(www.vknews.com) : ರಕ್ತದಾನ ಅತ್ಯಂತ ಶ್ರೇಷ್ಟವಾದ ದಾನ. ರಕ್ತದಾನಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ವರ್ಷದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ರಕ್ತದಾನದಿಂದ ಇತರರ ಜೀವ ಉಳಿಸುವ ಪುಣ್ಯ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು ಎಂಬ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ವೈ. ಭರತ್ಶೆಟ್ಟಿ ಇವರು ಕರೆ ನೀಡಿದರು.
ದಿನಾಂಕ: 08-05-2020 ರಂದು ವಿಶ್ವ ರೆಡ್ಕ್ರಾಸ್ ದಿನ ಮತ್ತು ವಿಶ್ವ ಥಾಲಸೇಮಿಯಾ ದಿನದ ಅಂಗವಾಗಿ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಜಿಲ್ಲಾ ಗೃಹರಕ್ಷಕ ದಳ ದ.ಕ.ಜಿಲ್ಲೆ ಮತ್ತು ರಕ್ತನಿಧಿ ವೆನ್ಲಾಕ್ ಆಸ್ಪತ್ರೆ ಇದು ಸಹಯೋಗದೊಂದಿಗೆ ಈ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರವನ್ನು ಡಾ|| ಭರತ್ ಶೆಟ್ಟಿ ಇವರು ದೀಪಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವೆನ್ಲಾಕ್ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ|| ಶರತ್ ಕುಮಾರ್ ರಾವ್ ಇವರು ಭಾಗವಹಿಸಿದರು. ಸಮಾರಭದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳ ಇದರ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಇವರು ವಹಿಸಿದ್ದರು. ದ.ಕ.ಜಿಲ್ಲಾ ರೆಡ್ಕ್ರಾಸ್ ಘಟಕದ ಅಜಯ್ಕುಮಾರ್, ನಿತಿನ್, ಡಾ|| ನಿತಿನ್ ಆಚಾರ್ಯ, ಸಂತೋಷ್ ಪೀಟರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕ ದಳದ ಮಹೇಶ್, ದಿವಾಕರ್, ಸುನಿಲ್, ಜ್ಞಾನೇಶ್, ಜಯರಾಮ, ವಿನಯಚಂದ್ರ ರೈ, ಫಲಾಹರೇಶ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಗೃಹರಕ್ಷಕದಳದ ಸಿಬ್ಬಂದಿಗಳಾದ ರತ್ನಾಕರ್, ಅನಿತಾ, ಸುಲೋಚನಾ ಈ ಸಂದರ್ಭದಲ್ಲಿ ಹಾಜರಿದ್ದರು. ಸುಮಾರು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಮಾತನಾಡಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ರಕ್ತದಾನಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಕೋವಿಡ್-19 ಹಾವಳಿಯ ಸಂದರ್ಭದಲ್ಲಿ ರಕ್ತದ ಬ್ಯಾಂಕ್ಗಳಲ್ಲಿ ರಕ್ತದ ಅಭಾವ ಇರುವ ಕಾರಣದಿಂದ ಈ ಶಿಬಿರ ಅಯೋಜಿಸಲಾಗಿದ್ದು, ಸ್ವಯಂಪ್ರೇರಣೆಯಿಂದ ಗೃಹರಕ್ಷಕರು ರಕ್ತದಾನ ಮಾಡುವುದರ ಮೂಲಕ ಸಮಾಜದ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವುದು ಬಹಳ ಶ್ಲಾಘನೀಯ ಎಂದು ನುಡಿದರು.
ಸುಮಾರು 25 ಮಂದಿ ಗೃಹರಕ್ಷಕರು ರಕ್ತದಾನ ಮಾಡಿದರು. ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ|| ಜುಲ್ಫಿಕರ್, ಡಾ|| ಶ್ರೀ, ರಕ್ತನಿಧಿಯ ತಂತ್ರಜ್ಞರಾದ ಅಶೋಕ, ಮಂಜುನಾಥ, ಮಲ್ಲಿಕಾ ಮತ್ತು ಆಪ್ತಸಮಾಲೋಚಕರಾದ ಶ್ರೀಮತಿ ಶ್ರೀಲತಾ, ರಕ್ತನಿಧಿಯ ಮೇಲ್ವಿಚಾರಕರಾದ ಶ್ರೀ ಆಂಟೋನಿ ಡಿ’ಸೋಜ ಮುಂತಾದವರು ಈ ರಕ್ತದಾನ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.