೋಗುವಾಗ ಮಾಡಿದ ದುಆ ಖುರ್ಆನಿನಲ್ಲಿದೆ. رَّبَّنَا إِنِّي أَسْكَنتُ مِن ذُرِّيَّتِي بِوَادٍ غَيْرِ ذِي زَرْعٍ عِندَ بَيْتِكَ الْمُحَرَّمِ رَبَّنَا لِيُقِيمُوا الصَّلَاةَ فَاجْعَلْ أَفْئِدَةً مِّنَ النَّاسِ تَهْوِي إِلَيْهِمْ وَارْزُقْهُم مِّنَ الثَّمَرَاتِ لَعَلَّهُمْ يَشْكُرُونَ (37)
ಓ ನಮ್ಮ ಪ್ರಭೂ. ನಾನು ನನ್ನ ಸಂತತಿಯಿಂದ (ಕೆಲವರನ್ನು) ಒಂದು ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಗೇಹದ ಬಳಿ ತಂದು ನೆಲೆಗೊಳಿಸಿದ್ದೇನೆ. ಓ ನಮ್ಮ ಪ್ರಭೂ. ಇವರು ನಮಾಝನ್ನು ಸಂಸ್ಥಾಪಿಸಲೆಂದು(ಹೀಗೆ ಮಾಡಿರುತ್ತೇನೆ.)ಆದ್ದರಿಂದ ನೀನು ಜನರಲ್ಲಿ ಕೆಲವರ ಮನಸ್ಸುಗಳನ್ನು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ಹಣ್ಣು,ಫಲಗಳನ್ನು ನೀಡು.ಇವರು ಕೃತಜ್ಞರಾಗಲೂ ಬಹುದು.(ಇಬ್ರಾಹೀಮ್ 37)
ಈ ಪ್ರಾರ್ಥನೆಯಲ್ಲಿ ನಮಾಝ್ ನೆಲೆಗೊಳಿಸಲು ಎಂದು ಪ್ರತ್ಯೇಕ ಪ್ರಸ್ತಾಪಿಸಿರುವುದು ಕಾಣಬಹುದು.ಇದರ ಪರಿಣಾಮ ಫಲವಾಗಿದೆ ಪವಿತ್ರ ಮಕ್ಕಾದಲ್ಲಿ ಇವತ್ತು ಕಾಣಲು ಸಾಧ್ಯವಾಗುವ ಈ ಸುಂದರ ದೃಶ್ಯ.
ಆದರೆ ಕೆಲವು ದಿನಗಳಿಂದ ಈ ಪವಿತ್ರ ಪ್ರದೇಶವನ್ನು ದರ್ಶಿಸುವ ಯಾವ ಸತ್ಯ ವಿಶ್ವಾಸಿಯ ಮನಸ್ಸೂ ಕರಗದಿರಲು ಸಾಧ್ಯವೇ ಇಲ್ಲ.ಮಕ್ಕಾ ಮದೀನ ಎರಡೂ ಹರಮ್ ಗಳೂ ಖಾಲಿಯಾಗಿವೆ.ನಮಾಝ್ ಇಲ್ಲ. ತವಾಫ್ಇಲ್ಲ. ಉಂರ ಇಲ್ಲ ಈ ವರ್ಷದ ಹಜ್ ಕೂಡಾ ಅನುಮಾನ.(ಅಲ್ಲಾಹು ಆದಷ್ಟು ಬೇಗ ಈ ಮುಸೀಬತಿನಿಂದ ಕಾಪಾಡಲಿ)
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ಇದು ಮಾತ್ರವಲ್ಲ ಜಗತ್ತಿನ ಬಹುತೇಕ ಮಸ್ಜಿದ್ ಗಳು ಇಂದು ಮುಚ್ಚಲ್ಪಟ್ಟಿವೆ.ಆರಾಧನೆಗಳೆಲ್ಲಾ ಮನೆಗಳಿಗೇ ಸೀಮಿತಗೊಂಡಿದೆ.ಸತ್ಯ ವಿಶ್ವಾಸಿಗಳೆಲ್ಲಾ ದುಃಖತರಾಗಿದ್ದಾರೆ.
ಈ ಸಂಭವ ವಿಕಾಸಗಳೆಲ್ಲಾ ಮನುಷ್ಯನಿಗೆ ಅನೇಕ ಪಾಠಗಳನ್ನು ನೀಡುತ್ತಿಲ್ಲವೇ.ಇದರಲ್ಲಿ ಚಿಂತಿಸುವವರಿಗೆ ಚಿಂತನಗಳಿಲ್ಲವೇ.ಖಂಡಿತಾ ಇದೆ. ಅದೇನಂದರೆ……
ಮುಂದುವರಿಯುವುದು.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.