ಮಾಡನ್ನೂರು (ವಿಶ್ವ ಕನ್ನಡಿಗ ನ್ಯೂಸ್) : ಕೋವಿಡ್- 19 ಪರಿಣಾಮ ಲಾಕ್ ಡೌನ್ ನಿಂದ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಮಾಡನ್ನೂರ್ ಜಮಾತ್ ವ್ಯಾಪ್ತಿಯ 250 ರಷ್ಟು ಕುಟುಂಬಳಿಗೆ ಎರಡನೇ ಹಂತದ ಕಿಟ್ ವಿತರಣೆ ನಡೆಯಿತು. ಊರಿನ ಹಾಗೂ ವಿದೇಶದಲ್ಲಿರುವ ಉದಾರ ದಾನಿಗಳು ಕುವ್ವತ್ತುಲ್ ಇಸ್ಲಾಂ ಅಸೋಸಿಯೇಷನ್, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಮೊದಲಾದ ಸಂಘ-ಸಂಸ್ಥೆಗಳು ಜಮಾತ್ ಸಮಿತಿಯೊಂದಿಗೆ ಈ ಮಹತ್ತರ ಕಾರ್ಯ ಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಜಮಾತ್ ನೇತಾರರಾದ ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಬುಶ್ರಾ, ಖತೀಬರಾದ ಸಿರಾಜುದ್ದೀನ್ ಫೈಝಿ ಜಮಾಅತರೊಂದಿಗೆ ಕೋವಿಡ್ ಬಗ್ಗೆ ವಿಡಿಯೋ ಸಂದೇಶದಲ್ಲಿ ಜಾಗೃತಿ ಮೂಡಿಸಿದರು. ಅದೇ ರೀತಿ ರಂಜಾನ್ ಮುಕ್ತಾಯದಲ್ಲಿ ಬರುವ ಈದ್ ಆಚರಣೆಯನ್ನು ಸರಳವಾಗಿ ಆಚರಿಸಲು ಕರೆ ನೀಡಿದರು.
ಲಾಕ್ಡೌನ್ ಪ್ರಾರಂಭದಿಂದ 2-ಹಂತದಲ್ಲಿ ವಿತರಿಸಿದ ವಿತರಿಸಿದ ರೇಷನ್ ಸಾಮಗ್ರಿಗಳಿಗೆ ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್, ನೂರುಲ್ ಹುದಾ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ಅಝೀಝ್, ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ನೆಕ್ಕರೆ, ಪುಷ್ಪಕ್ ಇಬ್ರಾಹಿಂ ಹಾಜಿ ಕಾವು, ವಿದೇಶಿ ಉದ್ಯಮಿಗಳಾದ ಅಶ್ರಫ್ ಯಾಕೂತ್ ದುಬೈ , ಲುಲು ಇಬ್ರಾಹಿಂ ಹಾಜಿ ಮಸ್ಕತ್, ಉಮರ್ ಮಿನಾರ್ ಕಾವು, ಇಝ್ಝುದ್ದೀನ್ ಮುಸ್ಲಿಯಾರ್, ನಿವ್ರತ್ತ ಎ.ಎಸ್.ಐ.ಹಸೈನಾರ್, ನೂರುದ್ದೀನ್ ಬುಶ್ರಾ ಮತ್ತು ಸಂಗಡಿಗರು. ಬ್ಲೂಸ್ಟಾರ್ ಮಿತ್ರರು ಅಲ್ಲದೆ ಇನ್ನಿತರರು ಸಹಾಯಧನ ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಎಂ.ಡಿ.ಮೊಯಿದು, ಯಂಗ್ ಮೆನ್ಸ್ ಅಧ್ಯಕ್ಷ ಹಿರಾ ಶಾಫಿ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ನ ಅಧ್ಯಕ್ಷ ಖಾಲಿದ್ ಬಿ.ಎಮ್, ಸಿ.ಕೆ.ಹಸೈನಾರ್, ಹಸೈನಾರ್ ಎಂ.ಡಿ, ಅಶ್ರಫ್ ನೂರಿ, ಶರೀಫ್ ಅಂಗಡಿ ಅಲ್ಲದೆ ಜಮಾತ್ ವ್ಯಾಪ್ತಿಯ ಯುವಕ ಮಿತ್ರರು ಮನೆಮನೆ ತಲುಪಿಸುವಲ್ಲಿ ಸಹಕರಿಸಿದರು.
Report & Video : DRSN MEDIA
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.