(www.vknews.com) : ಪುತ್ತೂರು ಹೆಲ್ಪ್ ಲೈನ್ ವತಿಯಿಂದ ಸುಮಾರು 600 ಕುಟುಂಬಕ್ಕೆ ಕಿಟ್ ಕೊಡುವ ಎರಡನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿಯತು
ಲಾಕ್ ಡೌನ್ ನ ಈ ತುರ್ತು ಪರಿಸ್ಥಿತಿಯಲ್ಲಿ ಹಸಿದವರ ಹೊಟ್ಟೆ ತಣಿಸಲು ಮುಂದೆ ಬಂದಂತಹ ಹೆಲ್ಪ್ ಲೈನ್ ಪುತ್ತೂರು ತಂಡವು ದಾನಿಗಳ ಸಹಕಾರದಿಂದ ಪುತ್ತೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಸುಮಾರು 40 ದಿನಗಳಿಂದ ಜಾತಿ ಮತ ಭೇದವಿಲ್ಲದೆ ಒಟ್ಟು 450 ಲಾಕ್ ಡೌನ್ ಕಿಟ್ ಮೊದಲ ಹಂತವಾಗಿ ವಿತರಿಸಿದೆ.
ಮುಂದೆ ನಾವು ಈದ್ ಪ್ರಯುಕ್ತ 500 ಕುಟುಂಬಕ್ಕೆ ಈದ್ ಕಿಟ್ ವಿತರಿಸಲು ಮುಂದಾಗಿದ್ದೇವೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಮುಂದೆ ಸಮಸ್ಯೆ ಉಂಟಾದರೆ, ನಾವು ಲಾಕ್ ಡೌನ್ ಕಿಟ್ ಕೂಡ ಮುಂದುವರಿಸುವ ಯೋಜನೆಯಲ್ಲಿದ್ದೇವೆ.. ಸ್ವಾಗತ ನೆರವೇರಿಸಿ ಹೆಲ್ಪ್ ಲೈನ್ ನ ಕಾರ್ಯ ವೈಖರಿ ಬಗ್ಗೆ ಹೆಲ್ಪ್ ಲೈನ್ ಪುತ್ತೂರು ಎಡ್ಮಿನ್ ಸಾದಿಕ್ ಬರೆಪ್ಪಾಡಿ ವಿವರಿಸಿದರು..
ವೇದಿಕೆಯಲ್ಲಿ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು , ಪುತ್ತೂರು ನಗರ ಠಾಣೆಯ ಇನ್ಸ್ ಪೆಕ್ಟರ್ ತಿಮ್ನಪ್ಪ ನಾಯಕ್, ಪುತ್ತೂರು ಮುಸ್ಲಿಂ ಒಕ್ಕೂಟ ಸಂಚಾಲಕರಾದ ಅಶ್ರಫ್ ಕಲ್ಲೇಗ, ಕೊಂಬೇಟ್ಟು, ಶ್ರೀ ರಾಮ ಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ್ ಶೆಟ್ಟಿ , ಉದ್ಯಮಿಗಳಾದ ಝುಬೈರ್ ಪಿ.ಕೆ ಉಪಸ್ಥಿತರಿದ್ದರು .
ಹೆಲ್ಪ್ ಲೈನ್ ಪುತ್ತೂರು ಎಡ್ಮಿನ್ ಗಳಾದ ಬಶೀರ್ ಪರ್ಲಡ್ಕ, ಅಶ್ರಫ್ ಪಿ.ಕೆ, ಜಾಬಿರ್ ಅರಿಯಡ್ಕ , ಅಶ್ರಫ್ ಬಾವು, ಸಲೀಂ ಬರೆಪ್ಪಾಡಿ, ಅಶ್ರಫ್ ಅಳಕೆ, ನಿಝಾರ್ ದರ್ಬೆ , ರಹೀಮಾನ್ ಸಂಪ್ಯ, ವಿವಿಧ ಕಾರ್ಯ ನಿರ್ವಹಿಸಿದರು. ಹೆಲ್ಪ್ ಲೈನ್ ಸದಸ್ಯ ಬಶೀರ್ ಕೂರ್ನಡ್ಕ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.