ಕೋಲಾರ (www.vknews.com) : ಎಣ್ಣೆ ನಶೆಯಲ್ಲಿ ಹಾವನ್ನೇ ಕಚ್ಚಿ ಕಚ್ಚಿ ವಿಕೃತ ಮೆರೆದ್ದಿದ್ದ ಆರೋಪಿ ಕುಮಾರ್ ನನ್ನು ಪೋಲಿಸ್ ಭದ್ರತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟುರು ಗ್ರಾಮದ ನಿವಾಸಿಯಾದ ಕುಮಾರ್ ಪಾನಮತ್ತನಾಗಿ ಕೆರೆ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿ ಕತ್ತಿನ ಭಾಗಕ್ಕೆ ಸುತ್ತಿಕೊಂಡು ವಿಕೃತಿ ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೇತ ಅರಣ್ಯ ಇಲಾಖೆ ನಶೆ ಇಳಿದ ಬಳಿಕ ಗ್ರಾಮಕ್ಕೆ ಮತ್ತೆ ಬಂದಿದ್ದ ಕುಮಾರ್ ನನ್ನು ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಅರೆಸ್ಟ್ ಮಾಡಿದ್ದಾರೆ.
ಸಧ್ಯ ಮುಳಬಾಗಿಲು ಅರಣ್ಯ ಇಲಾಖೆಯ ವಶದಲ್ಲಿರುವ ಆರೋಪಿ ಕುಮಾರ್ ವಿರುದ್ಧ Animal act ಅಡಿ FIR ದಾಖಲು ಮಾಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.