(www.vknews.com) : ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ(ರಿ.) ದ.ಕ. ಜಿಲ್ಲಾ ಸಮಿತಿ ವತಿಯಿಂದ ಕೋವಿಡ್-19 ಮಹಾಮಾರಿ ದೇಶಕ್ಕಪ್ಪಳಿಸಿದ ನಂತರ ಬಡಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ಕಿಟ್ ಮತ್ತು ರಂಝಾನ್ ಕಿಟ್ ಸರಿಸುಮಾರು ನೂರೈವತ್ತು ಆಹಾರ ಪೊಟ್ಟಣಗಳನ್ನು ಅರ್ಹ ಫಲಾನುಭವಿಗಳಿಗೆ ದಾನಿಗಳ ಸಹಕಾರ ಹಿತೈಷಿಗಳ ನೆರವುಗಳಿಂದ ವಿತರಿಸಿ ಏಕ ಸಾಧನೆಗೈದ ಟಿಪ್ಪು ಸುಲ್ತಾನ್ ಅಭಿಮಾನಿಗಳ ದಕ್ಷಿಣ ಕನ್ನಡ ಜಿಲ್ಲೆಯ ನಾಯಕ ಶಾಫಿ ಬಬ್ಬುಕಟ್ಟೆ ಜಾತಿ ಧರ್ಮ ಪಥ ಪಂಥ ಕುಲವನ್ನು ನೋಡದೆ ಎಲ್ಲಾ ವರ್ಗದವರಿಗೂ ನೀಡಿದ್ದು ಶ್ಲಾಘನೀಯವೆನಿಸಿದೆ.
ಈ ಸಂಘಟನೆಯ ವತಿಯಿಂದ ವಿತರಿಸಿದ ಈ ಮಹತ್ಕೊಡುಗೆಯ ರೂವಾರಿಗಳಾಗಿ ಅವರೊಂದಿಗೆ ಕೈಜೋಡಿಸಿದ ಹಲವಾರು ನಿಷ್ಕಳಂಕ ದಾನಿಗಳಿದ್ದಾರೆ ಅದೂ ಅಲ್ಲದೆ ಕ್ಯಾನ್ಸರ್ ಪೀಡಿತ ರೋಗಿಯೊಬ್ಬರಿಗೆ ಅವರ ಆಸ್ಪತ್ರೆ ಖರ್ಚು ಮೂವತ್ತು ಸಾವಿರ ರೂಪಾಯಿ, ಮನೆಗೆ ನಾಲ್ಕು ಸಾವಿರದಷ್ಟು ಬೆಲೆಬರುವ ರೇಶನ್ ಮತ್ತು ಮಲಗಲು ಬೆಡ್ ಮತ್ತು ತಲೆದಿಂಬು, ಬೆಡ್ ಶೀಟ್ ಮುಂತಾದವುಗಳು ದಾನಿಗಳ ಸಹಕಾರದಿಂದ ವಿತರಿಸಿದರು ಅದರೊಂದಿಗೆ ಎಂಟು ಬಡಕುಟುಂಬಗಳಿಗೆ ರಂಝಾನ್ ಒಂದರಿಂದ ಮೂವತ್ತರವರೆಗೆ ದಿನನಿತ್ಯ ಅರ್ಧ ಲೀಟರ್ ಹಾಲು ಮತ್ತು ತರಕಾರಿ, ಹಣ್ಣು ಹಂಪಲುಗಳನ್ನು ವಿತರಿಸುತ್ತಾ ಇರುವುದು ವಿಶೇಷತೆ ಸುಭಾಷ್ ನಗರದಲ್ಲಿರುವ ಬಡಕುಟುಂಬವೊಂದಕ್ಕೆ 650 ಸ್ಕ್ವೇರ್ ಫೀಟ್ ಇರುವ ಸಣ್ಣ ಮನೆಯೊಂದನ್ನು ಕಟ್ಟಿ ಕೊಡಲು ತೀರ್ಮಾನಿಸಿದ್ದು ಅದಕ್ಕಾಗಿ ಪ್ರತ್ಯೇಕ ದಾನಿಗಳಿಂದ ಹಣ ಸಂಗ್ರಹವಾಗುತ್ತಾ ಇರುವುದು ತಿಳಿದು ಬಂದಿದೆ. ಬಡವರ ಹಿತಕ್ಕಾಗಿ ಸದಾಸಮಯ ಅಹರ್ನಿಶಿ ದುಡಿಯುತ್ತಾ ಇರುವ ಈ ಸಂಘಟನೆಯು ರಕ್ತದಾನ ಕೂಡಾ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದೆ ಇದರೊಂದಿಗೆ ಈ ಸಾಧನೆಯ ಹಾದಿಯಲ್ಲಿ ಟಿಪ್ಪು ಸುಲ್ತಾನ ಅಭಿಮಾನಿಗಳ ಸಂಘಟನೆಯ ಉಪಾಧ್ಯಕ್ಷ ಮುನೀರ್ ಅಶೈಗೂಳಿ ಜೊತೆಗೂಡಿದ್ದಾರೆ.
ಪ್ರಮುಖವಾಗಿ ಈ ಸಂಘಟನೆಯ ಹಲವಾರು ನಿಸ್ವಾರ್ಥ ದಾನಿಗಳು ಕೈಜೋಡಿಸಿರುವುದರಿಂದ ಶಾಫಿ ಬಾಯಿ ರವರಿಗೆ ಆನೆಬಲ ಬಂದಂತಾಗಿದೆ. ಇನ್ನು ಮುಂದೆಯೂ ಸರ್ವರ ಸಹಕಾರ ಅಗತ್ಯವೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಇತೀ, ಸಮಾಜ ಸೇವಕ ಉಳ್ಳಾಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.